Skip to main content
www.kallianpur.com | Email : kallianpur7@gmail.com | Mob : 9741001849

ದ.ಕ ಜಿಲ್ಲೆಯ ಆರು ಮಂದಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ.

By February 15, 2023February 20th, 2023Kannada News

(ಚಿತ್ರ / ವರದಿ : ತಾರ ರೋನ್ಸ್ ಬಂಟ್ವಾಳ್)

೨೦೨೨ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆ (ಆಂದೋಲನ ಪ್ರಶಸ್ತಿ)ಗೆ ಜಯಕಿರಣ ದೈನಿಕ ಆಯ್ಕೆ

ಮುಂಬಯಿ (ಆರ್‌ಬಿಐ), ಫೆ.೧೧: ಕರ್ನಾಟಕ ಮಾಧ್ಯಮ ಅಕಾಡೆಮಿ ೨೦೨೦, ೨೦೨೧ ಮತ್ತು ೨೦೨೨ನೇ ಸಾಲಿನ ಮಾಧ್ಯಮ ವಾರ್ಷಿಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಸುಮಾರು೧೪೫ ಸಾಧಕ ಪತ್ರಕರ್ತರಿಗೆ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಿರಿಯ ಪತ್ರಕರ್ತರಾದ ಕೆ.ಆನಂದ ಶೆಟ್ಟಿ (ಹೊಸದಿಗಂತ), ಪಿ.ಬಿ. ಹರಿಪ್ರಸಾದ್ ರೈ (ವಿಜಯವಾಣಿ),ಗುರುವಪ್ಪ ಬಾಳೆಪುಣಿ (ಹೊಸದಿಗಂತ), ಆರ್. ರಾಮಕೃಷ್ಣ (ಸಂಯುಕ್ತ ಕರ್ನಾಟಕ), ಬಿ. ರವೀಂದ್ರ ಶೆಟ್ಟಿ (ವಿಜಯ ಕರ್ನಾಟಕ), ಹಿರಿಯ ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ (ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಲತಃ ಗಿರೀಶ್ ರಾವ್ (ಜೋಗಿ) ೨೦೧೯ನೇ ಸಾಲಿನ ಅರಗಿಣಿ ಪ್ರಶಸ್ತಿಗೆ ಹಾಗೂ ಬಿ.ವಿ ಸುರೇಶ್ ಬೆಳಗಜೆ ಮತ್ತು ಎಸ್.ರವಿ ಪ್ರಕಾಶ್ (ಪ್ರಜಾವಾಣಿ), ಸುಧಾಕರ ದರ್ಬೆ (ಕನ್ನಡಪ್ರಭ), ಸುಕನ್ಯ (ಟಿವಿ೯) ಜ್ಯೋತಿ ಇರ್ವತ್ತೂರು ಇವರೂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೈಸೂರು ದಿಗಂತ ಪ್ರಶಸ್ತಿ ಪ್ರದೀಶ್ ಹೆಚ್.ಮರೋಡಿ ಇವರ ಲೇಖನಕ್ಕೆ ಲಭಿಸಿದೆ. ಜಯಕಿರಣ ದೈನಿಕವು ೨೦೨೨ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿಗೆ ಆಯ್ಕೆಯಾಗಿದೆ.

ವಾರ್ಷಿಕ ಪ್ರಶಸ್ತಿ ಪುರಸ್ಕöÈತರಿಗೆ ತಲಾ ೨೫ ಸಾವಿರ ರೂ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ಸಚಿವರ ಉಪಸ್ಥಿತಿಯಲ್ಲಿ ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ನೆರವೇರಿಸಲಾಗುವುದು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೈಣೈ ತಿಳಿಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.