Skip to main content
www.kallianpur.com | Email : kallianpur7@gmail.com | Mob : 9741001849

ಅದಮಾರು ಮಠ ಮುಂಬಯಿ ಶಾಖೆ ; ೨೭ನೇ ವಾರ್ಷಿಕ ರಾಮೋತ್ಸವಕ್ಕೆ ಚಾಲನೆ ಕಷ್ಟಗಳನ್ನು ಮೀರಿನಿಲ್ಲುವ ಸಾಮರ್ಥ್ಯ ಜ್ಞಾನಕ್ಕಿಕೆ : ಅದಮಾರು ಈಶಪ್ರಿಯಶ್ರೀ.

By April 10, 2024Kannada News
kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.೦೯: ಸದಾ ಶ್ರೀ ರಾಮನ ಚಿಂತನೆ ಮತ್ತು ಗುಣ ಅನುಸಂಧಾನ ಮಾಡುವ ಅಗತ್ಯವಿದ್ದು ಇದರ ಪ್ರಯೋಜನ ಎಲ್ಲರಿಗೂ ಆಗಬೇಕಾಗಿದೆ. ಶ್ರೀ ರಾಮನ ಮತ್ತು ಶ್ರೀಕೃಷ್ಣ ಮಂತ್ರವೂ ಬಹಳ ಮಡಿಮಡಿಯಾಗಿರುವ ಮಂತ್ರವಾಗಿದೆ ಹಾಗಾಗಿ ಇದನ್ನು ಮಡಿಮಾಡಿ ಕೊಂಡು ಹೇಳಬೇಕು ಅನ್ನೋದಕ್ಕಿಂತ ಇದನ್ನು ಹೇಳಿದರೆನೇ ಮಡಿಯಾಗುತ್ತಾರೆ ಅನ್ನುವುದು ತುಂಬಾ ಸತ್ಯವಾಗಿದೆ. ಈ ಮಂತ್ರವನ್ನು ಅನುಸಂಧಾನ ಮಾಡಬೇಕು. ರಾಮನ ರಕ್ಷಣೆಯ ಕಥಾನು ಸಂಧಾನದ ವೈಖರಿಯನ್ನು ಚಿಂತನೆ ಮಾಡಿದಾಗಲೇ ಬದುಕು ಸಾರ್ಥವಾಗುವುದು. ಒಬ್ಬ ಭಕ್ತನಲ್ಲಿರಬೇಕಾದ ಮತ್ತು ಬೆಳೆಸಿಕೊಳ್ಳಬೇಕಾದ ಒಂದು ಸದ್ಗುಣ ಅಂದರೆ ಶ್ರೀರಾಮ ದೇವರು ಅಥವಾ ಶ್ರೀಕೃಷ್ಣ ದೇವರ ಜಪವಾಗಿದೆ ಎಂದು ಉಡುಪಿ ಅದಮಾರು ಮಠದ ಕಿರಿಯ ಯತಿವರ್ಯರಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮಿಜಿ ಹೇಳಿದರು.

ಅಂಧೇರಿ ಪಶ್ಚಿಮದ ಇರ್ಲಾ ಇಲ್ಲಿನ ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ಸಭಾಂಗಣದಲ್ಲಿ ಇಂದಿಲ್ಲಿ ಮಂಗಳ ವಾರ ಸಂಜೆ ಆಯೋಜಿಸಿದ್ದ ಅದಮಾರು ಮಠ ಮುಂಬಯಿ ಶಾಖೆಯ ೨೭ನೇ ವಾರ್ಷಿಕ ಧಾರ್ಮಿಕ ಹಾಗೂ ಸಾಂಸ್ಕ್ರ ತಿಕ ಕಾರ್ಯಕ್ರಮ ಗಳಿಗೆ ಚಾಲನೆಯನ್ನಿತ್ತು ಈಶಪ್ರಿಯಶ್ರೀ ಸದ್ಭಕ್ತರನ್ನು ಅನುಗ್ರಹಿಸಿ ದರು.

