
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.೨೪: ಗುಜರಾತ್ ವಾಪಿ ಅಲ್ಲಿನ ತುಳುನಾಡ ಐಸಿರಿ ಚಾರಿಟೇಬಲ್ ಟ್ರಸ್ಟ್ ತನ್ನ ವಾರ್ಷಿಕ ಕ್ರಿಕೆಟ್ ಪಂದ್ಯಾವಳಿ-೨೦೨೬ನ್ನು ಕಳೆದ ಭಾನುವಾರ ಐಸಿರಿಯ ಐದು ಗ್ರಾಮಗಳಲ್ಲಿ ಒಂದಾದ ಸಿಲ್ವಾಸದ ಸೈಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದು, ಈ ಬಾರಿಯ ಮೂರನೇ ವಾರ್ಷಿಕ ಆವೃತ್ತಿಯ ಪಂದ್ಯಾವಳಿಯನ್ನು ತುಳುನಾಡ ಐಸಿರಿ ಅಧ್ಯಕ್ಷ ನವೀನ ಶೆಟ್ಟಿ ಹೇರೂರು ಮತ್ತು ಪದಾಧಿಕಾರಿಗಳನ್ನೊಳ ಗೊಂಡು ಗ್ರೀನಹೀರೋ ಆಫ್ ಇಂಡಿಯಾ ಬಿರುದಾಂಕಿತ ಡಾ| ಆರ್.ಕೆನಾಯರ್ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು.
ಒಟ್ಟು ಎಂಟು ಪುರುಷರ ಹಾಗೂ ಮೂರು ಮಹಿಳೆಯರ ತಂಡಗಳ ಭಾಗವಹಿಸುವೆಕೆಯಲ್ಲಿ ಪುರುಷರಿಗೆ ಎಂಟು ಮತ್ತು ಮಹಿಳೆಯರಿಗೆ ಐದು ಓವರ್ಗಳ ಸ್ಪರ್ಧೆಯೊಂದಿಗೆ ಪಂದ್ಯಾವಳಿ ನಡೆಸಲಾಗಿದ್ದು, ಬರೋಡಾ, ಸೂರತ್ನಿಂದ ಪುರುಷರ ಎರಡು ಹಾಗೂ ಒಂದು ಮಹಿಳಾ ತಂಡ, ಸಿಲ್ವಾಸದಿಂದ ಎರಡು ಪುರುಷರ ಹಾಗೂ ಒಂದು ಮಹಿಳಾ ರ ತಂಡ, ದಮಾನ್ನಿಂದ ಒಂದು ಪುರುಷರ ತಂಡ ಹಾಗೂ ವಾಪಿಯಿಂದ ಪುರುಷರ ಮತ್ತು ಮಹಿಳಾ ಒಂದೊಂದು ತಂಡಗಳು ಭಾಗವಹಿಸಿದ್ದವು.
ಪುರುಷರ ವಿಭಾಗದಲ್ಲಿ ಸಿಲ್ವಾಸ ವಾರಿಯರ್ಸ್ ತಂಡವು ವಿಜೇತವಾಗಿ ರೂಪಾಯಿ ೧೫,೦೦೦/- ನಗದು ಬಹುಮಾನ ಹಾಗೂ ವಿನ್ನರ್ಸ್ ಟ್ರೋಪಿ ಗಿಟ್ಟಿಸಿಕೊಂಡು ಪ್ರಥಮ ಸ್ಥಾನವನ್ನು ಹಾಗೂ ಸೂರತ್ ತಂಡವು ೧೧,೦೦೦/- ನಗದು ಹಾಗೂ ರನ್ನರ್ಸ್ಅಪ್ ಟ್ರೋಫಿಯೊಂದಿಗೆ ದ್ವಿತೀಯ ಸ್ಥಾನಕ್ಕೆ ಭಾಜನವಾಯಿತು. ಮಹಿಳಾ ವಿಭಾಗದಲ್ಲಿ ಸೂರತ್ ಮಹಿಳಾ ತಂಡ ಪ್ರಥಮ ವಿನ್ನರ್ಸ್ ಸ್ಥಾನ ಗಿಟ್ಟಿಸಿಕೊಂಡಿದ್ದು ಹಾಗೂ ದ್ವಿತೀಯ ರನ್ನರ್ಸ್ಅಪ್ ಸ್ಥಾನವನ್ನು ಸಿಲ್ವಾಸ ಮತ್ತು ಮಹಿಳಾ ವಾಪಿ ತಂಡ ಪಡೆದುಕೊಂಡರು. ಡಾ| ಆರ್.ಕೆ ನಾಯರ್ ಪ್ರೋತ್ಸಾಹದ ರೂಪಾಯಿ ೨೫,೦೦೦/- ಹಾಗೂ ರೂಪಾಯಿ ೧೦,೦೦೦/- ಸಿಲ್ವಾಸ ತಂಡಕ್ಕೆ ನೀಡಿ ಅಭಿನಂದಿಸಿದರು.
