Skip to main content
www.kallianpur.com | Email : kallianpur7@gmail.com | Mob : 9741001849

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ನೂತನ ಕಾರ್ಯಾಲಯ ಶುಭಾರಂಭ.

By September 6, 2023Mumbai News
kallianpurdotcom: 06/09/23
(ಚಿತ್ರ /ವರದಿ : ತಾರ ರೋನ್ಸ್ ಬಂಟ್ವಾಳ್

ಮುಂಬಯಿ, ಸೆ. ೦೫ : ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ.) ಮುಂಬಯಿ ಇದರ ನೂತನ ಕಾರ್ಯಾಲಯವು ಕಳೆದ ರವಿವಾರ ಥಾಣೆ ಪಶ್ಚಿಮದಲ್ಲಿನ ನೌಪಾಡದ ಗಾಂವ್ದೇವಿ ಮುಕುಂದ್ ನಾಥು ಪಥ್ ನಲ್ಲಿರುವ `ಮಾನಸಿ’ ಕಟ್ಟಡದಲ್ಲಿ ಸೇವಾರಂಭ ಗೊಳಿಸಲಾಗಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ೧೬೯ನೇ ಜಯಂತಿ ಆಚರಣೆಯನ್ನು ವಿಜೃಂಭಣೆಯಿಂದ ಸಂಭ್ರಮಿಸಲಾಯಿತು.

ಸಂಘದ ಅಧ್ಯಕ್ಷ ಸೂರ್ಯ ಎಸ್.ಪೂಜಾರಿ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಬೆಳಿಗ್ಗೆ ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ಗಣಹೋಮ, ಲಕ್ಷ್ಮಿ ಪೂಜೆ, ಮಂಟಪ ಶುದ್ಧಿ, ಗುರು ಪೂಜೆ ಮುಂತಾದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪುರೋಹಿತ ಗುರುಪ್ರಸಾದ ಭಟ್ ಮತ್ತು ತಂಡವು ವಿವಿಧ ಪೂಜಾಧಿಗಳನ್ನು ನಡೆಸಿ ನೆರೆದ ಸದ್ಭಕ್ತರನ್ನು ಹರಸಿದರು.

ಸಂಘದ ಅಧ್ಯಕ್ಷ ಸೂರ್ಯ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ತದನಂತರ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಸಮಾಜದ ಗೌರವಾನ್ವಿತ ಗಣ್ಯರುಗಳಾದ ಮಂಜುನಾಥ ಎ.ಬಿಲ್ಲವ ಶಿರೂರು (ಸಂಘದ ಮಾಜಿ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರು- ಟೆಕ್ನೋ ಫ್ಲೋ ಕನಸ್ಟ್ರ‍್ಕ್ಸನ್ ಪ್ರೈವೇಟ್ ಲಿಮಿಟೆಡ್), ಅಡ್ವಕೇಟ್ ಆನಂದ ಎಂ.ಪೂಜಾರಿ (ಸಂಘದ ಮಾಜಿ ಅಧ್ಯಕ್ಷರು ಹಾಗೂ ನ್ಯಾಯವಾದಿ ಉಚ್ಚ ನ್ಯಾಯಾಲಯ ಮುಂಬಯಿ), ವಿಶ್ವನಾಥ ಎ.ಪೂಜಾರಿ ಕೋಡಿ (ಉದ್ಯಮಿ, ಅರುಣಾ ಟೆಕ್ಸ್ಟೈಲ್ಸ್ ಥಾಣೆ), ತಿಮ್ಮಪ್ಪ ಸಿ.ಪೂಜಾರಿ ಬಾಗಾಳಮನೆ ಏಳಜಿತ್ ಮತ್ತು ಸುರೇಶ ಸಿ. ಪೂಜಾರಿ ಬಡಾಕೆರೆ ನಾವುಂದ (ಉದ್ಯಮಿಗಳು ಮುಂಬಯಿ), ಡಾ| ಶೇಖರ ಹೆಮ್ಮಾಡಿ (ಶಿಶು ತಜ್ಞ) ಹಾಗೂ ಸಂಘದ ಮಾಜಿ ಅಧ್ಯಕ್ಷ ಎಸ್.ಟಿ ಪೂಜಾರಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುವರ್ಯರ ೧೬೯ನೇ ಜಯಂತಿ ಪ್ರಯುಕ್ತ ಭಜನೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನೆರವೇರಿಸಲ್ಪಟ್ಟಿತು. ಸಂಘದ ಸದಸ್ಯರು, ಸಮಾಜ ಬಾಂಧವರು ಹಾಗೂ ಹಿತಚಿಂತಕರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದು ತೀರ್ಥ ಪ್ರಸಾದ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ಎನ್.ಎಂ ಬಿಲ್ಲವ, ಆನಂದ ಕೆ.ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್.ಪೂಜಾರಿ, ಗೌರವ ಕೋಶಾಧಿಕಾರಿ ರಾಜಶ್ರೀ ಪಿ.ಸಾಲ್ಯಾನ್, ಜತೆ ಕಾರ್ಯದರ್ಶಿಗಳಾದ ಸುಶೀಲ ಆರ್.ಪೂಜಾರಿ, ಹರೀಶ್ ಎನ್.ಪೂಜಾರಿ, ಜತೆ ಕೋಶಾಧಿಕಾರಿಗಳಾದ ರಮೇಶ ಜಿ.ಬಿಲ್ಲವ, ರತ್ನಾಕರ ಎಸ್.ಪೂಜಾರಿ, ಆಂತರಿಕ ಲೆಕ್ಕಪರಿಶೋಧಕ ರಾಜೀವ ಎಂ.ಪೂಜಾರಿ, ಮಹಿಳಾ ಸಮಿತಿ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್.ಪೂಜಾರಿ, ಯುವ ಅಭ್ಯುದಯ ಸಮಿತಿ ಕಾರ್ಯಾಧ್ಯಕ್ಷೆ ದೀಪಾ ವೈ.ಪೂಜಾರಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ವಿ.ಪೂಜಾರಿ, ಕಾರ್ಯದರ್ಶಿ ಬಾಬು ಎ.ಪೂಜಾರಿ ಮತ್ತು ಆಡಳಿತ ಮಂಡಳಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.