Skip to main content
www.kallianpur.com | Email : kallianpur7@gmail.com | Mob : 9741001849

ಕಲ್ಯಾಣಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆಗೆ ಚಾಲನೆ.

By January 22, 2024Kannada News
kallianpurdotcom: 9741001849
ಉಡುಪಿ: ಕಲ್ಯಾಣಪುರ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಾರೀಕು 01/01/2024 ಸೋಮವಾರ ಬೆಳಿಗ್ಗೆ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ಸಕಲ ಗೌರವ ಗಳೊಂದಿಗೆ ಪೂಜೆಯನ್ನು ಸಲ್ಲಿಸಿ ಕಲ್ಯಾಣಪುರ ಗ್ರಾಮದ ಎಂಟು ಉಪ ವಾರ್ಡ್ ಗಳಿಗೆ ವಿತರಣೆಗೆ ಹಸ್ತಾಂತರಿಸಲಾಯಿತು.
ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ  ಶ್ರೀ ಕೆ ವಿ ರಾವ್ ಮಂತ್ರಾಕ್ಷತೆಯನ್ನು ದೇವಳಕ್ಕೆ ಬರಮಾಡಿಕೊಂಡು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಶ್ರೀ ರಾಮಾಂಜನೇಯ ದೇವಸ್ಥಾನದ ಸದಸ್ಯರು, ಊರಿನ ಸಮಸ್ತ ಭಕ್ತರ ಸಮ್ಮುಖದಲ್ಲಿ ಶ್ರೀ ರಾಮನ ಜೈಕಾರದೊಂದಿಗೆ ವಿತರಣೆಗೆ ಹಸ್ತಾಂತರಿಸಲಾ ಯಿತು.                           ————–
ಜೈ ಶ್ರೀರಾಮ್…ಜಗತ್ತೇ ಕಾಯುತ್ತಿರುವ ಶುಭ ದಿನವಿಂದು…ದೇಶದಲ್ಲಿ ಪ್ರಧಾನವಾಗಿ 22 ಹಬ್ಬಗಳನ್ನು ಬೇರೆ ಬೇರೆಯಾಗಿ ..ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತೇವೆ…ಆ 22 ಹಬ್ಬವನ್ನು ಒಂದೇ ದಿನ,ಒಟ್ಟಾಗಿ ಜನಸೇರಿ ಆಚರಿಸುವ ..ಜನವರಿ 22 ಇಂದು…*ರಾಮಯುಗ* ಪ್ರಾರಂಭವಾಗಿದೆ. ಭೂಲಲನೆಯ ಲಲಾಟ ತಿಲಕದಂತೆ ..ರಮಣೀಯವೂ , ರಂಜನೀಯವೂ ಆಗಿದ್ದು..ವಸುಂಧರಾ ದೇವಿಯ ಕೊರಳ ಹಾರದ ಪದಕದಂತೆ ಶೋಭಾಯಮಾನವಾದ…ಪರಮ ಪಾವನ ಭೂಮಿ ಅಯೋಧ್ಯೆಯಲ್ಲಿ… ವಿಶ್ವನಾಯಕ  ಶ್ರೀರಾಮಚಂದ್ರಗೆ .. ವಿಶ್ವನಾಯಕ ನರೇಂದ್ರ ಮೋದಿಯಿಂದ…ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ..*ವೀರ ವಿತರಣ ಶೂರ..ವಿಜಯ ಸದ್ಗುಣಸಾರ…ಸಾರಸಾಂಬಕ ಧೀರ… ಶರಧಿಗಂಭೀರ..ವೈರಿ ಮದಗಜ ಸಿಂಹ …ವಾಸವಾರ್ಜಿತ ಧರ್ಮ… ಪೌರುಷಾಗ್ರಣಿ ರಾಮ.. ಶ್ರೀ ರಾಮಚಂದ್ರನಿಗೆ ಜಯವಾಗಲಿ*.
🚩  *ಶುಭದಿನ…ಶುಭೋದಯ*.   🚩

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.