ಪುರುಷರ ವಿಭಾಗದಲ್ಲಿ ಶಶಿಧರ ಬಿ.ಶೆಟ್ಟಿ ನೇತೃತ್ವದಲ್ಲಿನ ಕೋಸ್ಟಲ್ ಕರ್ನಾಟಕ ಬರೋಡಾ (ಎ) ತಂಡದ ನಾಯಕತ್ವವನ್ನು ರವೀಂದ್ರ ಶೆಟ್ಟಿ ನಿರ್ವಹಿಸಿದರೆ, ಮದನ್ ಗೌಡ ಮೂಡಿಗೆರೆ ನೇತೃತ್ವದ ಬರೋಡಾ (ಬಿ) ತಂಡದ ನಾಯಕತ್ವ ಸುರೇಶ ಶೆಟ್ಟಿ, ಕೆಎಫ್ಸಿ ಸೂರತ್(ಎ) ತಂಡದ ನಾಯಕರಾಗಿ ಸುರೇಶ ಪೂಜಾರಿ, ಸೂರತ್ ಕರುನಾಡ ಬ್ಲಾಸ್ಟರ್ಸ್ (ಬಿ) ತಂಡಕ್ಕೆ ದೀಕ್ಷಯ ಪೂಜಾರಿ, ಸಿಲ್ವಾಸ ವಾರಿಯರ್ಸ್(ಎ) ತಂಡಕ್ಕೆ ಲವ ಅಮೀನ್, ಸಿಲ್ವಾಸ ವಾರಿಯರ್ಸ್(ಬಿ) ತಂಡಕ್ಕೆ ಶಿವನಾಥ ಪ್ರಭು, ಎಸ್ಕೆಸಿ ದಮಾನ್ ತಂಡದ ನಾಯಕರಾಗಿ ನಾಗರಾಜ ಪುತ್ರನ್, ವಾಪಿ ತುಳುನಾಡ ಐಸಿರಿ ತಂಡದ ಕ್ಯಾಪ್ಟನ್ ಆಗಿ ನಿಕೇತನ್ ಶೆಟ್ಟಿ ನಿರ್ವಹಿಸಿದರು. ಮಹಿಳಾ ವಿಭಾಗದಲ್ಲಿ ಸಿಲ್ವಾಸ್ ವಾರಿಯರ್ಸ್ ತಂಡಕ್ಕೆ ಶುಭ ಆಳ್ವಾ, ಸೂರತ್ ತಂಡಕ್ಕೆ ಸೌಮ್ಯ ಪೂಜಾರಿ ಮತ್ತು ವಾಪಿ ತಂಡಕ್ಕೆ ಭಾರತಿ ಶೆಟ್ಟಿ ನಾಯಕಿ ಆಗಿದ್ದು ಸ್ಪರ್ಧೆಯನ್ನು ಎದುರಿಸಿದರು.
