Skip to main content
www.kallianpur.com | Email : kallianpur7@gmail.com | Mob : 9741001849

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ ವಿಶ್ವಕರ್ಮರು ಹುಟ್ಟು ಪ್ರತಿಭಾನ್ವಿತರು : ರವೀಶ್ ಜಿ.ಆಚಾರ್ಯ.

By September 17, 2024News
kallianpurdotcom: 9741001849
(ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.೧೭: ವಿಶ್ವಕರ್ಮರು ಹುಟ್ಟು ಪ್ರತಿಭಾನ್ವಿತರು ಆಗಿದ್ದು ತಾಂತ್ರಿಕತೆಯಿಂದಲೂ ಮುಂದುವರಿದಿದ್ದೇ ವೆ. ನಮ್ಮಲ್ಲಿನ ಯುವಜನತೆ ಜಾಗತೀಕರಣಕ್ಕೆ ಸ್ಪಂದಿಸುತ್ತಿರುವುದು ಸ್ತುತ್ಯಾರ್ಹ. ಆದ್ದರಿಂದ ನಮ್ಮ ಮಕ್ಕಳನ್ನು ಪ್ರೋತ್ಸಾಹಿಸಿದಾಗ ಪ್ರತಿಭಾನ್ವಿತರು ಇನ್ನಷ್ಟು ಬೆಳಕಿಗೆ ಬರುತ್ತಾರೆ. ಸಮುದಾಯದ ಜನಬಲ ದೊರೆತಾಗಲೇ ಸಮಾಜವು ಸದೃಢಗೊಳ್ಳುವುದು. ಸಮಾಜ ಬಾಂಧವರ ಪ್ರೋತ್ಸಾಹ ದೊರೆತಾಗ ಹೆಚ್ಚು ಹೆಚ್ಚು ಸಾಂಘಿತರಾಗಲು ಸಾಧ್ಯವಾಗುವುದು ಎಂದು ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ನ ಅಧ್ಯಕ್ಷ ರವೀಶ್ ಜಿ.ಆಚಾರ್ಯ ತಿಳಿಸಿದರು.

ಬೃಹನ್ಮುಂಬಯಿಲ್ಲಿನ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ (ರಿ.) ಮುಂಬಯಿ ಸಂಸ್ಥೆಯು ವರ್ಷಂಪ್ರತಿಯ ಂತೆ ಈ ಬಾರಿಯೂ ದಿನಪೂರ್ತಿಯಾಗಿಸಿ ಶ್ರೀ ವಿಶ್ವಕರ್ಮ ಮಹೋತ್ಸವವನ್ನು ಇಂದಿಲ್ಲಿ ಸೋಮವಾರ ಮಲಾಡ್ ಪೂರ್ವದ ಶ್ರೀ ಸ್ವಾಮಿ ನಾರಾಯಣ ಮಂದಿರದ ಸಭಾಗೃಹದಲ್ಲಿ ಶಾಸ್ತ್ರೋಕ್ತ ವಾಗಿ ಶದ್ಧಾಭಕ್ತಿಯಿಂದ ಸಂಭ್ರಮಿಸಿದ್ದು, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರವೀಶ್ ಆಚಾರ್ಯ ಮಾತನಾಡಿದರು.

ಮುಂಜಾನೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಮಹೋತ್ಸವ ಮೊದಲ್ಗೊಂಡಿದ್ದು, ಸೂರ್ಯೋದ ಯಕ್ಕೆ ಶ್ರೀ ವಿಶ್ವಕರ್ಮ ಹೋಮ ಬಳಿಕ ಕಲಶ ಪ್ರತಿಷ್ಠಾಪನೆ ಬೆಳಿಗ್ಗೆಯಿಂದ ಭಜನಾ ಮಹೋತ್ಸವ, ಮಧ್ಯಾಹ್ನ ಅನ್ನಸಂತ ರ್ಪಣೆ, ಸೂರ್ಯಾಸ್ತಮಕ್ಕೆ ಮಹಾಮಂಗಳಾರತಿಯೊಂದಿಗೆ ನೇರವೇರಿಸಲ್ಪಟ್ಟಿತು. ಬ್ರಹ್ಮಶ್ರೀ ಪುರೋಹಿತ ಶಂಕರ ನಾಥ ಆಚಾರ್ಯ ತನ್ನ ವೈಧಿಕತ್ವದಲ್ಲಿ  ಶ್ರೀ ವಿಶ್ವಕರ್ಮ ಹೋಮ ನೆರವೇರಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು. ಅಶೋಕ್ ಕೊಡ್ಯಡ್ಕ ರೂಪಿಸಿದ ಭವ್ಯ ದೇವರ ಮಂಟಪದಲ್ಲಿ ಶ್ರೀದೇವರನ್ನು ಪ್ರತಿಷ್ಠಾಪಿಸಲಾಗಿ ಅಲಂಕರಿಸಿದ್ದು, ರೀನಾ ಭಾಸ್ಕರ್ ಆಚಾರ್ಯ ದಂಪತಿ ಯಜ್ಞ, ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಗೋಪಾಲಕೃಷ್ಣ ಆಚಾರ್ಯ, ಪ್ರಸನ್ನ ಆಚಾರ್ಯ, ಪ್ರಶಾಂತ್ ಆಚಾರ್ಯ, ಚೇತನ್ ಆಚಾರ್ಯ, ಸಂತೋಷ್ ಆಚಾರ್ಯ ಮತ್ತಿತರ ಪುರೋಹಿತರು ಪೂಜಾಧಿಗಳಿಗೆ ಸಹಕರಿಸಿದರು.

ವಿಶ್ವಕರ್ಮ ಅಸೋಸಿಯೇಶನ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ, ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿ, ವಿಶ್ವಕರ್ಮ ಮಹಿಳಾ ಬಳಗ ಡೊಂಬಿವಲಿ, ಶ್ರೀ ಲಲಿತಾಂಬಾ ಭಜನಾ ಮಂಡಳಿ ಬೊರಿವಲಿ, ಶ್ರೀ ವಿಶ್ವಕರ್ಮ ಕಾಳಿಕಾಂಬಾ ಭಜನಾವೃಂದ ಗೋರೆಗಾಂವ್ ಇವರುಗಳ ಪಾಲ್ಗೊಳ್ಳುವಿಕೆಯಲ್ಲಿ ಭಜನಾ ಮಹೋತ್ಸವ ಸಂಪನ್ನಗೊಂಡಿತು. ಅಪರಾಹ್ನ ಪದ್ಮನಾಭ ಸಸಿಹಿತ್ಲು ಸಾರಥ್ಯದ ಕಲಾ ಸೌರಭ ಮುಂಬಯಿ ತಂಡವು ಸಂಗೀತ ರಸಸಂಜೆ ಹಾಗೂ ಅಸೋಸಿಯೇಶನ್‌ನ ಸದಸ್ಯರು ಮತ್ತು ಮಕ್ಕಳು ಸಾಂಸ್ಕೃತಿಕ ವೈವಿಧ್ಯತೆ ಯನ್ನು ಪ್ರಸ್ತುತ ಪಡಿಸಿದರು.

