
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಆ.೧೫: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿಭಾವ ಮತ್ತು ಭಾರೀ ಉತ್ಸಾಹದೊಂದಿಗೆ ಆಚರಿಸುತ್ತಿದ್ದು, ಸಯಾನ್ನಲ್ಲಿನ ಗೋಕುಲ ಸಂಕುಲದಲ್ಲಿನ ಪ್ರತಿಷ್ಠಾಪಿತ ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಇಂದು ಶುಕ್ರವಾರ ಮತ್ತು ನಾಳೆ ಶನಿವಾರ ಎರಡು ದಿನಗಳಲ್ಲಿ ಸಂಭ್ರಮೋಲ್ಲಾಸ ದಿಂದ ಆಚರಿಸಲ್ಪಡುವ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲ್ಲ ಪಿಂಡಿ ಉತ್ಸವಕ್ಕೆ ಇಂದಿಲ್ಲಿ ಸಂಜೆ ಭವ್ಯವಾಗಿ ಚಾಲನೆಯನ್ನೀಡಲಾಯಿತು.
ಗೋಕುಲದ ಶತಮಾನೋತ್ಸವ ವರ್ಷಾಚರಣೆಯ ಶುಭಾವಸರದಿ ಉತ್ಸಾಹ, ಸೃಜನಶೀಲತೆ ಮತ್ತು ಭಕ್ತಿ ತೀವ್ರತೆಯೊಂದಿಗೆ ಸಂಭ್ರಮಿಸ ಲಾಗುತ್ತಿದ್ದು ಸಂಜೆ ಉತ್ಸವಕ್ಕಾಗಿ ಗೋಕುಲದ ಪ್ರಧಾನ ಆರ್ಚಕ ವೇ| ಮೂ| ಶ್ರೀನಿವಾಸ ಭಟ್ ಧರೆಗುಡ್ಡೆ ವೈಧಿಕತ್ವದಲ್ಲಿ ದೇವಾಲಯ ತೆರೆದು ಪ್ರಾರ್ಥನೆ, ಮಂಗಳಾರತಿ ನೆರವೇರಿಸಿ ಉತ್ಸವ ಆದಿಗೊಳಿಸಲಾಯಿತು. ಬಳಿಕ ರಾತ್ರಿ ತನಕ ಡೊಗ್ಗಲು ಕೃಷ್ಣ ದೇವರಿಗೆ ೧೦೮ ಬೆಳ್ಳಿಯ ಕಳಶಾಭಿಷೇಕ ನಡೆಸಲಾಗಿ ನಿತ್ಯ ಪೂಜೆ ನೆರವೇರಿಸಲಾಗಿದ್ದು ಗೋಕುಲದ ಆರ್ಚಕ ಗಣೇಶ್ ಭಟ್ ದೇವರ ಅಲಂಕಾರಗೈದು ಸಹ ಆರ್ಚಕ ರೊಂದಿಗೆ ವಿವಿಧ ಪೂಜೆಗಳನ್ನು ನೆರವೇರಿಸಿದ್ದು ಭಕ್ತಾದಿಗಳು ಕುಟುಂಬ ಸಹಿತ ಆಗಮಿಸಿ ಶ್ರೀ ಕೃಷ್ಣನಿಗೆ ಕಲಶಾಭಿಷೇಕಗೈದರು. ಆರ್ಚಕರು ರಜತಕಲಶವನ್ನು ಪ್ರಸಾದ ರೂಪವಾಗಿ ನೀಡಿ ಹರಸಿದರು. ಜಿಪಿಟಿ ಕಾರ್ಯಾಧ್ಯಕ್ಷ – ಟ್ರಸ್ಟಿ ಡಾ| ಸುರೇಶ್ ಎಸ್.ರಾವ್ ಕಟೀಲು (ವಿಜಯಲಕ್ಷ್ಮೀ ಸುರೇಶ್ ರಾವ್) ಹಾಗೂ ಟ್ರಸ್ಟಿ, ಕಾರ್ಯದರ್ಶಿ ಎ.ಪಿ.ಕೆ ಪೋತಿ (ಡಾ| ಸಹನಾ ಎ.ಪೋತಿ) ದಂಪತಿಗಳು ಪೂಜೆಯ ಯಜಮಾನತ್ವ ವಹಿಸಿದ್ದರು.
ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲ್ಲ ಪಿಂಡಿ ಉತ್ಸವಕ್ಕೆ ಗೋಕುಲದಲ್ಲಿ ಕೃಷ್ಣನಿಗೆ ಪ್ರಿಯವಾದ ಚಕ್ಕುಲಿ, ನಿಪ್ಪಟ್ಟು ತಿನಿಸು ಗಳೊಂದಿಗೆ ಅವಲಕ್ಕಿ ಲಡ್ಡು ಸಹಿತ ದೇವಕಿನಂದನ ಗೋಪಾಲನ ನೂರೆಂಟು ನಾಮಗಳಂತೆ ೧೦೮ ಬಗೆಯ ಲಡ್ಡೂ (ಉಂಡೆಗಳನ್ನು) ಸಿದ್ಧಪಡಿಸಲಾಗಿತ್ತು. ಗೋಕುಲ ಭಜನಾ ಮಂಡಳಿ ಸಯಾನ್ ಭಕ್ತರನ್ನೊಳಗೊಂಡು ಭಜನೆ ನಡೆಸಿತು. ಹರೀಶ್ ಪೂಜಾರಿ ಮತ್ತು ತಂಡವು ಸ್ಯಾಕ್ಸೋಫೋನ್ ವಾದನ ಹಾಗೂ ವಿದೂಷಿ ನಂದಿನಿ ರಾವ್ ಗುಜರ್ ತಂಡವು ಭಕ್ತಿಗೀತೆಗಳ ಭಕ್ತಿ ಸಂಗಮ ಪ್ರಸ್ತುತ ಪಡಿಸಿತು. ರಾತ್ರಿ ವಿಷ್ಣು ಸಹಸ್ರನಾಮ, ಶ್ರೀಕೃಷ್ಣಾಷ್ಟೋತ್ತರ ಪಠಣ, ಮಧ್ಯರಾತ್ರಿ ಜನ್ಮಾಷ್ಟಮಿ ಪೂಜೆ ಮತ್ತು ಅರ್ಘ್ಯ ಸೇವೆಯೊಂದಿಗೆ ತೀರ್ಥ ಪ್ರಸಾದ ವಿತರಿಸಿ ವಾರ್ಷಿಕ ಶ್ರೀಕೃಷ್ಣ ಜನ್ಮಾಷ್ಟಮಿಗೆ ಶುಭಾರಂಭ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರದ ರಾಷ್ಟ್ರೀಯ ತನಿಖಾ ಕರ್ತೃತ್ವ (ಎನ್ಐಎ) ಸಂಸ್ಥೆಯ ವಿಶೇಷ ವ್ಯಾಜ್ಯದಾರ ಮತ್ತು ಕಪಸಮ ಸಲಹಾ ಸಮಿತಿಯ ಹಿರಿಯ ಸಲಹೆಗಾರ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಪಿ.ಎಸ್ ಕಾರಂತ್ ವಾಪಿ, ಜಿಪಿಟಿ ಗೌರವ ಟ್ರಸ್ಟಿಗಳಾದ ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಶೈಲಿನಿ ಎ.ರಾವ್, ಕೆ.ಸಿ ಕುಮಾರ್, ಆರ್.ಎಲ್ ಭಟ್ ಜೆರಿಮೆರಿ, ಮಧುಸೂದನ ಅಗರ್ವಾಲ್, ಅನಿಲ್ ಗುಪ್ತ ಸೇರಿದಂತೆ ಬಿಎಸ್ಕೆಬಿಎ ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳಾ ಮತ್ತು ಅವಿನಾಶ್ ಶಾಸ್ತ್ರಿ, ಕೋಶಾಧಿಕಾರಿ ಸಿಎ| ಹರಿದಾಸ ಭಟ್, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಮತ್ತು ವೈ.ಮೋಹನ್ರಾಜ್, ಜೊತೆ ಕೋಶಾಧಿಕಾರಿ ಗಣೇಶ್ ಭಟ್ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು, ಅಪಾರ ಭಕ್ತರು ಉಪಸ್ಥಿತರಿದ್ದು ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿದರು.
