Skip to main content
www.kallianpur.com | Email : kallianpur7@gmail.com | Mob : 9741001849

ಸೆ.೨೮: ನಿಟ್ಟೆ ವಿಶ್ವವಿದ್ಯಾಲಯದ ತುಳು ದಿನ ೨೦೨೪ ಆಚರಣೆಯಲ್ಲಿ ಟೀಂ ಐಲೇಸಾದ ಕೊರಗ ಹಾಡು ಕೂಜಿನ ಪಾಟು ಬಿಡುಗಡೆ.

By September 24, 2024News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಸೆ.೨೪: ಮಂಗಳೂರು ಅಲ್ಲಿನ ನಿಟ್ಟೆ ವಿಶ್ವ ವಿದ್ಯಾಲಯವು ಇದೇ ಸೆ.೨೮ನೇ ಶನಿವಾರ ತುಳು ದಿನ  ಮತ್ತು ತುಳುವಿನ ಪ್ರಸಿದ್ಧ ಕವಿ ಡಾ| ಅಮೃತ ಸೋಮೇಶ್ವರ  ಅವರ ನೆನಪಿನಲ್ಲಿ ‘ಅಮೃತ ನೆಂಪು’ ಆಚರಿಸಲಿದ್ದು  ಆ ಸಂದರ್ಭದಲ್ಲಿ ಐಲೇಸಾ  ದಿ ವಾಯ್ಸ್  ಆಫ್ ಓಷನ್ (ರಿ.) ಪ್ರಸ್ತುತಿಯ ಕೊರಗ ಭಾಷೆಯ ಮೊತ್ತ ಮೊದಲ  ‘ಕೂಜಿನ ಪಾಟು’ ಎಂಬ ಹಾಡ ಬಿಡುಗಡೆ ಮಾಡಲಿದೆ.   ಇದೆ ಸಂದರ್ಭದಲ್ಲಿ  ಅಮೃತರ ನೆನಪಿನಲ್ಲಿ  ಅವರ ಕೈಬರಹದ ಗ್ರಂಥ  ಗೊಂಚಲನ್ನು  ನಿಟ್ಟೆ ವಿಶ್ವವಿದ್ಯಾಲಯಕ್ಕೆ  ಹಸ್ತಾಂತರಿಸಲಿದೆ.

ನಿಟ್ಟೆ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಪ್ರೊಫೆಸರ್ ಡಾ| ಸತೀಶ್ ಕುಮಾರ್ ಭಂಡಾರಿ  ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಅತಿಥಿಗಳಾಗಿ ಅಮೃತ ಸೋಮೇಶ್ವರ ಅವರ  ಸುಪುತ್ರ, ಸಾಹಿತಿ  ಡಾ| ಚೇತನ್ ಸೋಮೇಶ್ವರ್, ನಿಟ್ಟೆ ವಿಶ್ವ  ವಿದ್ಯಾಲಯದ ಪ್ರೊಫೆಸರ್ ಡಾ| ಗೋಪಾಲ್ ಮುಗೆರಾಯ   ಮತ್ತು  ಖ್ಯಾತ ಕನ್ನಡ ತುಳು  ಸಂಗೀತ ನಿರ್ದೇಶಕ ವಿ.ಮನೋಹರ್ ಭಾಗವಹಿಸಲಿದ್ದಾರೆ  ಎಂದು  ನಿಟ್ಟೆ ವಿವಿ ಪ್ರಾಂಶುಪಾಲ ಡಾ| ನಿರಂಜನ್ ಎನ್  ಚಿಪ್ಲೂಣ್ಕರ್  ಮತ್ತು ನಿಟ್ಟೆ ವಿಶ್ವ ವಿದಾಲಯದ ಕುಲಸಚಿವ ಪ್ರೊಫೆಸರ್ ಡಾ| ಹರ್ಷ ಹಾಲಹಳ್ಳಿ ತಿಳಿಸಿದ್ದಾರೆ.

