
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್ಬಿಐ), ಮಾ.೨೯: ಮುಂಬಯಿಯ ರಂಗಭೂಮಿ ಕ್ಷೇತ್ರಕ್ಕೆ ಮಾತೃ ಸಂಸ್ಥೆ ಅನಿಸಿರುವ ಕನ್ನಡ ಕಲಾ ಕೇಂದ್ರ ಮುಂಬಯಿ ಇಂದಿಲ್ಲಿ ಶನಿವಾರ ಸಂಜೆ ಸಯಾನ್ ಪೂರ್ವದ ನಿತ್ಯಾನಂದ ಸಭಾಗೃಹದಲ್ಲಿ ವರ್ಷಂಪ್ರತಿಯಂತೆ ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸಿತು.
ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂದನ ಟಿ.ಆರ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜರ್ನಿ ಥಿಯೇಟರ್ ಗ್ರೂಪ್ ಪ್ರಕಾಶನದ ಪ್ರಸಿದ್ದ ರಂಗಕರ್ಮಿ ನಾರಾಯಣ ಶೆಟ್ಟಿ ನಂದಳಿಕೆ ರಚಿತ ನಾಲ್ಕು ತುಳು ಏಕಾಂಕ ನಾಟಕಗಳ ಸಂಚಯ ‘ರಂಗತುಪ್ಪೆ’ ಕೃತಿಯನ್ನು ಫೆಡರೇಶನ್ ಆಫ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ ಇದರ ಉಪಾಧ್ಯಕ್ಷ, ಹಿತ್ಯಾಭಿಮಾನಿ, ಬಾಂಬೇ ಬಂಟ್ಸ್ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷ ಶ್ಯಾಮ್ ಎನ್.ಶೆಟ್ಟಿ ಕೃತಿಯನ್ನು ಬಿಡುಗಡೆಗೊಳಿಸಿದರು. ಶ್ರೀ ಉಮಾ ಮಹೇಶ್ವರೀ ದೇವಸ್ಥಾನ ಜೆರಿಮೆರಿ ಇದರ ಪ್ರಧಾನ ಆರ್ಚಕ ಶ್ರೀನಿವಾಸ ಎನ್.ಉಡುಪ ಶುಭ ಶಂಸನಗೈದರು. ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ ಕೃತಿ ಪರಿಚಯಿಸಿದರು.
ಕಾರ್ಯಕ್ರಮದ ಅಂಗವಾಗಿ ಹಿರಿಯ ರಂಗಕರ್ಮಿಗಳಿಂದ ‘ನನ್ನ ರಂಗಾನುಭವ’ ಸಂವಾದ ನಡೆಸಲಾಗಿದ್ದು ರಂಗಕರ್ಮಿಗಳಾದ ಮನೋಹರ ಶೆಟ್ಟಿ ನಂದಳಿಕೆ, ತಾರಾ ಬಂಗೇರ, ರವಿ ಎಸ್.ಶೆಟ್ಟಿ, ಜಿ.ಕೆ.ಕೆಂಚನಕೆರೆ, ಭಾಸ್ಕರ್ ಸುವರ್ಣ ಸಸಿಹಿತ್ಲು ಪಾಲ್ಗೊಂಡು ರಂಗಭೂಮಿಯಲ್ಲಿನ ತಮ್ಮ ಹಲವಾರು ದಶಕಗಳ ಅನುಭವಗಳ ನ್ನು ಹಂಚಿಕೊಂಡರು. ಗೌ| ಪ್ರ| ಕಾರ್ಯದರ್ಶಿ ರಮೇಶ್ ಬಿರ್ತಿ ಸಂವಾದವನ್ನು ನಿರ್ವಹಿಸಿದರು.
ವಾಸು ಜೆ.ಮೊಲಿ ಪ್ರಾರ್ಥನೆಯನ್ನಾಡಿದರು. ಕಲಾ ಕೇಂದ್ರದ ಗೌ| ಪ್ರ| ಕಾರ್ಯದರ್ಶಿ ರಮೇಶ್ ಬಿರ್ತಿ ಸ್ವಾಗತಿಸಿದರು. ಸಾದಯಾ ಕಾರ್ಯಕ್ರಮ ನಿರೂಪಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.