Skip to main content
www.kallianpur.com | Email : kallianpur7@gmail.com | Mob : 9741001849

ಮೂಡಬಿದ್ರೆ ಐದು ದಿನಗಳ ಪಂಚ ಕಲ್ಯಾಣ ಮಹೋತ್ಸವ ವೈಭವ.

By February 22, 2025Kannada News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಫೆ.21: ಐದು ದಿನ ಗಳ ಪಂಚ ಕಲ್ಯಾಣ ಮಹೋತ್ಸವ  ವೈಭವ ದಿಂದ ಹಮ್ಮಿಕೊಳ್ಳಲಾಗಿದ್ದು, ನಾಲ್ಕನೇ ದಿನ ರಾಜ್ಯಾಭಿಷೇ ಕ ಕಲ್ಯಾಣ ದೀಕ್ಷಾ ಕಲ್ಯಾಣ ದಿನವಾದ ಫೆ.20 ರಂದು ಗುರುವಾರ ಸಂಜೆ ಚಾರಿತ್ರ ಚಕ್ರವರ್ತಿ 108 ಶಾಂತಿ ಸಾಗರ ಮುನಿ ಮಹಾರಾಜ್ ಆಚಾರ್ಯ ಪದರೋಹಣ ಶತಾಬ್ದಿ ಮಹೋತ್ಸವ ಹಾಗೂ ಆಚಾರ್ಯ 108 ವಿದ್ಯಾನಂದ ಮುನಿ ಮಹಾ ರಾಜ್ ಜನ್ಮ ಶತಾಬ್ದಿ ಮಹೋತ್ಸವದ ಕಾರ್ಯಕ್ರಮ

ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅಧ್ಯಕ್ಷತೆ ಮತ್ತು ಜಗದ್ಗುರು ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಿದರು.

ಗೋಪಾಲಕೃಷ್ಣಮಾತನಾಡಿ ಜೈನ ಧರ್ಮ ಸರ್ವ ಧರ್ಮದ ಜೊತೆ  ಉತ್ತಮ ಭಾಂಧವ್ಯ ಹೊಂದಿದೆ ಅಹಿಂಸೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದೆ ಆಚಾರ್ಯ ವಿದ್ಯಾನಂದರು ದೇಶದ ನಾನಾ ಭಾಗಗಳಲ್ಲಿ ಧರ್ಮ ಪ್ರಚಾರ ಮಾಡಿ ವಿಶ್ವ ಸಂತರಾಗಿದ್ದಾರೆ. ಮೂಡುಬಿದಿರೆ ಸ್ವಾಮೀಜಿ ಕುಗ್ರಾಮದಲ್ಲಿ ಧರ್ಮ ಪ್ರಭಾವ ಮಾಡುತ್ತೀರುದು ಸಂತೋಷ ಎಂದರು. ಸ್ವಾಮೀಜಿ ಧ್ವಯರು ಶಾಸಕರು, ದಾನಿಗಳು ಗಣ್ಯರನ್ನು ಸನ್ಮಾನಿಸಿ ಹರಸಿ ಆಶೀರ್ವಾದಿಸಿದರು.

ಪಂಚ ಕಲ್ಯಾಣ ಸಮಿತಿ ಅಧ್ಯಕ್ಷ ವಿಜಯೇಂದ್ರ ಚಕ್ಕೊಡು ಶುಭ ಹಾರೈಸಿದರು. ನಾಗರಾಜ್ ಬೊಬ್ಬಿಗೆ ಸ್ವಾಗತಿಸಿದರು. ಹುಂಚ ಸ್ವಾಮೀಜಿ ಆಶೀರ್ವಾದ ನೀಡಿ ಪಂಚ ಕಲ್ಯಾಣದಲ್ಲಿ ಪರಮಾತ್ಮರ ಗುಣಗಾನ ಪ್ರತಿಷ್ಠಾಪನೆ ನಡೆಯುತ್ತದೆ ಎಂದರು. ಸವಳ್ನಾಡು ಸೀಮೆ ಗುರುಗಳು  ಅಧ್ಯಕ್ಷ ತೆ ವಹಿಸಿದ

ಮೂಡುಬಿದಿರೆ ಸ್ವಾಮೀಜಿ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ತ್ಯಾಗ ಹಾಗೂ ತ್ಯಾಗಿಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಧರ್ಮ  ಹಾಗೂ ಧಾರ್ಮಿಕ ಭಾವನೆ ಸರ್ವ ಜೀವ ದಯಾ ಪರವಾಗಿದೆ. ಬದುಕು ಬದುಕಲು ಬಿಡಿ ಅನ್ನುವ ಸಂದೇಶ ಸರ್ವ ರನ್ನು ಸಮಾನತೆ ಯಲ್ಲಿ ಕಾಣುವ ಸರ್ವೋದಯ ಧರ್ಮ ತೀರ್ಥದ ಕೊಡುಗೆ ತೀರ್ಥoಕರ ಕೊಡುಗೆ ಎಂದರು.

ಎಸ್ ಎಲ್  ನಾಗರಾಜ್ ಬೊಬ್ಬಿಗೆ ಸ್ವಾಗತಿಸಿದರು, ಎಸ್ ಎಲ್ ನಾಗರಾಜ್ ಸಸಿ ಗೊಳ್ಳಿ, ಜಿ.ಟಿ ಸತ್ಯ ನಾರಾಯಣ ಕರೂರ್, ಪ್ರೇಮಾ ಸಂತೋಷ್ ಭಾನು ಕುಳಿ ಉಪಾಧ್ಯಕ್ಷರು ತುಮರಿ ಗ್ರಾಮ ಪಂಚಾಯತು ಶಿವ ಮೊಗ್ಗ ಯಶೋಧರ್ ಹೆಗ್ಡೆ, ರತ್ನ ಕುಮಾರ್ ಹಾಳು ಸಸಿ ಉಪಸ್ಥಿತರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.