ನಿಟ್ಟೆ ವಿಶ್ವವಿದ್ಯಾಲಯದ  ಡಾ| ಸಾಯಿಗೀತಾ ಹೆಗ್ಡೆ , ಶಶಿಕುಮಾರ್ ಶೆಟ್ಟಿ , ಡಾ| ನರಸಿಂಹ ಬೈಲ್ಕೇರಿ ಮತ್ತು ಐಲೇಸಾ ಇದರ ಸಾರಥಿ  ಡಾ| ರಮೇಶ್ಚಂದ್ರ ಅನಂತ್ ರಾವ್, ಕವಿ  ಶಾಂತಾರಾಮ್ ಶೆಟ್ಟಿ ಕಾರ್ಯಕ್ರಮವನ್ನು ಜಂಟಿಯಾಗಿ ಸಂಯೋಜಿಸಲಿದ್ದು  ತಾಂತ್ರಿಕ ಹಿನ್ನಲೆಯನ್ನು ಗೋಪಾಲ್ ಪಟ್ಟೆ ಮತ್ತು ವಿವೇಕಾನಂದ ಮಂಡೆಕರ ನಿರ್ವಹಿಸಲಿದ್ದಾರೆ. ಐಲೇಸಾ ಇದರ ಗಾಯಕರುಗಳಾದ ಸುಧಾಕರ್ ಶೆಟ್ಟಿ ಡಾ| ಸುಶೀಲಾ,  ಪ್ರಕಾಶ್ ಪಾವಂಜೆ, ಆತ್ಮಾರಾಮ್ ಆಳ್ವ,  ಸುಮಾಕೋಟೆ, ಅಜೇಶ್  ಚಾರ್ಮಾಡಿ  ಇವರು ಅಮೃತ ಸೋಮೇಶ್ವರ ಅವರ ಸಾಹಿತ್ಯದ ಹಾಡುಗಳನ್ನು ಹಾಡಲಿದ್ದಾರೆ. ಪಳ್ಳಿ ವಿಶ್ವನಾಥ್ ಶೆಟ್ಟಿ,  ನರೇಂದ್ರ ಕಬ್ಬಿನಾಲೆ  ಇವರ ಸಹಕಾರದೊಂದಿಗೆ ಕಾರ್ಯ ಕ್ರಮ ನಡೆಯಲಿದೆಎಂದು  ಐಲೇಸಾ  ಮಾಧ್ಯಮ ಸಂಚಾಲಕ  ಸುರೇಂದ್ರ ಮಾರ್ನಾಡು  ತಿಳಿಸಿದ್ದಾರೆ .

ಕೂಜಿನ ಪಾಟು ಪ್ರಪ್ರಥಮ ಕೊರಗ ಭಾಷೆಯ ಹಾಡು:
ಕೂಜಿನ ಪಾಟು  ಹೆಣ್ಣು ಮಗುವಿನ ಜನನವನ್ನು  ಸಂಭ್ರಮಿಸುವ  ಹಾಡು ಆಗಿದ್ದು  ತುಳುನಾಡ ಆದಿಮೂಲ ಜನಾಂಗ ವಾದ ಪೂರ್ಣ ಪ್ರಮಾಣದಲ್ಲಿ ಕೊರಗ ಭಾಷೆಯ ಮೊದಲ ಹಾಡಾಗಿ ಬಿಡುಗಡೆ ಆಗಲಿದೆ. ಕೊರಗ ಸಾಹಿತ್ಯದಲ್ಲಿ ವಿಶೇಷ  ಕೃಷಿ ಮಾಡಿದ  ಪಾಂಗಾಳ ಬಾಬು ಕೊರಗ ಈ ಹಾಡಿಗೆ ಅತ್ಯುತ್ತಮ ಸಾಹಿತ್ಯ ನೀಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ  ವಿ.ಮನೋಹರ್ ಅವರು ಬುಡಕಟ್ಟು ಜನಾಂಗದ  ಮೂಲ ಸಂಗೀತವನ್ನೇ  ಅಳವಡಿಸಿದ್ದು ಹಾಡು  ಮಂಗಳೂರುನ  ಉದಯೋನ್ಮುಖ ಗಾಯಕ  ಚೇತನ್  ಖುಷಿ ಕುಲಾಲ್  ಇವರ ಧ್ವನಿಯಲ್ಲಿ  ಮಧುರವಾಗಿ ಮೂಡಿ ಬಂದಿದೆ . ತುಳುನಾಡಿನ ಅಂಗಭಾಷೆಯಾಗಿರುವ  ಕೊರಗ ಭಾಷೆಯನ್ನು ಉಳಿಸುವ, ಬೆಳೆಸುವ ಸಲುವಾಗಿ ಈ ಹಾಡನ್ನು ಷ್ನೇಯ್ಡರ್ ಎಲೆಕ್ಟ್ರಿಕ್ ಗ್ರೂಪ್‌ನ ಜನರಲ್ ಕೌನ್ಸೆಲ್ ಆಗಿರುವ   ಕಿಶೋರ್ ಶೆಟ್ಟಿ   ಐಲೇಸಾ ಸಂಸ್ಥೆಯ ಮೂಲಕ  ಪ್ರಾಯೋಜಿಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.