
kallianpurdotcom: Mob 9741001849
Official release from Mount Rosary School, Santhekatte.
ಉಡುಪಿ: ವಿದ್ಯಾರ್ಥಿ ಸಂಸತ್ತು ನಾಯಕತ್ವಕ್ಕೆ ಬುನಾದಿ ಪ್ರಜಾಪ್ರಭುತ್ವದ ಮಹತ್ವ, ನಮ್ಮ ಸಂವಿಧಾನದ ಮೂಲ ಆಶಯವನ್ನು ವಿದ್ಯಾರ್ಥಿಗಳ ಸರಕಾರ ರಚನೆಯಲ್ಲಿ ಪಕ್ವಗೊಳ್ಳುತ್ತದೆ. ಶಿಸ್ತು, ಸನ್ನಡತೆ ಮತ್ತು ಜವಬ್ದಾರಿಗಳನ್ನು ವಿದ್ಯಾರ್ಥಿಗಳು ಬಾಲ್ಯದಲ್ಲಿ ವಿದ್ಯಾರ್ಥಿ ಸಂಸತ್ತಿನ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ವಿದ್ಯಾರ್ಥಿ ಮಂತ್ರಿಮಂಡಲದಲ್ಲಿ ಮುಂದಿನ ನಾಯಕರು ರೂಪುಗೊಳ್ಳುತ್ತಾರೆ ಎಂದು ಮಣಿಪಾಲ ಆಸ್ಪತ್ರೆಯ ಆರೋಗ್ಯ ವಿಜ್ಞಾನದ ಸಂಶೋಧನಾ ವಿದ್ಯಾರ್ಥಿನಿ ವರ್ಷ ತುದಿಯಡ್ಕ ಹೇಳಿದರು.
ಅವರು ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಆಂಗ್ಲ ಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂಸ್ಥೆಯ ಹಳೇ ವಿದ್ಯಾರ್ಥಿಯಾದ ಅವರು ತಮ್ಮ ಶಾಲಾದಿನಗಳ ಅನುಭವನ್ನ ಹಂಚಿಕೊಂಡರು. ಶಾಲಾ ಸಂಚಾಲಕ ವಂದನೀಯ ಡಾ| ರಾಕ್ ಡಿ’ಸೋಜ ಶಾಲಾ ನಾಯಕ, ಉಪನಾಯಕನಿಗೆ ಪ್ರತಿಜ್ಞಾ ವಿಧಿ ಬೋಧಿಸಿ ನಾಯಕರ ಹುದ್ದೆ ಅಲಂಕಾರಕ್ಕೆವಿರುವ ಸ್ಥಾನವಲ್ಲ ನಾಯಕನ ನಡೆನುಡಿ ಮತ್ತು ಸಾಧನೆಗಳನ್ನು ಉಳಿದವರು ಅನುಕರಣೆ ಮಾಡುವಂತಿರಬೇಕು ಎಂದು ಹೇಳಿದರು.
ವಿವಿಧ ಕ್ಲಬ್ಬುಗಳ, ಗೃಹಗಳ, ನಾಯಕರುಗಳಿಗೆ, ಮಂತ್ರಿ ಮಂಡಲದ ನಲ್ವತ್ತಮೂರು ಸದಸ್ಯರುಗಳಿಗೆ ಸಹಾಯಕ ಧರ್ಮಗುರು ಫಾ| ರೋಹನ್ ಮಸ್ಕರೇನಸ್ ಪ್ರತಿಜ್ಞಾವಿಧ ಬೋಧಿಸಿ ಶುಭಹಾರೈಸಿದರು. ಹುದ್ದೆ ಸ್ವೀಕರಿಸಿದ ಶಾಲಾನಾಯಕ ಸಾತ್ವಿಕ್ ನಾಯಕ್ ಚುನಾವಣೆ ಯಲ್ಲಿ ಪ್ರಚಂಡ ಮತಗಳಿಂದ ಚುನಾಯಿಸಿದ ಸರ್ವರಿಗೆ ವಂದಿಸಿ, ಸರಕಾರ ನಡೆಸಲು ಸರ್ವರ ಸಹಕಾರವನ್ನು ಕೇಳಿಕೊಂಡರು.
ಶಾಲಾಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಮಾತನಾಡಿ ಕರ್ತವ್ಯಕ್ಕೆ ಚುಕ್ಕಿ ಬಾರದಂತೆ ಕಾರ್ಯನಿರ್ವಹಿಸಲು ಕರೆ ನೀಡಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ನಿರ್ದೇಶಕರದ ಶಿಕ್ಷಕ ಆಲ್ವಿನ್ ದಾಂತಿ, ಶಿಕ್ಷಕಿ ಪ್ರೆಸಿಲ್ಲಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನೀಲ್ ಡಿ’ಸೋಜ ಸ್ವಾಗತಿಸಿ ಶಾಲಾ ಉಪನಾಯಕ ಗುರುಪ್ರಸಾದ್ ಆಚಾರ್ಯ ವಂದಿಸಿದರು. ಕಾರ್ಯ ನಿರ್ವಹಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.