Skip to main content
www.kallianpur.com | Email : kallianpur7@gmail.com | Mob : 9741001849

ಐಲೇಸಾದ ಅನಂತ್ ರಾವ್ ಅವರಿಗೆ ದ. ರಾ ಬೇಂದ್ರೆ ಪ್ರಶಸ್ತಿ.

By November 2, 2023Mumbai News
kallianpurdotcom: 02/11/23
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ನ.೦೨: ಅಬುಧಾಬಿ ಕರ್ನಾಟಕ ಸಂಘ ಕರ್ನಾಟಕ ರಾಜ್ಯೋತ್ಸವದ ಸಲುವಾಗಿ ಪ್ರತಿ ವರ್ಷ ಕೊಡಮಾಡುವ ದ.ರಾ ಬೇಂದ್ರೆ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಐಲೇಸಾದ ಸದಸ್ಯ , ಸಾಹಿತ್ಯ ನಿರೂಪಕ ಅನಂತ್ ರಾವ್ ಆಯ್ಕೆಯಾಗಿದ್ದಾರೆ . ಇದೇ ಬರುವ ರವಿವಾರ (ನ.೦೫) ರಂದು ಇಂಡಿಯಾ ಸೋಶಿಯಲ್ & ಕಲ್ಚರ್ ಸೆಂಟರ್ ಅಬುಧಾಬಿ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.ಸಾಹಿತ್ಯ ಸಂಸ್ಕ್ರತಿ ಉಳಿಸಿಬೆಳೆಸುವ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ ಇವರ ಮುಂದಾಳತ್ವದಲ್ಲಿ ನಡೆಯುವ ಈ ಕಾರ್ಯಕ್ರಮ ದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಭಾರತೀಯ ರಾಯಭಾರಿ ಎಚ್.ಇ ಸಂಜಯ್ ಸುಧೀರ್ ಮುಖ್ಯ ಅತಿಥಿ ಗಳಾಗಿ ಭಾಗವಹಿಸುವರು, ಗೌರವ ಅತಿಥಿಯಾಗಿ ಖ್ಯಾತ ಸಂಗೀತ ನಿರ್ದೇಶಕ , ಹರಿಕಥಾ ವಿದ್ವಾನ್ ತೋನ್ಸೆ ಪುಷ್ಕಳ ಕುಮಾರ್ ಸಭೆಯನ್ನು ಅಲಂಕರಿಸುವರು. ಪುನೀತ್ ರಾಜಕುಮಾರ್ ನೆನಪಲ್ಲಿ ಸಾಂಸ್ಕ್ರತಿಕ ಆಚರಣೆ, ಜಾನಪದ ನೃತ್ಯ ಮತ್ತು ಕನ್ನಡದ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಗಳು ಜೊತೆಯಾಗಿ ನಡೆಯಲಿದೆ. ಐಲೇಸಾ-ದಿ ವಾಯ್ಸ್ ಆಫ್ ಓಷನ್ (ರಿ) ಸಂಸ್ಥೆ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಕೆ ಮತ್ತು ಸನ್ಮಾನಿತರಿಗೆ ಅಭಿನಂದ ನೆಗಳನ್ನು ತಿಳಿಸಿದೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.