
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.೨೭: ಭಾಷೆ ಮನುಷ್ಯನ ಬದುಕಿನ ಅವಿಭಾಜ್ಯ ಅಂಗ. ಅದರಲ್ಲೂ ಕನ್ನಡಿಗಾರದ ನಮಗೆ ಭಾಷೆಯು ತಾಯಿ ಇದ್ದಂತೆ. ಇಂತಹ ಕನ್ನಡಿಗರ ಬದುಕಿನಲ್ಲಿ ಕನ್ನಡ ಭಾಷೆಯು ಶ್ರೇಷ್ಠ ಸ್ಥಾನಮಾನ ಪಡೆದುಕೊಳ್ಳಲು ಅಗತ್ಯವಾದ ಜನಜಾಗೃತಿ ಮತ್ತು ಸಂಕಲ್ಪ ಹುಟ್ಟುಹಾಕು ವುದಕ್ಕೆ ಇಂತಹ ಸಮ್ಮೇಳನ ಪೂರಕವಾಗಿದೆ. ಎಲ್ಲರೂ ಸಾಹಿತಿಗಳಾಗಲು ಸಾಧ್ಯವಿಲ್ಲ. ಪೂರ್ವಜನ್ಮದಲ್ಲಿ ಪುಣ್ಯ ಮಾಡಿದವರೇ ಸಾಹಿತಿ ಗಳಾಗಿದ್ದಾರೆ. ಮುಂಬಯಿ ಅಲ್ಲಿನ ಸುಮಾರು ನಾಲ್ಕು ಲಕ್ಷ ಬಂಟರ ಸಂಸ್ಥೆಯ ಅಧ್ಯಕ್ಷನಾಗಿದ್ದು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದು ನನ್ನ ಭಾಗ್ಯವಾಗಿದೆ. ಮಾತು ಮತಿಯಿಂದ ಬರಬೇಕು. ಮಾತಿನಲ್ಲಿ ಆತ್ಮೀಯತೆಯ ಅಲೆಯಿರಬೇಕು. ಸೌಹಾರ್ದತೆಯ ಸೆಳೆವಿರಬೇಕು. ನಗುವಿನ ನೆಲೆಯಿರಬೇಕು. ಬದುಕಿನ ಬೆಲೆಯಿರಬೇಕು. ಮಾತು ಮುತ್ತುಮುತ್ತಾಗಿ, ಮೆತ್ತಗೆ ಮತ್ತು ಎಲ್ಲರಿಗೂ ಹಿತವಾಗಿರಬೇಕು ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ನುಡಿದರು.
ಇಂದಿಲ್ಲಿ ಭಾನುವಾರ ಬೃಹನ್ಮುಂಬಯಿ ಇಲ್ಲಿನ ದಿ| ಬಿ.ಎ ಸನದಿ ಮಹಾದ್ವಾರದೊಂದಿಗೆ ಮೈಸೂರು ಅಸೋಸಿಯೇಶನ್ ಮುಂಬಯಿ ಸಭಾಗೃಹದ ನಿರ್ಮಿತ ಸ್ವರ್ಗೀಯ ಡಾ| ಸಂಜೀವ ಶೆಟ್ಟಿ ವೇದಿಕೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಇದರ ಮಹಾರಾಷ್ಟ್ರ ಘಟಕವು ಪ್ರಥಮ ಅಖಿಲ ಭಾರತ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಸಿದ್ದು ಪ್ರವೀಣ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಫಾರ್ಚನೆಗೈದು ಸಾಂಕೇತಿಕವಾಗಿ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸಿಧ್ಧ ಸಾಹಿತಿ ಎನ್.ಶೈಲಜಾ ಹಾಸನ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮ್ಮೇಳನವನ್ನು ಉತ್ತರ ಕನ್ನಡದ ಹಿರಿಯ ಸಾಹಿತಿ ಡಾ| ಹೆಚ್.ಎಸ್ ಅನುಪಮ ದೀಪ ಬೆಳಗಿಸಿ ವಿಧ್ಯುಕ್ತವಾಗಿ ಉದ್ಘಾಟಿಸಿ ಶುಭಾರೈಸಿದರು. ರಾಜ್ಯ ಉಪಾಧ್ಯಕ್ಷೆ ಶಾಲಿನಿ ರುದ್ರಮುನಿ ಮತ್ತು ಕನ್ನಡ ಕಲಾ ಕೇಂದ್ರ ಮುಂಬಯಿ ಇದರ ಅಧ್ಯಕ್ಷ ಮಧುಸೂದನ ಟಿ.ಆರ್ ಗೌರವ ಅತಿಥಿಗಳಾಗಿದ್ದು ಕರ್ನಾಟಕ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಮನೋಹರ ಎಂ. ಕೋರಿ ಉಪಸ್ಥಿತರಿದ್ದು ಡಾ| ಸುನೀತಾ ಎಂ.ಶೆಟ್ಟಿ (ಸಾಹಿತ್ಯ), ಎಸ್.ಕೆ ಸುಂದರ್ (ಬಹುಮುಖಿ) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ `ಶರಣ ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ರಾಜ್ಯಾಧ್ಯಕ್ಷ ವಿಶ್ವೇಶ್ವರ ಎನ್.ಮೇಟಿ, ಡಾ| ಹೆಚ್.ಕೆ ಹಸೀನಾ, ಶಿವಯೋಗಿ ಸಣ್ಣಮನಿ ಮತ್ತಿತರರು ಉಪಸ್ಥಿತರಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ `ಕರ್ನಾಟಕ ಶಿರೋಮಣಿ ರಾಜ್ಯ ಪ್ರಶಸ್ತಿ’ ಪ್ರದಾನಿಸಿ ಅಭಿನಂದಿಸಿದರು.