ಗೋಕುಲದಲ್ಲಿ ೧೦೮ ಉಂಡೆಗಳ ವೈಶಿಷ್ಟ ತೆ ; ಭಕ್ತಾದಿಗಳಿಗೆ ರುಚಿಕರ ಲಡ್ಡೂ ಸವಿಯುವ ಅವಕಾಶ: ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣ ನಿಗೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಭಕ್ತಾದಿಗಳಿಗೆ ವೈವಿಧ್ಯಮಯ ರುಚಿಕರ ಉಂಡೆಗಳ ಸವಿ ಯುವ ಅವಕಾಶವಾಗಿಸಿ ಈ ಬಾರಿ೧೦೮ ಬಗೆಯ ಲಡ್ಡೂ (ಉಂಡೆಗಳನ್ನು) ಸಿದ್ಧಪಡಿಸಲಾಗಿದೆ ಎಂದು ಜಿಪಿಟಿ ಕಾರ್ಯಾಧ್ಯಕ್ಷ-ಟ್ರಸ್ಟಿ ಡಾ| ಸುರೇಶ್ ರಾವ್ ಕಟೀಲು ಮತ್ತು ಗೌರವ ಟ್ರಸ್ಟಿಗಳು ತಿಳಿಸಿದರು. ಭಾರೀ ಸಂಖ್ಯೆಯ ಭಕ್ತರ ಬೇಡಿಕೆಯ ಕಾರಣ ಅತ್ಯಲ್ಪ ಮೊತ್ತವನ್ನು ಇರಿಸ ಲಾಗಿದೆ. ನಿಜವಾದ ಬೆಲೆಕ್ಕಿಂತ ತೀರ ಕಡಿಮೆ ಬೆಲೆಗೆ ಉಂಡೆಗಳನ್ನು ಒದಗಿಸಲಾಗು ವುದು. ಉಂಡೆಗಳು ಈ ಕೆಳಗಿನಂತೆ ಸಿದ್ಧಪಡಿಸಲಾಗಿದೆ ಎಂದು ಕಾರ್ಯದರ್ಶಿ ಎ.ಪಿ.ಕೆ ಪೋತಿ ತಿಳಿಸಿದರು.
೧೦೮ ಲಡ್ಡೂ (ಉಂಡೆಗಳು):
೦೧. ಶೇಂಗಾ ಉಂಡೆ, ೦೨. ಹೆಸರುಕಾಳು ಉಂಡೆ, ೦೩. ಗೋಡಂಬಿ ಉಂಡೆ, ೦೪. ಕಡಲೆ ಉಂಡೆ, ೦೫. ಕಪ್ಪುಎಳ್ಳು ಉಂಡೆ, ೦೬. ಬಿಳಿಎಳ್ಳು ಉಂಡೆ, ೦೭. ಗುಂಡಿಟ್ಟು ಉಂಡೆ, ೦೮. ರವಾ ಉಂಡೆ, ೦೯. ಬೇಸನ್ ಉಂಡೆ, ೧೦.ಅರಳು ಉಂಡೆ, ೧೧.ಶುಂಠಿ ಉಂಡೆ, ೧೨. ಗೋಧಿಹಿಟ್ಟು ಉಂಡೆ, ೧೩. ಪೂರ್ಣ ಪುಕ್ಕಲಕ್ಕಿ ಉಂಡೆ. ೧೪.ಮನೋಹರ ಉಂಡೆ, ೧೫. ಮೋತಿಚೂರ್ ಉಂಡೆ, ೧೬. ದ್ವಿಗುಣ ಕಾಳು ಉಂಡೆ, ೧೭.