
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಏ.01: ಸಾವಿರ ಕಂಬ ಬಸದಿ ಕಿರಿಯ ರಥೋತ್ಸವ ಹಾಗೂ ಭಗವಾನ್ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಧಾರ್ಮಿಕ ಸಭಾ ಕಾರ್ಯಕ್ರಮ ಇಂದಿಲ್ಲಿ ಶ್ರೀ ಶಂಭವ ಕುಮಾರ್ ಹಾಗೂ ಶ್ರೀ ಶ್ರೀ ನಾಥ್ ಬಲ್ಲಾಳ್ ಕಿಜನ ಬೆಟ್ಟು ಗುತ್ತು ದೀಪ ಬೆಳಗಿಸಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾ ಚಾರ್ಯ ವರ್ಯ ಮಹಾ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಿದರು.
ಆಶೀರ್ವಾದ ನೀಡಿದ ಸ್ವಾಮೀಜಿ ಭಗವಾನ್ ಮಹಾವೀರ ಸ್ವಾಮಿ ತಮ್ಮ ಅರಮನೆ ಯ ಸುಖ ಭೋಗ ತೊರೆದು ಸರ್ವರಿಗೂ ಒಳಿತನ್ನು ಕಾಣುದಕ್ಕಾಗಿ ತಮ್ಮೊಳಗಿನ ಅರಿ ಷಡ್ ವರ್ಗ ದೂರ ಮಾಡಲು ಮನಸು ನಿರ್ಮಲ ಮಾಡಲು ಬೇಕಾದ ಯೋಗ ಧ್ಯಾನ ಜಪ ತಪ ಗಳನ್ನು ತಿಳಿಸಿದರು ಆಹಾರ ದಲ್ಲಿ ಸಸ್ಯಾಹಾರಿ ಸಾತ್ವಿಕ ನಿಯಮಿತ ದಿನ ಭೋಜನ ಮೂಲಕ ಶರೀರ ಸ್ವಾಸ್ತ್ಯ ಕಾಪಾಡುದು ಸಾಧ್ಯ ಎಂದು ವೈಜ್ಞಾನಿಕ ವಿಶ್ಲೇಷಣೆ ಮೂಲಕ ತಿಳಿಸಿ ಕ್ರಿ ಪೂ 5 ನೇ ಶತಮಾನದ ಮಹಾನ್ ಅವತಾರ ಪುರುಷ ಭಗವಂತರಾಗಿ ಪೂಜಿಸಲ್ಪಟ್ಟರು ಎಂದು ನುಡಿದರು.
ಮುಕ್ತೇಸರ ರಾದ ಪಟ್ಣ ಶೆಟ್ಟಿ ಸುದೇಶ್ ಸ್ವಾಗತಿಸಿದರು, ಸುದೀಶ್, ಆದರ್ಶ್, ಹೇಮರಾಜ್, ಪ್ರವೀಣ್ ಚಂದ್ರ, ಪ್ರದೀಪ್ ಚಂದ್ರ, ರಂಜನ್ ಪೊವಣಿ ಮೊದಲಾದವರು ಉಪಸ್ಥಿತರಿದ್ದರು.
ಸಂಜಯಂತ ಕುಮಾರ್ ಧನ್ಯವಾದ ನೀಡಿದರು ನೇರoಕಿ ಸುಧಾ ದಿವ್ಯಾ ವೀರೇಂದ್ರ ಪ್ರಾರ್ಥನೆ ಹಾಡಿದರು ಬಳಿಕ ಭಗವಾನ್ ಚಂದ್ರ ಪ್ರಭ ಸ್ವಾಮಿ ಕಿರಿಯ ರಥ, 108 ಕಲಶ ಅಭಿಷೇಕ ನೆರವೇರಿತು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.