Skip to main content
www.kallianpur.com | Email : kallianpur7@gmail.com | Mob : 9741001849

ಅದಮಾರು ಮಠ ಮುಂಬಯಿ ಆಚರಿಸಿದ ೨೭ನೇ ವಾರ್ಷಿಕ ಧಾರ್ಮಿಕ ಉತ್ಸವ ಪಲ್ಲಕ್ಕಿ ಉತ್ಸವ-ಗಜ ರಥೋತ್ಸವ-ಧಾರ್ಮಿಕ ವೈವಿಧ್ಯತೆಗಳಿಂದ ಸಂಭ್ರಮಿಸಿದ ರಾಮನವಮಿ.

By April 18, 2024Mumbai News
kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.೧೭: ಉಡುಪಿ ಅದಮಾರು ಮಠಾಧೀಶ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರ ಮಾರ್ಗದರ್ಶನ ಮತ್ತು  ಶುಭಾಶೀರ್ವಚನ ಗಳೊಂದಿಗೆ ಇಂದಿಲ್ಲಿ ಬುಧವಾರ ಸಂಜೆ ಅಂಧೇರಿ ಪಶ್ಚಿಮದಲ್ಲಿನ ಶ್ರೀ ಅದಮಾರು ಮಠದಲ್ಲಿ ಆಚರಿಸಿದ ಶ್ರೀ ರಾಮನವಮಿ ಉತ್ಸವ-೨೦೨೪ ಮತ್ತು ಅದಮಾರು ಮುಂಬಯಿ ಶಾಖೆಯ ೨೭ನೇ ವಾರ್ಷಿಕ ಧಾರ್ಮಿಕ ಉತ್ಸವದಲ್ಲಿ ಭಕ್ತಾದಿಗಳನ್ನುದ್ದೇಶಿಸಿ ಈಶಪ್ರಿಯತೀರ್ಥರು ನುಡಿದರು.

ಬೆಳಿಗ್ಗೆ ಈಶಪ್ರಿಯ ತೀರ್ಥ ಸ್ವಾಮಿಜಿ ಅವರು ಮಠದ ಸನ್ನಿಧಿಯಲ್ಲಿ ಅದಮಾರು ಪಟ್ಟದದೇವರಾದ ಶ್ರೀ ಕಾಳಿಯ ಮರ್ದನ ಕೃಷ್ಣ, ಮುಂಬಯಿ ಮಠದಲ್ಲಿ ಪ್ರತಿಷ್ಠಾಪಿತ ಶ್ರೀರಾಮ, ಉಡುಪಿ ಶ್ರೀಕೃಷ್ಣ, ಭೂವರಾಹ ದೇವರುಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ನೆರೆದ ಸದ್ಭಕ್ತರನ್ನು ಹರಸಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿ ವಿವಿಧ ರೂಪದ ಸೇವೆಗೈದು ಶ್ರೀರಾಮ ದೇವರ ಕೃಪೆಗೆ ಪಾತ್ರರಾದರು.

ರಾಮ ನವಮಿ ನಿಮಿತ್ತ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ಭವ್ಯ ಮೆರವಣಿಗೆಯಲ್ಲಿ ಪಲ್ಲಕ್ಕಿ ಉತ್ಸವ, ಗಜ ರಥೋತ್ಸವ ನಡೆಸಲಾಯಿತು. ಸುರೇಶ್ ಭಟ್ ಕುಂಟಾಡಿ ಶ್ರೀದೇವರ ಉತ್ಸವಮೂರ್ತಿ ಹೊತ್ತು ಮೆರವಣಿಗೆ ಯಲ್ಲಿ ಸಾಗಿದ್ದು, ಪರೇಲ್  ಶ್ರೀನಿವಾಸ ಭಟ್ ಭಕ್ತದಾಸ ನಾಗಿದ್ದರು. ಪಡುಬಿದ್ರಿ ಬ್ರಹ್ಮಸ್ಥಾನದ ಗುರಿಕಾರ ನಾಗರಾಜ್ ಪಿ.ಎಸ್, ಗಣೇಶ್ ರಾವ್ ಪಡುಬಿದ್ರಿ, ವಿಶ್ವಜಿತ್ ಪಡುಬಿದ್ರಿ, ಯತೀಶ್ ಕಿನ್ನಿಗೋಳಿ ಶ್ರೀದೇವರಿಗೆ, ಪಲ್ಲಕ್ಕಿ, ರಥಕ್ಕೆ ವಿಶೇಷ ಪುಷ್ಪಾಲಂಕಾರ ಸೇವೆಗೈದರು.

ಪುರೋಹಿತರುಗಳಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ (ಶ್ರೀ ಪೇಜಾವರ ಮಠ), ವಿದ್ವಾನ್ ವಿಷ್ಣು ಕಾರಂತ್ (ಶ್ರೀ ಸುಬ್ರಹ್ಮಣ್ಯ ಮಠ ಚೆಂಬೂರು), ವಾಸುದೇವ ಭಟ್ ಮಿರಾ ರೋಡ್, ಕೃಷ್ಣರಾಜ್ ಉಪಾಧ್ಯಾಯ, ಪವನ್ ಭಟ್ ಅಣ್ಣಿಗೇರಿ, ಗೋಪಾಲ ಭಟ್, ಶಂಕರ ಕಲ್ಯಾಣಿತ್ತಾಯ, ಜನಾರ್ದನ ಅಡಿಗ, ಅಂಬೋಲಿ ಶ್ರೀಪಾದ್ ಭಟ್, ರಾಘವೇಂದ್ರ ಉಡುಪ, ಗಿರಿಧರ್ ಭಟ್, ಸದಾನಂದ ತಂತ್ರಿ ಸೇರಿದಂತೆ ಪುರೋಹಿತರನೇಕರು ಉಪಸ್ಥಿತ ರಿದ್ದರು.

ಮಂಗಲ ಮಂತ್ರಾಕ್ಷತಾ, ರಾತ್ರಿ ಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಸಲ್ಪಟ್ಟಿತು. ದಿನಪೂರ್ತಿ ಯಾಗಿಸಿ ನಡೆಸಲ್ಪಟ್ಟ ಸಾಂಸ್ಕ್ರತಿಕ ಉತ್ಸವದಲ್ಲಿ ಹರಿಕೃಷ್ಣ ಭಜನಾ ಮಂಡಳಿ, ವಾಗ್ದೇವಿ ಭಜನಾ ಮಂಡಳಿ, ವಿಠಲ ಭಜನಾ ಮಂಡಳಿ ಮತ್ತು ಭಕ್ತರು ಭಜನೆಗೈದರು. ಕು| ನವ್ಯಾ ರಾವ್ ಅವರಿಂದ ಶಾಸ್ತ್ರೀಯ ಸಂಗೀತ. ವಿಧಿ ರಾವ್, ಅಕ್ಷತಾ ರಾವ್ ಮತ್ತು ಕ್ಷಾಮ ರಾವ್ ಅವರಿಂದ ಗೀತಾ ನೃತ್ಯ. ಪವಿತ್ರ ಭಟ್ ಮತ್ತು ಬಳಗದಿಂದ ಭರತನಾಟ್ಯಂ. ದಿನೇಶ್ ಕೋಟ್ಯಾನ್ ಬಳಗದಿಂದ ಸೆಕ್ಸೋಪೋನ್ ವಾದನ, ಡಾ| ಸುಕನ್ಯಾ ಭಟ್ ಮತ್ತು ಬಳಗ ದಿಂದ ನೃತ್ಯರೂಪಕ ಇತ್ಯಾದಿ ವೈವಿಧ್ಯತೆಗಳಿಂದ ವಾರ್ಷಿಕ ರಾಮ ನವಮಿ ಸಂಭ್ರಮಿಸಲ್ಪಟ್ಟಿತು.

ಉತ್ಸವದ ವಿವಿಧ ಮಹಾಸೇವೆಗೈದ ಗಣ್ಯರನ್ನು ಶ್ರೀಪಾದರು ಶಾಲು ಹೊದಿಸಿ ಸ್ಮರಣಿಕೆ, ಪುಷ್ಫಗುಚ್ಛಗಳನ್ನಿತ್ತು ಗೌರವಿಸಿ ಹರಸಿದರು. ಬಳಿಕ ಶ್ರೀ ಈಶಪ್ರಿಯತೀರ್ಥರು ರಾಮ ನವಮಿಯ ವಿಶೇಷ ಪ್ರವಚನವನ್ನೀಡಿ ಭಜನಾ ಮಂಡಳಿಗಳು, ಕಾರ್ಯಕ್ರಮ ಗಳನ್ನಿತ್ತ ಎಲ್ಲರಿಗೂ, ನೆರೆದ ಭಕ್ತರಿಗೆ ಮಂತ್ರಾಕ್ಷತೆಯನ್ನಿತ್ತು ಹರಸಿ ಕಳೆದ ಒಂಬತ್ತು ದಿನಗಳ ಪೂರ್ವಸಿದ್ಧತೆಯೊಂದಿಗೆ ಆಚರಿಸಲಾದ ವಾರ್ಷಿಕ ಉತ್ಸವಕ್ಕೆ ಮಂಗಳವನ್ನಾಡಿದರು.

ಉತ್ಸವದಲ್ಲಿ ಬಿ.ಆರ್ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ, ರಾಮವಿಠಲ ಕಲ್ಲೂರಾಯ, ವಾಣಿ ರಾಜೇಶ್ ರಾವ್, ಬಾಲಕೃಷ್ಣ ಭಟ್, ಜಗನ್ನಾಥ್ ಪುತ್ರನ್, ತಾರಾ ಭುಜಂಗ ರಾವ್, ಮಾ| ಶ್ರೀಷ ಆರ್.ರಾವ್‌ಸೇರಿದಂತೆ ನೂರಾರು ಗಣ್ಯರು ಸೇರಿದಂತೆ, ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ಶ್ರದ್ಧಾಭಕ್ತಿ ಯಿಂದ ಶ್ರೀರಾಮನ ಸ್ತುತಿಗೈದರು. ಮಠದ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಸರ್ವರಿಗೂ ಸುಖಾಗಮನ ಬಯಸಿ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.