
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮಾ.೨೯: ಕಳೆದ ೫೦ ವರ್ಷಗಳಿಂದ ಹಲವಾರು ಕೃತಿಗಳು ಬಂದಿದೆ. ಅದು ಭಾರತೀಯ ಪರಂಪರೆಯನ್ನೇ ಮುಂದುವರಿಸಿದೆ. ಈಗ ಅದನ್ನು ಬಿಟ್ಟು ಹೊಸತಾಗಿ ಬರೆಯುವ ಪ್ರಯತ್ನ ನಡೆದಿರುವುದು ತುಂಬಾ ಖುಷಿ ತಂದಿದೆ. ಮುಂಬಯಿಯ ಲೇಖಕಿಯರ ಬಳಗವು ಹೊರನಾಡಿನಲ್ಲಿ ತಮ್ಮಬಳಗವನ್ನು ರಚಿಸಿ ಹೊಸ ಹೊಸ ಕೃತಿಗಳನ್ನು ಬಿಡುಗಡೆಗೊಳಿಸು ತ್ತಿರುವುದು ಬಹಳ ಸಂತೋಷದ ವಿಷಯ. ಆದರೆ ಕನ್ನಡ ಓದುವದು ನಮ್ಮ ಪೀಳಿಗೆ ತನಕ ಇರಬಹುದು, ಮುಂದಿನ ಪೀಳಿಗೆ ಕನ್ನಡ ಓದಬಹುದೇ, ಎಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವವರು. ಪುಸ್ತಕ ಓದುವದು ಕಡಿಮೆಯಾಗಿದೆ ಸದಾ ಮೊಬೈಲ್, ಚಂಚಲ ಪ್ರವೃತ್ತಿಯವರು. ಸ್ತ್ರೀ- ಪುರುಷರ ಸಾಹಿತ್ಯದಲ್ಲಿ ಲಿಂಗ ತಾರತಮ್ಯ ಇರಬಾರದು ಎಂದು ಶಿವರಾಮ ಕಾರಂತ, ಭೈರಪ್ಪ, ಕುವೆಂಪು ಇವರು ಕಾದಂಬರಿಗಳಲ್ಲಿಯ ಸ್ರೀಪಾತ್ರವನ್ನು ಎಷ್ಟು ಸಶಕ್ತವಾಗಿ ಬರೆದಿದ್ದಾರೆ ಎಂದು ಸಾಹಿತ್ಯಕಾರ ಮತ್ತು ಮೈಸೂರು ಅಸೋಸಿಯೇಷನ್ನ ಹಾಗೂ ಎನ್. ಕೆ. ಇ. ಎಸ್. ಶಾಲೆಯ ಆಡಳಿತ ಮಂಡಳಿಯ ಅಧಿಕಾರಿ ನಾರಾಯಣ ನವಿಲೇಕರ್ ನುಡಿದರು.
ಕನ್ನಡ ಲೇಖಕಿಯರ ಬಳಗ ಮುಂಬಯಿ ‘ಸೃಜನಾ’ ಸಂಸ್ಥೆಯು ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಇಲ್ಲಿನ ಮೈಸೂರು ಅಸೋಸಿಯೇಷನ್ನ ಕಿರು ಸಭಾಗೃಹದಲ್ಲಿ ಆಯೋಜಿಸಿದ್ದ ಕೃತಿ ಲೋಕಾರ್ಪಣಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆಯನ್ನಿತ್ತು ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ‘ಗದ್ದಲದ ಗೂಡಲ್ಲಿ ಚಿಲಿಪಿಲಿ’ ಕೃತಿ ಬಿಡುಗಡೆಗೊಳಿಸಿ ಸಾಹಿತ್ಯಾಸಕ್ತರನ್ನು ಉದ್ದೇಶಿಸಿ ನವಿಲೇಕರ್ ಮಾತನಾಡಿ ಸೃಜನಾದ ಈ ಕೃತಿಕರ್ತ ಲೇಖಕಿಯರನ್ನು ಅಭಿನಂದಿಸಿದರು.
ಸೃಜನಾ ಬಳಗದ ಸಂಚಾಲಕಿ ಪದ್ಮಜಾ ಮಣ್ಣೂರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗದ್ದಲದ ಗೂಡಲ್ಲಿ ಚಿಲಿಪಿಲಿ ಕೃತಿಯ ಸಂಪಾದಕಿಯರುಗಳಾದ ನ್ಯಾಯವಾದಿ ಅಮಿತಾ ಎಸ್.ಭಾಗವತ್, ಗೌರವ ಖಜಾಂಚಿ ಡಾ| ದಾಕ್ಷಾಯಣಿ ಯಡಹಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸೃಜನಾ ಗೌರವ ಕಾರ್ಯದರ್ಶಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಕೃತಿ ಪರಿಚಯಿಸಿದರು.
