Skip to main content
www.kallianpur.com | Email : kallianpur7@gmail.com | Mob : 9741001849

ಮನೆಯೇ ಮೌಲ್ಯಾಲಯ – ಡಾ| ಗಣನಾಥ ಎಕ್ಕಾರು.

By July 3, 2024Kannada News
kallianpurdotcom: 9741001849

ಉಡುಪಿ: ಇಂದಿನ ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುತ್ತಾರೆ. ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಅರ್ಹತೆ ಪಡೆದಿರುತ್ತಾರೆ, ಆದರೆ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಯಾಕೆಂದರೆ ಅವರು ಕಲಿಯುವ ಪಠ್ಯ ಮತ್ತು ಸಮಾಜದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಎಳವೇ ಯಲ್ಲಿಯೇ ಹೆತ್ತವರು ಮನೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಮಾನವತೆಯೇ ಮುಖ್ಯವಾಗಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ| ಗಣನಾಥ ಎಕ್ಕಾರು ಹೇಳಿದರು.

ಅವರು ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆವಹಿಸಿದ ಶಾಲಾ ಸಂಚಾಲಕ ಫಾ| ಡಾ| ರೋಕ್ ಡಿ’ಸೋಜ ಮಾತನಾಡಿ ಶಾಲೆಯ ಪಠ್ಯಪೂರಕ ಚಟುವಟಿಕೆಗಳಲ್ಲಿ ಹೆತ್ತವರ ಸಹಕಾರವನ್ನು ಶ್ಲಾಫಿಸಿದರು ಹಾಗೂ ಸತತ ಎಳನೇ ಬಾರಿ ಎಸೆಸ್ಸೆಲ್ಸಿಯಲ್ಲಿ ನೂರು ಶೇಕಡಾ ಫಲಿತಾಂಶ ಪಡೆಯುವಲ್ಲಿ ಸಹಕರಿಸಿದ ಹೆತ್ತವರನ್ನು ಹಾಗು ಶಿಕ್ಷಕರನ್ನು ಅಭಿನಂದಿ ಸಿದರು. ೨೦೨೩-೨೪ ನೇ ಸಾಲಿನ ಸಂಘದ ಅಧ್ಯಕ್ಷಕಾಗಿ ಸೇವೆ ಸಲ್ಲಿಸಿದ ರಾಘವೇಂದ್ರ ನಾಯಕ್, ಉಪಾಧ್ಯಕ್ಷೆ ನಾಗ್ಮ ತೋನ್ಸೆರವರನ್ನು ಸನ್ಮಾನಿಸಲಾಯಿತು.

ಹಿರಿಯ ಶಿಕ್ಷಕ ಆಲ್ವಿನ್ ದಾಂತಿ ಪ್ರಸಕ್ತ ಶೈಕ್ಷಣಿಕ ವರ್ಷದ ಮಾರ್ಪಾಡುಗಳನ್ನು ತಿಳಿಸಿ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ಶಿಕ್ಷಕ ವನೀತಾ ವರದಿಯನ್ನು ಮಂಡಿಸಿ ದರು. ವಿದ್ಯಾರ್ಥಿಗಳು ಕಳೆದ ಸಾಲಿನ ಚಟುವಟಿಕೆಗಳ ಪಕ್ಷಿನೋಟವನ್ನು ಮನಮುಟ್ಟುವಂತೆ ಬಿತ್ತರಿಸಿದರು. ಶಿಕ್ಷಕಿ ಯಾರದ ನ್ಯಾನ್ಸಿ, ಮಾರ್ತ ನಿರೂಪಿಸಿದರು. ಮುಖ್ಯಶಿಕ್ಷಕಿ ಸಿ| ಆನ್ಸಿಲ್ಲಾ ಡಿಮೆಲ್ಲೊ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.