Skip to main content
www.kallianpur.com | Email : kallianpur7@gmail.com | Mob : 9741001849

ಪೇಜಾವರ ಮಠದ ಮಧ್ವ ಭವನಕ್ಕೆ ಚಿತ್ತೈಸಿದ ಉತ್ತರಾದಿ ಮಠಾಧೀಶರು ವಿಶ್ವ ಕಲ್ಯಾಣವೇ ಭಗವಂತನ ಪೂಜೆಯ ಉದ್ದೇಶ : ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ.

By September 17, 2024Mumbai News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಸೆ.೧೬: ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಭಕ್ತಾದಿಗಳನ್ನು ಆಶೀರ್ವದಿಸಿ ನಮ್ಮ ಪೂಜೆ ಭಗವಂತ ಮತ್ತು ವಿಶ್ವ ಕಲ್ಯಾಣಕ್ಕಾಗಿಯೇ ನಡೆಯಬೇಕು. ವಿಶ್ವ ಕಲ್ಯಾಣವೇ ಭಗವಂತನ ಪೂಜೆಯ ಉದ್ದೇಶ. ನಾವೆಲ್ಲರೂ ಎಲ್ಲಾ ಸತ್ಕರ್ಮಗಳನ್ನು ತಿಳಿದು ಆಚರಿಸಬೇಕು. ತಂದೆ ತಾಯಿಯರು ನಮಗೆ ಜನ್ಮ ನೀಡಿದ್ದಾರೆ, ಅದಕ್ಕೆ ಕಾರಣವಾದವನು ಭಗವಂತನು.  ಈ ಸಾಧನಾ ಶರೀರಕ್ಕೆ ಮುಖ್ಯ ಕಾರಣನೇ ಭಗವಂತ ಎಂದು ಅರಿತು ನಾವು ಪುಣ್ಯಾಧಿ ಕೆಲಸಗಳನ್ನು ಮಾಡಬೇಕು ಎಂದು ಉಡುಪಿ ಶ್ರೀ ೧೦೮ ಶ್ರೀ ಉತ್ತರಾದಿ ಮಠಾಧೀಶರಾದ ಸತ್ಯಾತ್ಮ ತೀರ್ಥ ಶ್ರೀಪಾದರು ತಿಳಿಸಿದರು.

ಇಂದಿಲ್ಲಿ ಸೋಮವಾರ ಮುಂಬಯಿ ಸಾಂತಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಇಲ್ಲಿಗೆ ಆಗಮಿಸಿ ಶ್ರೀ ಪೇಜಾವರ ಮಠದಲ್ಲಿನ ಶಿಲಾಮಯ ಮಂದಿರದಲ್ಲಿನ ಶ್ರೀಕೃಷ್ಣ ದೇವರಿಗೆ ಪೂಜಿಸಿ ಬಳಿಕ ಪೇಜಾವರ ಮಠದ (ಮಧ್ವ ಭವನ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಸತ್ಯಾತ್ಮತೀರ್ಥರು ಭಕ್ತರನ್ನು ಅನುಗ್ರಹಿಸಿದರು. ಶ್ರೀಪಾದರನ್ನು ಭಕ್ತರು ಕುಂಭಸ್ವಾಗತದೊಂದಿಗೆ ಬರಮಾಡಿ ಕೊಂಡರು.

ಸತ್ಯಧ್ಯಾನ ವಿದ್ಯಾಪೀಠ ಕುಲಪತಿ ಮಾಹುಲಿ  ವಿದ್ಯಾಸಿಂಹಾಚಾರ್ಯರು ಪ್ರಸ್ತಾವಿಕವಾಗಿ ಮಾತನಾಡಿ  ಸತ್ಯಾತ್ಮ ತೀರ್ಥರ ಸಾಧನೆಗಳನ್ನು ತಿಳಿಸಿದರು. ಎಲ್ಲಿಲ್ಲೆಯೂ ಸ್ವಾಮೀಜಿ ನಿಂತು ಜನರಲ್ಲಿಂದ ದುಷ್ಟ ಚಟಗಳನ್ನು ಬಿಡಿಸಿದ್ದಾರೆ. ಮಕ್ಕಳಿಗೆ ತತ್ವಜ್ಞಾನದ ಬಗ್ಗೆ ಮಾಹಿತಿ ಕಲಿಸಿ ಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಟ್ರಸ್ಟ್ ಮುಂಬಯಿ ಇದರ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ ಹಾಗೂ ಟ್ರಸ್ಟ್‌ನ ಸದಸ್ಯರು, ಡಾ| ಎಂ.ಎಸ್.ಆಳ್ವ, ವಿದ್ವಾನ್ ಪ್ರಕಾಶ್ ಆಚಾರ್ಯ ರಾಮಕುಂಜ, ವಿದ್ವಾನ್ ಶ್ರೀಹರಿ ಭಟ್, ನಿರಂಜನ್ ಜೆ.ಗೋಗ್ಟೆ ಮತ್ತು ಮಠದ ಇತರ ಪುರೋಹಿತರು ಉಪಸ್ಥಿತರಿದ್ದು ಭಕ್ತಾದಿಗಳು ಶ್ರೀಪಾದಂಗಳವರ ಪಾದಪೂಜೆ ನೆರವೇರಿಸಿದರು.

ಗಣ್ಯರು ಶ್ರೀಗಳವರನ್ನು ಫಲಪುಷ್ಪಗಳುಂದಿಗೆ ಗೌರವಿಸಿದರು. ಪೇಜಾವರ ಮಠದ ಮುಂಬಯಿ ಶಾಖೆಯ ಮುಖ್ಯ ಆಡಳಿತಾಧಿಕಾರಿ ವಿದ್ವಾನ್ ಡಾ| ರೆಂಜಾಳ ರಾಮದಾಸ ಉಪಾಧ್ಯಾಯ ಸ್ವಾಗತಿಸಿ,  ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.