ಉಡುಪಿ ಅದಮಾರು ಮಠಾಧೀಶ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರ ಮಾರ್ಗದರ್ಶನ ಮತ್ತು ಶುಭಾಶೀರ್ವಚ ನಗಳೊಂದಿಗೆ ೨೦೨೪ನೇ ವಾರ್ಷಿಕ ಶ್ರೀ ರಾಮನವಮಿ ಉತ್ಸವದ ಪೂರ್ವ ಸಿದ್ಧತೆಯಲ್ಲಿ ರಾಮಾಯಣ ಪ್ರವಚನ ನಡೆಸಿ ದೇವರು ನನ್ನನ್ನು ರಕ್ಷಣೆ ಮಾಡಿಯೇ ಮಾಡುತ್ತಾನೆ ಅನ್ನುವ ಭರವಸೆ, ನಂಬಿಕೆಯೇ ನಮ್ಮ ಶ್ರೀರಕ್ಷೆಯಾಗಿದೆ. ಕಷ್ಟಗಳು ಬಂದೇ ಬರುತ್ತದೆ. ಆದರೆ ಜಪ ಮಾಡುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ. ನಮ್ಮ ಸೃಷ್ಠಿಗೆ ಕಾರಣಕರ್ತ ನಾದವನನ್ನು ನಾವು ಚಿಂತನೆ, ಜಪ ಮಾಡುವುದು ಮಾನವ ಕರ್ತವ್ಯವಾಗಬೇಕು. ಭಗವಂತನನ್ನು ತಿಳಿದುಕೊಂಡು ಗೌರವಿಸುವುದು ನಮ್ಮ ನಡತೆಯಾಗಬೇಕು. ತಿಳಿದುಕೊಳ್ಳುವುದರಿಂದ ಆನಂದ ಸಹಜವಾಗಿ ಬರುತ್ತದೆ. ಎಲ್ಲಾ ಕಷ್ಟಗಳನ್ನು ಮೀರುವ ಸಾಮರ್ಥ್ಯ ಬರುತ್ತದೆ ಅನ್ನೊದೇ ಸತ್ಯವಾಗಿದೆ. ಹಾಗಾಗಿ ನಾವು ನಿರಂತರ ವಾಗಿ ಯಾವುದೇ ಅಪೇಕ್ಷೆಯಿಲ್ಲದೆ ಉಪಾಸನೆ ಮಾಡಬೇಕು. ಸದಾ ಒಳ್ಳೆಯ ಜ್ಞಾನ ಬರಲು ಪ್ರಾರ್ಥಿಸಬೇಕು. ಜ್ಞಾನದಿಂದ ಎಲ್ಲಾ ಕಷ್ಟಗಳನ್ನು ಮೀರುವಂತಹ ಸಾಮರ್ಥ್ಯ ಅದಾಗಿಯೇ ಬಂದು ಬಿಡುತ್ತದೆ. ಈ ಮೂಲಕ ಬ್ರಹ್ಮಸೂತ್ರದಂತೆ ಜ್ಞಾನ ಜೀವಿತಾವಧಿಯೂ ಹೆಚ್ಚುತ್ತದೆ ಎಂದೂ ಅದಮಾರು ಈಶಪ್ರಿಯರು ತಿಳಿಸಿದರು.

