Skip to main content
www.kallianpur.com | Email : kallianpur7@gmail.com | Mob : 9741001849

ಅರುಣೋದಯ ಕಲಾ ನಿಕೇತನ ಸಂಸ್ಥೆಯಿಂದ ಆರಂಗ್ರೇಟಂ ಕಾರ್ಯಕ್ರಮ.

By June 11, 2023Mumbai News

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.೧೦: ಕಲಾರಾಧನೆಯಲ್ಲಿ ಸಾರ್ಥಕ ಆರು ದಶಕಗಳನ್ನು ಪೂರೈಸಿರುವ ಬೃಹನ್ಮುಂಬಯಿ ಇಲ್ಲಿನ ಪ್ರತಿಷ್ಠಿತ ಹಾಗೂ ಹಿರಿಯ ಕಲಾಸಂಸ್ಥೆ `ಅರುಣೋದಯ ಕಲಾ ನಿಕೇತನ ಮುಂಬಯಿ’ ಇಂದಿಲ್ಲಿ ಶನಿವಾರ ಅಪರಾಹ್ನ ಚೆಂಬೂರು ಅಲ್ಲಿನ ಫೈನ್ ಆರ್ಟ್ಸ್ ಆರ್‌ಸಿಎಫ್ ಆಕಾಡೆಮಿ ಸಭಾಗೃಹದಲ್ಲಿ ಕು| ಯಾವಿ ಗಾಂಧಿ ಇವರ ಭರತನಾಟ್ಯ (ಅರಂಗೇಟ್ರಮ್) ರಂಗ ಪ್ರವೇಶ ಕಾರ್ಯಕ್ರಮ ನೆರವೇರಿಸಿತು.

ಕಲಾ ನಿಕೇತನದ ಸಂಸ್ಥಾಪಕ ವಿದ್ವಾನ್ ದಿ| ಗುರು ಎಂ.ಎನ್ ಸುವರ್ಣ ಅವರನ್ನು ಸ್ಮರಿಸಿ ಆರಂಭಿಸಲ್ಪಟ್ಟ ಕಾರ್ಯಕ್ರಮದಲ್ಲಿ ಅರುಣೋದಯ ಸಂಸ್ಥೆಯ ನಿರ್ದೇಶಕಿ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ನಾವುಂದ ಇವರ ಶಿಷ್ಯೆ ಭರತನಾಟ್ಯ ರಂಗ ಪ್ರವೇಶ ನಡೆಸಿ ಪುಷ್ಪಾಂಜಲಿ, ಮಹಾ ಗಣಪತಿ, ನವಕರ್ ಮಹಾ ಮಂತ್ರ, ಮಯೂರ ಅಲ್ಲರಿಪು, ಜತಿಸ್ವರಮ್, ಕೃತಿ, ವರ್ಣಂ, ಪದಂ (ತಾಯೆ ಯಶೋದಾ), ಜೈನ್ ಸ್ತವನ್ (ನೇಮಿ ರಾಜುಲ್), ಪದಂ (ನಮೋ ನಮೋ), ತಿಲ್ಲಾನ ಇತ್ಯಾದಿಗಳನ್ನು ಭರತನಾಟ್ಯ ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಮಣಿಪುರಿ ಶಾಸ್ತ್ರೀಯ ನೃತ್ಯ ನಿರೂಪಕಿ ಲತಾಸನಾ ದೇವಿ ಉಪಸ್ಥಿತರಿದ್ದು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಶುಭಾರೈಸಿದರು. ಈ ಸಂದರ್ಭದಲ್ಲಿ ರಾಜಬಾಬು ಗಾಂಧಿ, ಆಶಾಬೆನ್ ಗಾಂಧಿ, ಹರೇಶ್‌  ವಖಾರಿಯಾ, ಮಿನಾಬೆನ್ ವಖಾರಿಯಾ, ಮಿಹಿರ್ ಗಾಂಧಿ, ಮಾನ್ಸಿ ಗಾಂಧಿ, ಉಪಸ್ಥಿತರಿದ್ದರು.

ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರ ಸ್ವರಸಂಗೀತ ಮತ್ತು ವಿಷ್ಣುದಾಸ ಮನಲರ್ ಅವರ ನೃತ್ಯಗಾಯನದೊಂದಿಗೆ ಭರತನಾಟ್ಯ ಕಾರ್ಯಕ್ರಮ ನೆರವೇರಿದ್ದು ಕವಿರಾಜ್ ಸುವರ್ಣ ಅವರು ಮೃದಂಗ, ನಚಿಕೇತ್ ಶ್ರೀಯಾನ್ ಅಮ್ರ ಘಟಾಂ,ರಾಘವೇಂದ್ರ ಬಾಳಿಗಾ ಅವರು ಕೊಳಲು ಮತ್ತು ಸತೀಶ್ ಶೇಷಾದ್ರಿ ಅವರು ವಾಯೋಲಿನ್ ವಾದನಗಳೊಂದಿಗೆ ಭರತನಾಟ್ಯ ಕಾರ್ಯಕ್ರಮ ಜರುಗಿತು.

ದೀಪ ಮಣಿ ಮತ್ತು ಅರುಷಿ ರೈ ಕಾರ್ಯಕ್ರಮ ನಿರೂಪಿಸಿದರು. ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.