ಸಂಚಾಲಕಿ ಪದ್ಮಜಾ ಮಣ್ಣೂರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ ಹೂವಿನ ಪರಿಮಳವು ನಮ್ಮನ್ನು ತನ್ನತ್ತ ಆಕರ್ಷಿಸುತ್ತದೆ. ಹಾಗೆಯೇ ಗದ್ದಲದ ಗೂಡಲ್ಲಿ ಚಿಲಿಪಿಲಿ’ ಕೃತಿಯನ್ನು ತಾವೆಲ್ಲರೂ ಓದಿ ಅಭಿಪ್ರಾಯ ತಿಳಿಸ ಬೇಕಾಗಿ ವಿನಂತಿಸುತ್ತೇನೆ. ವಾಚನಾಲಯಗಳು ಮುಚ್ಚುತ್ತಾ ಇರುವುದು ಬೇಸರದ ಸಂಗತಿ. ಆದರೂ ನಾವೆಲ್ಲರೂ ಓದುವ ಹವ್ಯಾಸ ಮುಂದುವರಿಸಬೇಕು. ಸ್ತ್ರೀಯರಲ್ಲಿ ಸುಧಾರಣೆ ಆಗಬೇಕು. ಅವರು ತಾವಾಗಿ ಮುಂದೆ ಬರಬೇಕು. ಯಾರಲ್ಲಾದರು ನ್ಯೂನತೆ ಇದ್ದರೆ ಕೇವಲ ಅನುಕಂಪ ತೋರಿಸದೆ ಅವರಿಗೆ ಸ್ಪೂರ್ತಿ ನೀಡಬೇಕು ಎಂದರು.
ಇದೇ ಸಂದರ್ಭದ ಲ್ಲಿ ಕೃತಿಯ ಸಂಪಾದಕಿಯರಾದ ಅಮಿತಾ ಭಾಗವತ್, ದೀಪಾ ಶೆಟ್ಟಿ ( ಸರೋಜಾ ಅಮಾತಿ ಅನುಪಸ್ಥಿತರಿದ್ದರು) ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೃಹನ್ಮುಂಬಯಿಯಲ್ಲಿನ ಹಿರಿಯ ಸಾಹಿತಿ, ಸೃಜನಾ ರೂವಾರಿ ಡಾ| ಸುನೀತಾ ಎಂ.ಶೆಟ್ಟಿ, ಶಾರದಾ ಅಂಬೆಸಂಗೆ, ಈಶ್ವರ ಅಲೆವೂರು, ಯಶೋದಾ ಶೆಟ್ಟಿ ಸೇರಿದಂತೆ ಸದಸ್ಯೆಯರನೇಕರು ಉಪಸ್ಥಿತರಿದ್ದರು. ಸೃಜನಾ ಸದಸ್ಯೆಯರು ಹರಿಣಿ ಎಮ್. ಶೆಟ್ಡಿ, ಶಾಂತಾ ಎನ್. ಶೆಟ್ಟಿ, ಸೃಜನಾದ ಅದ್ಯಕ್ಷ ಪದ್ಮಜಾ ಮಣ್ಣೂರು, ಪ್ರಮೋದ ಮಾಡ, ವಾಣಿ ಶೆಟ್ಟಿ, ಗಾಯತ್ರಿ ನಾಗೇಶ್ ಮತ್ತು ಶೋಭಾ ಶೆಟ್ಟಿ ಏಕ ಪಾತ್ರಾಭಿನಯ ಸಾದರ ಪಡಿಸಿದರು.
ಹರಿಣಿ ಶೆಟ್ಟಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪದ್ಮಜಾ ಮಣ್ಣೂರ ಸುಖಾಗಮನ ಬಯಸಿದರು. ದೀಪಾ ಶೆಟ್ಟಿ ಮತ್ತು ಸರ್ವ ಮಂಗಳಾ ಅರಸ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಡಾ| ದಾಕ್ಷಾಯಣಿ ಯಡಹಳ್ಳಿ ಕೃತಜ್ಞತೆ ಅರ್ಪಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.