Skip to main content

ಕುರ್ಲಾ ಪಶ್ಚಿಮದ ಜರಿಮರಿ ಇಲ್ಲಿನ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ಸಂಪನ್ನಗೊಂಡ ೩೯ನೇ ವಾರ್ಷಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.

By January 16, 2026Mumbai News
kallianpurdotcom: Mob 9741001849
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.೧೫: ಕುರ್ಲಾ ಪಶ್ಚಿಮದ ಜರಿಮರಿ ಇಲ್ಲಿ ಉದ್ಯಮಿ ದಿ|ಬಿ.ಕೆ ಶೀನ ಅವರಿಂದ ಸ್ಥಾಪಿತ ಶ್ರೀ ಉಮಾ ಮಹೇಶ್ವರೀ ದೇವಸ್ಥಾನ ಸಮಿತಿಯು ವರ್ಷಂಪ್ರತಿ ನಡೆಸುವಂತೆ ಈ ಬಾರಿ ೩೯ನೇ ವಾರ್ಷಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಇಂದಿಲ್ಲಿ ಗುರುವಾರ ಸಂಜೆ ನೆರವೇರಿಸಿತು.

ದೇವಸ್ಥಾನದ ಶಿಲಾಮಯ ಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ದೇವರ ಮತ್ತು ಶ್ರೀ ಉಮಾ ಮಹೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ದೇವಸ್ಥಾನದ ಪ್ರಧಾನ ಆರ್ಚಕ ವೇ| ಮೂ| ಶ್ರೀನಿವಾಸ್ ಎನ್.ಉಡುಪ ಅವರ ಮಾರ್ಗದರ್ಶನದಲ್ಲಿ ಪುರೋಹಿತ ರುಗಳಾದ ವೇ|ಮೂ| ರಾಜಶೇಖರ್ ಭಟ್ ಮತ್ತು ವೇ| ಮೂ| ಶಂಕರ ಕಲ್ಯಾಣಿತ್ತಾಯ ಶ್ರೀ ಸತ್ಯನಾರಾಯಣ ಮಹಾಪೂಜೆ, ಮಹಾರತಿ ಗೈದು ನೆರೆದ ಸದ್ಭಕ್ತ್ತರನ್ನು ಹರಸಿದರು. ಆರ್ಚಕ ಶ್ರೀನಿವಾಸ್ ಎನ್.ಉಡುಪರು ಶ್ರೀದೇವರುಗಳ ಪೂಜಾಧಿಗಳನ್ನು ನೆರವೇರಿಸಿದ್ದು, ಸಹ ಆರ್ಚಕ ರಾಜೇಶ್ ಭಟ್ ಭಕ್ತಾದಿಗಳಿಗೆ ತೀರ್ಥ- ಪ್ರಸಾದವನ್ನಿತ್ತು ಅನುಗ್ರಹಿಸಿದರು.

ಆ ಪ್ರಯುಕ್ತ ಸಾಯಂಕಲ ವಿವಿಧ ಪೂಜಾಧಿಗಳು, ಸತ್ಯನಾರಾಯಣ ಪೂಜೆ, ಸತ್ಯನಾರಾಯಣ ಮಹಾಪೂಜೆ ನಡೆಸಲ್ಪಟ್ಟಿದ್ದು, ಮಂದಿರದ ಸ್ಥಾಪಕ ಟ್ರಸ್ಟಿ ಲಲಿತ ಬಿ.ಕೆ ಶೀನ, ಸರಿತಾ ಬಿ.ಶೀನ, ನಿಶಾ ಬಿ.ಶೀನ, ನಿಖಿತಾ ಬಿ.ಶೀನ, ಎಸ್.ತರುಣ್, ಅಶೋಕ ಪೂಜಾರಿ, ಬಿ.ಎನ್ ಶೆಟ್ಟಿ, ರವೀಂದ್ರ ಎ.ಶಾಂತಿ, ಸಂಜೀವ ಪೂಜಾರಿ ತೋನ್ಸೆ, ಶ್ರೀನಿವಾಸ ಜೋಕಟ್ಟೆ ಸೇರಿದಂತೆ ಇನ್ನಿತರ ಗಣ್ಯರು, ರವಿ ಐತಾಳ್, ಭವಾನಿ ಶಂಕರ್ ಭಟ್, ಗಿರಿ ಭಟ್, ಪರಮೇಶ್ವರ ಭಟ್, ಅರ್ಚಕರು, ಭಜನಾ ಮಂಡಳಿ, ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದು ಪೂಜಾಧಿಗಳಲ್ಲಿ ಭಾಗಿಗಳಾಗಿ ಸಿರಿಮುಡಿ, ಗಂಧಪ್ರಸಾದವನ್ನು ಸ್ವೀಕರಿಸಿ ಶ್ರೀದೇವರ ಅನುಗ್ರಹಕ್ಕೆ ಪಾತ್ರರಾದ ರು. ಶ್ರೀ ಉಮಾ ಮಹೇಶ್ವರೀ ಭಜನಾ ಮಂಡಳಿ ಮತ್ತು ಭಕ್ತರು ಭಜನೆಗೈದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.