
kallianpurdotcom: Mob 9741001849
Official release from Mount Rosary School, Santhekatte.
ಉಡುಪಿ: ಮಕ್ಕಳಿಂದ ಹಿಡಿದು ವೃಧ್ಧರ ತನಕ ಸಮಾಜವು ರೀಲ್ಸ್ಗಳಲ್ಲಿ ಮುಳುಗಿದೆ. ಅವುಗಳನ್ನೆ ನಿಜವೆಂದು ಅರಿತು ಆನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಮಾಧ್ಯಮಗಳ ಒಳಿತನ್ನು ಮಾತ್ರ ಸ್ವೀಕರಿಸಬೇಕು. ದೇಹದ ಮತ್ತು ಮನಸ್ಸಿನ ಆರೋಗ್ಯವನ್ನು ಸದಾ ಕಾಪಾಡಬೇಕು. ಬೆಳೆಯುತ್ತಿದ್ದಂತೆ ಕೂತೂಹಲ ಮೂಡಿಸುವ, ಚಿತ್ತವನ್ನು ಕೆರಳಿಸುವ ಆನೇಕ ಸಂಗತಿಗಳು ದೃಶ್ಯಮಾಧ್ಯಮಗಳಲ್ಲಿ ಬಿತ್ತರವಾಗುತ್ತದೆ. ರೀಲ್ಸ್ಗಳಿಗಿಂತ ರಿಯಾಲ್ ಹೀರೊಗಳಾದ ರಾಷ್ಟ್ರನಾಯಕರ, ವಿಜ್ಞಾನಿಗಳ, ಸಂತರ, ಸಾಹಿಸಿಗಳ, ಕ್ರೀಡಾಸಾಧಕರ ಕಥೆಗಳನ್ನು ತಿಳಿಯಿರಿ ಎಂದು ಖ್ಯಾತ ಪ್ರಸೂತಿ ತಜ್ಞೆಯಾದ ಡಾ| ರಾಜಲಕ್ಷ್ಮೀ ಹೇಳಿದರು.
ಅವರು ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ “ಮಾನಸಿಕ ತುಮುಲಗಳು” ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು. ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಮಾತನಾಡಿ ಕುರುಕಲು ತಿಂಡಿ ಮತ್ತು ಮೊಬೈಲ್ನಲ್ಲಿ ರೀಲ್ಸ್ಗಳು ಒಟ್ಟಿಗೆ ನಮ್ಮ ದೇಹ ಮತ್ತು ಮನಸ್ಸನ್ನು ಹಾಳು ಮಾಡುತ್ತದೆ. ಈ ಸಂಗತಿಗಳಿಂದ ದೂರವಿರಬೇಕು ಎಂದು ಕರೆ ನೀಡಿದರು. ಶಿಕ್ಷಕಿ ಮಿಲನ ಸ್ವಾಗತಿಸಿದರು, ವಿನೇಟ್ ಆಂದ್ರಾದೆ ನಿರೂಪಿಸಿ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.