Skip to main content

ಗೋಕುಲದಲ್ಲಿ ಬಿಎಸ್‌ಕೆಬಿ ಅಸೋಸಿಯೇಶನ್ ಸಂಭ್ರಮಿಸಿದ ಗಣರಾಜ್ಯ ದಿನಾಚರಣೆ.

By January 28, 2026Kannada News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಜ.28: ಬಿಎಸ್‌ಕೆಬಿ ಅಸೋಸಿಯೇಶನ್ ಗೋಕುಲ ಸಾಯನ್ ಭಾರತದ 77ನೇ  ಗಣರಾಜ್ಯ ದಿನವನ್ನು ಕಳೆದ ಸೋಮವಾರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಿತು.  ಪ್ರಾತಃಕಾಲ ಸಂಘದ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅವರು  ಪದಾಧಿಕಾರಿಗಳು ಹಾಗೂ ನೆರೆದ  ಸದಸ್ಯರುಗಳ ಉಪಸ್ಥಿತಿಯಲ್ಲಿ  ರಾಷ್ಟ್ರಗೀತೆಯೊಂದಿಗೆ ಧ್ವಜವಂದನೆ ಸಲ್ಲಿಸಿದರು.

ಬೆಳಿಗ್ಗೆ ಗೋಕುಲದ ಸರಸ್ವತಿ ಸಭಾಗೃಹದಲ್ಲಿ ಸಭಾ ಕಾರ್ಯಕ್ರಮದ ನಡೆಸಲಾಗಿದ್ದು, ಸಂಘದ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್, ಉಪಾಧ್ಯಕ್ಷರುಗಳಾದ ಮೋಹನ್‌ರಾಜ್, ಚಿತ್ರಾ ಮೇಲ್ಮನೆ, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಗಣೇಶ್ ಭಟ್, ಜತೆ ಕಾರ್ಯದರ್ಶಿ ವಿನೋದಿನಿ ರಾವ್ ಉಪಸ್ಥಿತರಿದ್ದರು.  ಅಧ್ಯಕ್ಷರು ಹಾಗೂ  ಪದಾಧಿಕಾರಿಗಳು,  ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್‌ಸಿ, ಎಚ್‌ಎಸ್‌ಸಿ ಮತ್ತು ವಿವಿಧ  ಪದವಿ ಹಾಗೂ ಉನ್ನತ ಪದವಿ  ಪರೀಕ್ಷೆಗಳಲ್ಲಿ  ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಿದರು ಹಾಗೂ ವಿವಿಧ ಕ್ಷೇತ್ರಗಳಲ್ಲಿ  ಸಾಧನೆಗೈದ ಸದಸ್ಯರನ್ನು ಗೌರವಿಸಿದರು. ವಿದ್ಯಾ ರಾವ್ ಮತ್ತು ರಾಮಮೂರ್ತಿ ಭಟ್ ಪ್ರತಿಭಾವಂತರ ಯಾದಿ ಘೋಷಿಸಿದರು.

ಡಾ| ಸುರೇಶ್ ರಾವ್  ಮಾತನಾಡಿ ಗೋಕುಲ ತನ್ನ ಶತಮಾನೋತ್ಸವವನ್ನು ಸದಸ್ಯರೆಲ್ಲರ ಪೂರ್ಣ ಸಹಕಾರದಿಂದ  ಅತ್ಯಂತ ಸಂಭ್ರಮದಿಂದ ಆಚರಿಸಿದೆ. ಅದೇ ಉತ್ಸಾಹ ಮತ್ತು ಸಹಕಾರ  ಇನ್ನು ಮುಂದೆಯೂ ಇರಲಿ ಎಂದು ಸರ್ವರಿಗೂ ಗಣತಂತ್ರ ದಿನದ ಶುಭಾಶಯಗಳನ್ನು ಸಲ್ಲಿಸಿ ಹಾರೈಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.