Skip to main content
www.kallianpur.com | Email : kallianpur7@gmail.com | Mob : 9741001849

ಸಂತೆಕಟ್ಟೆ ಮೌಂಟ್ ರೋಸರಿ ಶಾಲಾ ಸಂಸತ್ತು ಉದ್ಘಾಟನೆ.

By June 15, 2024News
kallianpurdotcom: 9741001849

ಉಡುಪಿ: ಎಲ್ಲರನ್ನು ಒಟ್ಟುಗೂಡಿಸಿ ಸಮಾನ ಉದ್ದೇಶಕ್ಕಾಗಿ ಅವಿರತ ಶ್ರಮಿಸುವುದೇ ಉತ್ತಮ ನಾಯಕನ ಲಕ್ಷಣವಾಗಿದೆ. ಆಡಳಿತ ಮಂತ್ರಿ ಅಥವಾ ಶಾಸಕನ ಕರ್ತವ್ಯವೆಂದರೆ ಸೇವೆ ಮಾಡುವುದು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ನಾಯಕತ್ವ ಗುಣಗಳೊಂದಿಗೆ ಬೆಳೆಯಲು ಶಾಲಾ ಸಂಸತ್ತು ಉತ್ತಮ ವೇದಿಕೆಯಾಗಿದೆ ಎಂದು ಕೆಎಂಸಿ ಮಣಿಪಾಲ ಇಲ್ಲಿನ ದಂತ ವೈದ್ಯೆ ಹಾಗೂ ಶಾಲೆಯ ಹಳೇ ವಿದ್ಯಾರ್ಥಿನಿ ಡಾ|ದೀಶಾ ಕರ್ಕೆರಾ ಅಭಿಪ್ರಾಯ ವ್ಯಕ್ತ ಪಡಿಸಿದರು.

ಅವರು ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಶಾಲಾ ಸಂಸತ್ತು ಉದ್ಘಾಟಿಸಿ ಮಾತನಾಡಿದರು. ಶಾಲಾ ಸಂಚಾಲಕ ಫಾ|ಡಾ| ರೋಕ್ ಡಿಸೋಜ ಶಾಲಾ ನಾಯಕಿ ಅಕ್ಷತಾ ಉಪನಾಯಕ ನೀಲ್ ಡಿಸೋಜ ಇವರಿಗೆ ಪ್ರತಿಜ್ಞಾ ವಿಧಿ ಭೋದಿಸಿ ಸ್ವೀಕರಿಸಿದ ಹುದ್ದೆಗೆ ಚ್ಯುತಿ ಬಾರದಂತೆ ಕಿರಿಯ ವಿದ್ಯಾರ್ಥಿಗಳಿಗೆ ಮಾದರಿ ನಾಯಕರಾಗಿ ಬೆಳೆಯಬೇಕೆಂದು ಕರೆ ಕೊಟ್ಟರು. ಅಕ್ಷತಾಳ ಸಚಿವ ಸಂಪುಟದ ಮೂವತ್ತೆರಡು ಮಂತ್ರಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಪ್ರತಿಜ್ಞಾ ವಿಧಿಭೋದಿಸಿ ಶುಭ ಹಾರೈಸಿದರು.

ಈ ಶೈಕ಼ಣಿಕ ವರ್ಷದಲ್ಲಿ ವಿವಿಧ ಪಠ್ಯೇತರ ಚಟುವಟಿಕೆಗಳು, ವಿವಿಧ ಕ್ಲಬ್ಸಗಳಿಗೆ ಚಿಟ್ಟೆಯ ಚಿತ್ತಾರ ಬಿಡಿಸಿ ಚಾಲನೆ ನೀಡ ಲಾಯಿತು. ಶಾಲಾ ಸಂಸತ್ತಿನ ನಿರ್ದೆಶಕಿ ಶಿಕ್ಷಕಿ ನ್ಯಾನ್ಸಿ ಡಿಸೋಜ, ಮುಖ್ಯ ಅತಿಥಿ ಡಾ|ದೀಶಾ ಇವರ ಮಾತೃಶ್ರೀ ರೂಪ ಕರ್ಕೆರ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ನಾಯಕತ್ವ ಸಂದೇಶ ನೀಡುವ ಪ್ರಹಸನ ಮತ್ತು ನೃತ್ಯಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿ ಗಳಿಂದ ಸ್ವೆನ್ ಮತ್ತು ವರ್ಷ ನಿರೂಪಿಸಿದರು. ಪೂಜಾ ಸ್ವಾಗತಿಸಿದರು. ಪ್ರಥ್ವಿರಾಜ್ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.