ಬೆಳಿಗ್ಗೆ ಪ್ರಾರಂಭಗೊಡ ಪಂದ್ಯಾಟ ಸಂಜೆ ಮುಕ್ತಾಯಗೊಂಡು ನಂತರ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕ್ರೀಡೊತ್ಸವವು ಕೇವಲ ಮನೋರಂಜನೆಗಾಗಿ ಏರ್ಪಡಿಸಿತ್ತಲ್ಲದೇ ಯಾವ ಪೈಪೋಟಿಗಾಗಿ ಇರಲಿಲ್ಲ ಎಂದು ಸ್ಪರ್ಧಾ ಪ್ರಧಾನ ಸಂಚಾಲಕರಾದ ಚೇತನ್ ಗೌಡ ಹಾಗೂ ಶರತ್ ಶೆಟ್ಟಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೂರತ್ ಕರ್ನಾಟಕ ಸಮಾಜದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಐಸಿರಿ ಉಪಾಧ್ಯಕ್ಷರುಗಳಾದ ವೆಂಕಟೇಶ್ ಎಸ್.ಪೂಜಾರಿ (ಇರುವೈಲು) ಸಿಲ್ವಾಸ, ಉದಯ ಶೆಟ್ಟಿ, ದಿವಾಕರ ಶೆಟ್ಟಿ ವಲ್ಸಾಡ್, ಸದಾಶಿವ ಪೂಜಾರಿ, ಅಮಿತ್ ಶೆಟ್ಟಿ ಸಿಲ್ವಾಸ, ಕಾರ್ಯದರ್ಶಿ ಪುಷರಾಜ ಶೆಟ್ಟಿ, ಖಜಾಂಚಿ ಗಣೇಶ ಶೆಟ್ಟಿ, ಅನಿಲ ಶೆಟ್ಟಿ, ಸುಕೇಶ ಶೆಟ್ಟಿ, ಮಹಿಳಾ ವಿಭಾಧ್ಯಕ್ಷೆ ಅರುಂಧತಿ ಶೆಟ್ಟಿ, ಕಾರ್ಯದರ್ಶಿ ಶಾಲಿನಿ ಶೆಟ್ಟಿ, ಮಾಜಿ ಮಹಿಳಾ ಅಧ್ಯಕ್ಷೆ ರಜನಿ ಶೆಟ್ಟಿ, ಯುವ ವಿಭಾಗಧ್ಯಕ್ಷ ಹರೀಶ ಶೆಟ್ಟಿ ವಲ್ಸಾಡ್, ಶರತ್ ಶೆಟ್ಟಿ, ಶಿವ ಪೂಜಾರಿ, ರಾಮಚಂದ್ರ ಸುವರ್ಣ, ದಿವಾಕರ ಶೆಟ್ಟಿ ಸಿಲ್ವಾಸ, ಪ್ರಕಾಶ ಆಳ್ವ ಸಿಲ್ವಾಸ, ವಾಪಿ ಕನ್ನಡ ಸಂಘದ ವಿಸ್ವಸ್ಥ ಸದಸ್ಯ ನಾರಾಯಣ ಶೆಟ್ಟಿ, ನಾಗರಾಜ ಶೆಟ್ಟಿ, ಪಿ.ಎಸ್.ಕಾರಂತ್, ವಾಪಿ ಕನ್ನಡ ಸಂಘದ ಅಧ್ಯಕ್ಷೆ ಲಲಿತಾ ಕಾರಂತ್, ಐಸಿರಿ ಯುವ ವಿಭಾಗದ ಅಶ್ವಿನ್ ಶೆಟ್ಟಿ, ಪ್ರಫುಲ್ಲಾ ಶೆಟ್ಟಿ, ಕೌಸ್ತುಭ ಶೆಟ್ಟಿ ಹಾಗೂ ಇತರ ಸದಸ್ಯರು ಹಾಜರಿದ್ದರು.
ಶರತ್ ಶೆಟ್ಟಿ ಸ್ವಾಗತಿಸಿದರು. ಐಸಿರಿಯ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮದೊಂದಿಗೆ ಕಾಮೆಂಟ್ರಿಯನ್ನು ನಿರ್ವಹಿಸಿದರು. ಚೇತನ್ ಗೌಡ ವಂದಿಸಿದರು. ರಾಷ್ಟ್ರ್ಟ್ರಗೀತೆಯೊಂದಿಗೆ ಪಂದ್ಯಾಟ ಸಮಾಪ್ತಿ ಗೊಂಡಿತು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.