Skip to main content
www.kallianpur.com | Email : kallianpur7@gmail.com | Mob : 9741001849

ಫೆ.೨೪; ಮೈಸೂರು ಅಸೋಸಿಯೇಶನ್‌ನ ಕಿರು ಸಭಾಗೃಹದಲ್ಲಿ ಗೋಪಾಲ ತ್ರಾಸಿ ಅವರ ಕೃತಿಗಳ ಬಿಡುಗಡೆ-ಕವಿಗೋಷ್ಠಿ ಕಾರ್ಯಕ್ರಮ.

By February 19, 2024Kannada News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಫೆ.೧೮: ಮುಂಬಯಿ ಚುಕ್ಕಿ ಸಂಕುಲ ಮತ್ತು ಕರ್ನಾಟಕ ಸಂಘ, ಅಂಧೇರಿ (ರಿ.) ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕವಿ, ಕತೆಗಾರ ಗೋಪಾಲ ತ್ರಾಸಿ ಅವರ ಚಿತ್ರ ಚೌಕಟ್ಟಿನಾಚೆ ಮತ್ತು ಓದುವಖುಷಿ ಕೃತಿಗಳ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮವು ಇದೇ ಬರುವ ದಿನಾಂಕ ೨೪. ಫೆ.೨೦೨೪ ಶನಿವಾರ ಸಂಜೆ ೪.೩೦ ಗಂಟೆಗೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇ ಶನ್‌ನ ಕಿರು ಸಭಾಗೃಹದಲ್ಲಿ ಆಯೋಜಿಸಲಾಗಿದೆ.

ಹಿರಿಯ ಸಂಘಟಕ, ವಿಮರ್ಶಕ ಬೊಮ್ಮರ ಬೆಟ್ಟು ಎ.ನರಸಿಂಹ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮ ದಲ್ಲಿ ಚುಕ್ಕಿ ಸಂಕುಲ ಮುಂಬಯಿ ಪ್ರಕಾಶಕತ್ವದ ಕೃತಿಗಳಾದ `ಚಿತ್ರ ಚೌಕಟ್ಟಿನಾಚೆ’ ಮತ್ತು `ಓದುವಖುಷಿ’  ಕೃತಿ ಗಳನ್ನು ಹಿರಿಯ ಲೇಖಕಿ, ಸಂಘಟಕಿ ಶಕುಂತಲ ಆರ್.ಪ್ರಭು ಬಿಡುಗಡೆ ಗೊಳಿಸಲಿದ್ದಾರೆ. ಲೇಖಕಿ, ಹವ್ಯಕ ಸಂಪಾದಕಿ ನ್ಯಾಯವಾದಿ ಅಮಿತಾ ಎಸ್.ಭಾಗವತ್ ಮತ್ತು ಲೇಖಕಿ ಕಲಾ ಭಾಗವತ್ ಕ್ರಮವಾಗಿ ಕೃತಿ ಪರಿಚಯ ನಡೆಸಲಿದ್ದಾರೆ.

ಸವಿತಾ ಅರುಣಾ ಶೆಟ್ಟಿ, ಡಾ| ಸುರೇಖಾ ನಾಯಕ್, ಅಶೋಕ ವಳದೂರು, ಸತೀಶ್ ಕೆ.ಎನ್., ಡಾ| ವೈಶಾಲಿ ನಾಯಕ್, ವಾಣಿ ರಘುನಾಥ್, ಕೃಷ್ಣ ಬಿ.ಶೆಟ್ಟಿ, ಸಾ.ದಯಾ, ಗೋಪಾಲ ತ್ರಾಸಿ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಈ ಕಾರ್ಯಕ್ರಮಗಳಲ್ಲಿ ಮಹಾನಗರದಲ್ಲಿನ ಸಾಹಿತ್ಯಾಸಕ್ತ ಹಿತೈಷಿಗಳು ಭಾಗವಹಿಸುವಂತೆ ಕರ್ನಾಟಕ ಸಂಘ ಅಂಧೇರಿ ಇದರ ಪದಾಧಿಕಾರಿ ಗಳು, ಮುಂಬಯಿ ಚುಕ್ಕಿ ಸಂಕುಲ (ಲೇಖಕ-ಕಲಾವಿದರ ಬಳಗ) ಇದರ ಸಂಚಾಲಕರು ಈ ಮೂಲಕ ಆದರದ ಸ್ವಾಗತ ಕೋರಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.