ಬೂಂದಿ ಉಂಡೆ, ೧೮. ಗರಿ ಉಂಡೆ, ೧೯. ತಿರುಪತಿ ಉಂಡೆ, ೨೦. ಖಾರಕಡ್ಡಿ ಉಂಡೆ, ೨೧.ಶೇವು ಉಂಡೆ, ೨೨.ಶೇವಿಗೆ ಉಂಡೆ, ೨೩.ಬಾದಾಮಿ ಉಂಡೆ, ೨೪.ಪಿಸ್ತಾ ಉಂಡೆ, ೨೫.ಬಾದಾಮಿ-ಪಿಸ್ತಾ ಉಂಡೆ, ೨೬.ಹೆಝೆಲ್ನಟ್ ಉಂಡೆ, ೨೭.ಚೆಸ್ನಟ್ ಉಂಡೆ, ೨೮.ಉತ್ತುಟ್ಟೆ ಉಂಡೆ, ೨೯೮.ಖರ್ಜೂರ ಉಂಡೆ, ೩೦.ಅಂಜೂರ ಉಂಡೆ, ೩೧.ಬಾದಾಮಿ ಅಂಜೂರ ಉಂಡೆ, ೩೨.ಗೋಡಂಬಿ ಖರ್ಜೂರ ಉಂಡೆ, ೩೩.ಒಣ ದ್ರಾಕ್ಷಿ ಉಂಡೆ, ೩೪.ಒಣ ಬೀಜ ಉಂಡೆ, ೩೫.ಒಣಹಣ್ಣು ಉಂಡೆ, ೩೬.ಆಂತಿನ ಉಂಡೆ, ೩೭.ಅಖ್ರೋಟ್ ಉಂಡೆ, ೩೮.ಗಸಗಸೆ ಉಂಡೆ, ೩೯.ತುರಿ ಕೊಬ್ಬರಿ ಉಂಡೆ, ೪೦.ತೆಂಗಿನಕಾ ಉಂಡೆ, ೪೧.ರಾಗಿ ಹಿಟ್ಟು ಉಂಡೆ, ೪೨.ಉದ್ದಿನ ಹಿಟ್ಟು ಉಂಡೆ, ೪೩.ಅಕ್ಕಿಹಿಟ್ಟು ಉಂಡೆ, ೪೪.ಮೆಕ್ಕೆಜೋಳ ಹಿಟ್ಟು ಉಂಡೆ, ೪೫. ಗೋದಿಹಿಟ್ಟು ಕಡಲಿ ಉಂಡೆ, ೪೬.ಅಕ್ಕಿ ಉಂಡೆ, ೪೭.ಪಂಚರತ್ನ ಉಂಡೆ, ೪೮.ಸಿರಿಧಾನ್ಯ ಉಂಡೆ, ೪೯.ತೊಗರಿಕಾಳು ಉಂಡೆ, ೫೦.ಹುರಳಿಕಾಳು ಉಂಡೆ, ೫೧.ಉರಿಕಡಲೆ ಉಂಡೆ, ೫೨. ಮೆಂತ್ಯಕಾಳು ಉಂಡೆ, ೫೩.ಕರಿಮೆಣಸು ಉಂಡೆ, ೫೪.ಬಿಳಿ ಮೆಣಸು ಉಂಡೆ, ೫೫.ಕಲ್ಲುಸಕ್ಕರೆ ಉಂಡೆ, ೫೬.ಪೂರ್ಣ ಗೋಧಿ ಉಂಡೆ, ೫೭.ಪೂರ್ಣ ಉದ್ದಿನ ಉಂಡೆ, ೫೮.ಕಪ್ಪು ಉದ್ದಿನ ಉಂಡೆ, ೫೯.ಅವಲಕ್ಕಿ ಉಂಡೆ, ೬೦.ಕೆಂಪು ಅವಲಕ್ಕಿ ಉಂಡೆ, ೬೧.ಅವಲಕ್ಕಿ ಗೋಧಿಹಿಟ್ಟು ಉಂಡೆ, ೬೨.ಅವಲಕ್ಕಿ ಖೋವಾ ಉಂಡೆ, ೬೩.ಮೆಕ್ಕೆಜೋಳ ಅವಲಕ್ಕಿ ಉಂಡೆ, ೬೪.ನೆಂದ್ರಹಣ್ಣು ಉಂಡೆ, ೬೫.