ಆದಿಯಲ್ಲಿ ಶ್ರೀಪಾದರು ಮಠದಲ್ಲಿ ಪ್ರತಿಷ್ಠಿತ ಶ್ರೀದೇವರಿಗೆ ಪೂಜೆ ನೆರವೇರಿಸಿ ಆರತಿಗೈದರು. ಬಳಿಕ ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಮತ್ತು ವಾಣಿ ರಾಜೇಶ್ ರಾವ್ ದಂಪತಿ ಶ್ರೀಪಾದರಿಗೆ ತುಳಸೀ ಹಾರ ವನ್ನಿತ್ತು ಸಾಂಪ್ರದಾಯಿ ಕವಾಗಿ ಗೌರವಿಸಿ ಕಾರ್ಯಕ್ರಮಕ್ಕೆ ಬರಮಾಡಿ ಕೊಂಡರು. ಸಂಜೆ ಶ್ರೀನಿಧಿ ಶ್ರೀಕರ್ ಭಟ್ ಮತ್ತು ಸಾವಿತ್ರಿ ಎಸ್.ಭಟ್ ಭಕ್ತಿಗೀತೆೆ ಪ್ರಸ್ತುತ ಪಡಿಸಿದ್ದು, ಶ್ರೀವತ್ಸ ಎಸ್.ಭಟ್ ತಬಲಾ ಮತ್ತು ಜನಾರ್ಧನ ಸಾಲ್ಯಾನ್ ಹಾರ್ಮೋನಿಯಂ ವಾದನದ ಮೂಲಕ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಸಿಎ| ಸುಧೀರ್ ಆರ್.ಎಲ್ ಶೆಟ್ಟಿ, ಗೋಪಾಲ ಭಟ್, ಜಗನ್ನಾಥ್ ಪುತ್ರನ್, ನಾರಾಯಣ ಪಾಟೀಲ್, ರಾಘವೇಂದ್ರ ಉಡುಪ, ಮಾ| ಶ್ರೀಷ ಆರ್.ರಾವ್ ಸೇರಿದಂತೆ ಅನೇಕ ಪುರೋಹಿತರು ಮತ್ತು ಭಕ್ತಾದಿಗಳು ಹಾಜರಿ ದ್ದರು. ಶ್ರೀಪಾದರು ಸಂಗೀತ ಮಂಡಳಿ ಮತ್ತು ನೆರೆದ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ಎ.೧೭ರ ಬುಧವಾರ ರಾಮನವಮಿ ತನಕ ದಿನಂಪ್ರತಿ ಸಂಜೆ ೫.೩೦ ರಿಂದ ರಾತ್ರಿ ೮.೦೦ ಗಂಟೆ ತನಕ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಾಗಿಸಿ ರಾಮನವಮಿ ಸಂಭ್ರಮಕ್ಕೆ ಪೂರ್ವಸಿದ್ಧತೆ ನಡೆಸಲಾಗುವುದು. ರಾತ್ರಿ ದಿನಾ ರಾತ್ರಿ ೭.೦೦ ಗಂಟೆಯಿಂದ ಶ್ರೀ ಈಶಪ್ರಿಯತೀರ್ಥರು ರಾಮಾಯಣ ಪ್ರವಚನ ನೀಡಲಿದ್ದಾರೆ. ಎ.೧೭ನೇ ಬುಧವಾರ ರಾಮ ನವಮಿ ದಿನ ಬೆಳಿಗ್ಗೆ ೭.೦೦ ಗಂಟೆಗೆ ಪಂಚಾಮೃತ ಅಭಿಷೇಕ, ಪೂರ್ವಾಹ್ನ ೧೦.೦೦ ಗಂಟೆ ಯಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಮತ್ತು ಹರಿಕೃಷ್ಣ ಭಜನಾ ಮಂಡಳಿಯಿಂದ ಭಜನೆ, ೧೧.೦೦ ಗಂಟೆಯಿಂದ ಕು| ನವ್ಯಾ ರಾವ್ ಅವರಿಂದ ಶಾಸ್ತ್ರೀಯ ಸಂಗೀತ. ೧೧.೩೦ ಗಂಟೆಯಿಂದ ವಿಧಿ ರಾವ್, ಅಕ್ಷತಾ ರಾವ್ ಮತ್ತು ಕ್ಷಾಮ ರಾವ್ ಅವರಿಂದ ಗೀತಾ ನೃತ್ಯ. ೧೨.೦೦ ಗಂಟೆಯಿಂದ ಪವಿತ್ರ ಭಟ್ ಮತ್ತು ಬಳಗದಿಂದ ಭರತನಾಟ್ಯಂ. ಮಧ್ಯಾಹ್ನ ೧೧.೩೦ ಗಂಟೆಗೆ ಮಹಾಪೂಜೆ, ೧೨.೦೦ ಗಂಟೆಯಿಂದ ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ  ನಡೆಸಲಾಗು ವುದು. ಮಧ್ಯಾಹ್ನ ೧.೦೦ ಗಂಟೆಯಿಂದ ವಾಗ್ದೇವಿ ಭಜನಾ ಮಂಡಳಿಯಿಂದ ಭಜನೆ, ೦೨.೦೦ ಗಂಟೆಯಿಂದ ದಿನೇಶ್ ಕೋಟ್ಯಾನ್ ಬಳಗದಿಂದ ಸೆಕ್ಸೋಪೋನ್ ವಾದನ, ೦೩.೦೦ ಗಂಟೆಯಿಂದ ಪರೇಲ್ ಶ್ರೀನಿವಾಸ ಭಟ್ ಅವರಿಂದ ಹರಿಕಥೆ, ೦೪.೦೦ ಗಂಟೆಯಿಂದ ವಿಠಲ ಭಜನಾ ಮಂಡಳಿ ಅವರಿಂದ ಭಜನೆ, ೫.೦೦ ಗಂಟೆಯಿಂದ ಡಾ| ಸುಕನ್ಯಾ ಭಟ್ ಮತ್ತು ಬಳಗದಿಂದ ನೃತ್ಯರೂಪಕ, ೬.೦೦ ಗಂಟೆಯಿಂದ ಪಲ್ಲಕ್ಕಿ ಉತ್ಸವ, ೭.೦೦ ಗಂಟೆಯಿಂದ ಶ್ರೀ ಈಶ ಪ್ರಿಯತೀರ್ಥರು ರಾಮ ನವಮಿಯ ವಿಶೇಷ ಪ್ರವಚನ ಮತ್ತು ಆಶೀರ್ವಚನ ನೀಡಲಿದ್ದಾರೆ. ರಾತ್ರಿ ೮.೦೦ ಗಂಟೆಗೆ ಮಂಗಲ ಮಂತ್ರಾಕ್ಷತಾ, ರಾತ್ರಿ ಪೂಜೆ, ನಂತರ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದೆ. ಆ ಪ್ರಯುಕ್ತ ಮಹಾನಗರದಲ್ಲಿನ ಭಕ್ತರೆಲ್ಲರೂ ಆಗಮಿಸಿ ಪ್ರವಚನ, ಪೂಜಾಧಿಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗು ವಂತೆ ವ್ಯವಸ್ಥಾಪಕ ರಾಜೇಶ್ ವಿ.ರಾವ್ ಈ ಮೂಲಕ ವಿನಂತಿಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.