ಸಂಜೆ ಸಭಾ ಕಾರ್ಯಕ್ರಮ ನಡೆಸಲ್ಪಟ್ಟಿತು. ಅಧ್ಯಕ್ಷ ರವೀಶ್ ಆಚಾರ್ಯ, ಉಪಾಧ್ಯಕ್ಷ ಗಣೇಶ್ ಕುಮಾರ್, ಕೋಶಾಧಿ ಕಾರಿ ಬಾಬುರಾಜ್ ಎಂ.ಆಚಾರ್ಯ, ಮಹಿಳಾ ವಿಭಾಗಧ್ಯಕ್ಷೆ ಸುಜತಾ ಜಿ.ಆಚಾರ್ಯ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂದೇಶ್ ಜೆ.ಆಚಾರ್ಯ, ಮಾಜಿ ಅಧ್ಯಕ್ಷ ಪಾದೂರು ಜನಾರ್ದನ ಆಚಾರ್ಯ ಮತ್ತು ಪ್ರಫುಲ್ಲಾ ಆಚಾರ್ಯ ದಂಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಜತಾ ಜಿ.ಆಚಾರ್ಯ ಮಾತನಾಡಿ ಪೂಜೆಯು ವಿಜೃಂಭನೆಯಿಂದ ನೇರವೇರಿಸಲು ಸದಸ್ಯರ, ಹಿರಿ ಕಿರಿಯರ ಪ್ರೋತ್ಸಾಹ ಪ್ರೇರಕವಾಗಿದೆ. ಈ ಮಹೋತ್ಸವವು ಸಮಾಜ ಬಾಂಧವರ ಬಾಂಧವ್ಯತ್ವಕ್ಕೆ ನಾಂದಿಯಾಡಿದೆ. ಮುಂದೆ ಯೂ ಸಾಂಘಿಕವಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಮಕ್ಕಳಲ್ಲು ಸಂಸ್ಕಾರ ತುಂಬಬೇಕು. ಅದಕ್ಕಾಗಿ ಮೊದಲಾಗಿ ಭಜನೆಯನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಮಾತಾಪಿತರ ಸೇವೆ ಮಾಡುವ ಭಾಗ್ಯ ದೊರೆ ಯಲಿ ಎಂದು ಶ್ರೀ ವಿಶ್ವಕರ್ಮನಲ್ಲಿ ಪ್ರಾಥಿಸುವೆ ಎಂದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿಗಳಾದ ಪ್ರಸಾದ್ ಆಚಾರ್ಯ ಹಾಗೂ ಶರತ್ ಕುಮಾರ್ ಜಿ.ಆಚಾರ್ಯ, ಜೊತೆ ಕೋಶಾಧಿಕಾರಿ ರವೀಂದ್ರ ಐ.ಪಿ ಆಚಾರ್ಯ, ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಡಾ| ಕೆ.ಮೋಹನ್, ವಿಶೇಷ ಆಮಂತ್ರಿತ ಸದಸ್ಯರುಗಳಾದ ಕೆ.ಪಿ ಚಂದ್ರಯ್ಯ ಆಚಾರ್ಯ, ಸುರೇಶ ಆಚಾರ್ಯ, ನಿತೇಶ್ ಆಚಾರ್ಯ, ವಿಠ್ಠಲ ಬಿ.ಆಚಾರ್ಯ, ಸ್ವರೂಪ್ ಆಚಾರ್ಯ, ಲೆಕ್ಕ ಪರಿಶೋಧಕ ಹರೀಶ್ ಜಿ.ಆಚಾರ್ಯ, ಮಾಜಿ ಅಧ್ಯಕ್ಷರುಗಳಾದ ಮಹಾಬಲ ಎ.ಆಚಾರ್ಯ, ನಿಟ್ಟೆ ದಾಮೋದರ ಆಚಾರ್ಯ, ಸದಾನಂದ ಎನ್.ಆಚಾರ್ಯ, ಹಿರಿಯ ಮುತ್ಸದ್ಧಿಗಳಾದ ಕೃಷ್ಣ.ವಿ ಆಚಾರ್ಯ, ಸುಂದರ ಆಚಾರ್ಯ, ಶ್ರೀಧರ ವಿ.ಆಚಾರ್ಯ ಹಾಗೂ ಸಕ್ರೀಯ ಸದಸ್ಯ ಅರುಣ್ ಪಿ.ಆಚಾರ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಗಣೇಶ್ ಕುಮಾರ್ ಪ್ರಸ್ತಾವಿಕ ನುಡಿಗಳನ್ನಾಡಿದರು. ರವೀಶ್ ಆಚಾರ್ಯ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿ ಸಿದರು. ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು. ಹರೀಶ್ ಜಿ.ಆಚಾರ್ಯ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಪ್ರಸಾದ್ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು. ವಾರ್ಷಿಕ ಪವಿತ್ರ್ಯ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ  ಸದಸ್ಯರು, ವಿಶ್ವಕರ್ಮ ಬಂಧುಗಳು ಪಾಲ್ಗೊಂಡು ಶ್ರೀ ವಿಶ್ವಕರ್ಮ, ಶ್ರೀ ಕಾಳಿಕಾಂಬಾ ದೇವರನ್ನು ಸ್ತುತಿಸಿ ತೀರ್ಥಪ್ರಸಾದ ಸ್ವೀಕರಿಸಿ ಶ್ರೀದೇವರ ಕೃಪೆಗೆ ಪಾತ್ರರಾದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.