ಸೇಬು ಉಂಡೆ, ೬೬.ಪೇರಲೆ ಉಂಡೆ, ೬೭.ಸ್ಟ್ರಾಬೆರಿ ಉಂಡೆ, ೬೮.ಸಪೋಟಾ ಉಂಡೆ, ೬೯.ಅನಾನಸ್ ಉಂಡೆ, ೭೦.ಗುಲಾಬಿ ಉಂಡೆ, ೭೧.ವೆನಿಲ್ಲಾ ಉಂಡೆ, ೭೨.ಜಂಬು ಉಂಡೆ, ೭೩.ಮಾವು ಉಂಡೆ, ೭೪.ಕೊಕಮ್ ಉಂಡೆ, ೭೫.ಹಸಿರು ಸೇಬು ಉಂಡೆ, ೭೬.ಶಂಕರಪಾಳಿ ಉಂಡೆ, ೭೭.ಮೋಹನ ಉಂಡೆ, ೭೮. ನಿಪ್ಪಟ್ಟು ಉಂಡೆ, ೭೯.ಪಾಪಡ್ ಉಂಡೆ, ೮೦.ಸಂಡಿಗೆ ಉಂಡೆ, ೮೧.ಚಕ್ಕುಲಿ ಉಂಡೆ, ೮೨.ಖಾರ ಕಡುಬಳೆ ಉಂಡೆ, ೮೩.ಸೂರ್ಯಕಾಂತಿ ಬೀಜ ಉಂಡೆ, ೮೪.ಕುಂಬಳಕಾಯಿ ಬೀಜ ಉಂಡೆ, ೮೫.ಚಿಣಿಕಾಯಿ ಉಂಡೆ, ೮೬.ಕುಷ್ಮಾಂಡ ಉಂಡೆ, ೮೭.ಪುದೀನ ಉಂಡೆ, ೮೮.ಸೌತೆಕಾಯಿ ಉಂಡೆ, ೮೯.ಹಸಿರು ಬಟಾಣಿ ಉಂಡೆ, ೯೦.ಆಲೂಗಡ್ಡೆ ಉಂಡೆ, ೯೧.ಗೆಣಸು ಗೆಡ್ಡೆ ಉಂಡೆ, ೯೨.ಬೇವು ಎಲೆ ಉಂಡೆ, ೯೩.ಕೋಕೋ ಉಂಡೆ, ೯೪. ಖೋವಾ ಉಂಡೆ, ೯೫.ಜಾಮೂನು ಉಂಡೆ, ೯೬.ಹಲ್ವು ಉಂಡೆ, ೯೭.ಧನ್ವಂತರಿ ಉಂಡೆ, ೯೮.ಬ್ರಾಹ್ಮಿ ಉಂಡೆ, ೯೯.ತ್ರಿವಿಕ್ರಮ ಉಂಡೆ, ೧೦೦.ಕೇಶವ ಉಂಡೆ, ೧೦೧. ಮೂರಾರಿ ಉಂಡೆ, ೧೦೨. ಅಚ್ಯುತ ಉಂಡೆ, ೧೦೩. ಅನಂತ ಉಂಡೆ, ೧೦೪. ಸುದರ್ಶನ ಉಂಡೆ, ೧೦೫. ದ್ವಾರಕಾ ಉಂಡೆ, ೧೦೬. ಮೈಸೂರು ಉಂಡೆ, ೧೦೭. ಗುರುವಾಯೂರು ಉಂಡೆ, ೧೦೮. ಮಥುರಾ ಉಂಡೆ ಗೋಕುಲದಲ್ಲಿ ಲಭ್ಯವಿದೆ. ಆಗಮಿಸುವ ಭಕ್ತರು ಉಂಡೆಗಳನ್ನು ಕೇಳಿ ಪಡೆಯುವಂತೆ ಟ್ರಸ್ಟ್ನ ಸದಸ್ಯರು ವಿನಂತಿಸಿದ್ದಾರೆ.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.