ಈ ಸಮ್ಮೇಳನ ಮುಂಬಯಿ ಕನ್ನಡಿಗರ ಭಾಗ್ಯವಾಗಿದೆ. ಕರ್ನಾಟಕದಲ್ಲಿ ಸರ್ಕಾರ, ೨೦ಕ್ಕೂ ಅಧಿಕ ಅಕಾಡೆಮಿಗಳು, ಸಾಹಿತ್ಯ ಪರಿಷತ್ತು ಇದೆ. ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರು ಬಿಟ್ಟರೆ ಮುಂಬಯಿಯಲ್ಲೇ ೨೦ ಲಕ್ಷ ಕನ್ನಡಿಗರಿದ್ದು ಇಲ್ಲಿ ಒಂದೂ ಕಾರ್ಯಕ್ರಮವನ್ನು ಮಾಡದಿರುವುದು ಬಹಳ ನೋವು ತಂದಿದೆ. ಕರ್ನಾಟಕ ಸರ್ಕಾರದ ಇಂತಹ ಕಡೆಗಣನೆ ಸಲ್ಲದು. ಎರಡು ಶತಮಾನಗಳಿಂದ ಇಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕ್ರತಿಯ ಆಸ್ಮಿತೆಯನ್ನು ಈ ಕನ್ನಡಿಗರು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಮುಂಬಯಿಯಲ್ಲಿ ಕನ್ನಡದ ಕೈಂಕರ್ಯ, ಪರಿಚರಿಕೆಗೆ ಬಹಳದೊಡ್ಡ ಇತಿಹಾಸವಿದೆ. ಕರ್ನಾಟಕ ಮಹಾರಾಷ್ಟ್ರದ ಬಾಂಧವ್ಯ ಬಲಿಷ್ಠವಾದುದು. ಬಹುತ್ವದ ಜೀವಾಳ ನಮ್ಮಲಿದೆ ಇದಕ್ಕೆ ಪೂರಕ ಈ ಸಮ್ಮೇಳನವಾಗಿದೆ ಎಂದು ಡಾ| ಜಿ.ಎನ್ ಉಪಾಧ್ಯ ತಿಳಿಸಿದರು.
ಹಿರಿಯ ಪತ್ರಕರ್ತ, ಸಾಹಿತಿ ಶ್ರೀನಿವಾಸ ಜೋಕಟ್ಟೆ ಅವರು ನಾಡಿನ ಹೆಸರಾಂತ ನಾಲ್ಕಿ ಲೇಖಕರ ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಡಾ| ಬಿ.ಸಿ ನಾಗರಾಜ ಅಧ್ಯಕ್ಷತೆಯಲ್ಲಿ ಸಾಹಿತ್ಯ ಗೋಷ್ಠಿ ನಡೆದಿದ್ದು ರಂಗ ಕಲಾವಿದ ಡಾ| ಭರತ್ಕುಮಾರ್ ಪೊಲಿಪು ಅವರು `ಕನ್ನಡ ಸಾಹಿತ್ಯಕ್ಕೆ ಮಹಾರಾಷ್ಟ್ರದ ಕೊಡುಗೆ’ ವಿಷಯದಲ್ಲಿ ಉಪನ್ಯಾಸ ನೀಡಿದರು. ಎ.ಎ ದರ್ಗಾ ಆಶಯ ನುಡಿಗಳನ್ನಾಡಿದರು. ಶೈಲಾ ನಾಗರಾಜ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆದಿದ್ದು ಸುಮಾರು ೨೪ ಕವಿಗಳು ಕವಿಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮತಮ್ಮ ಕವನಗಳನ್ನು ಪ್ರಸ್ತುತ ಪಡಿಸಿದರು.
ಸುಶೀಲಾ ದೇವಾಡಿಗ ಮತ್ತು ಸಂಗಡಿಗರ ನಾಡಗೀತೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಮಹಾರಾಷ್ಟ್ರ ಗೌರವಾಧ್ಯಕ್ಷ ಡಾ| ಅಮರೇಶ್ ಪಾಟಿಲ್ ಸ್ವಾಗತಿಸಿದರು. ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಪ್ರಸ್ತಾವನೆಗೈದರು. ಮಲ್ಲಿಜಾರ್ಜುನ ಬಡಿಗೇರ ಅತಿಥಿಗಳನ್ನು ಪರಿಚಯಿಸಿದರು. ಹೆಚ್.ಎಸ್ ಬಸವರಾಜ್ ಸಮ್ಮೇಳನದ ಬಗ್ಗೆ ಮಾಹಿತಿಯನ್ನಿತ್ತರು. ಮಾಲತಿ ಚಂದ್ರಕಾಂತ ಮತ್ತು ಡಾ| ದುರ್ಗಪ್ಪ ವೈ. ಕೋಟಿಯಾವರ್ ಪುರಸ್ಕ್ರತರನ್ನು ಪರಿಚಯಿಸಿದರು. ಸರೋಜ ಅಮಾತಿ, ವಾಣಿ ಶೆಟ್ಟಿ ಮೂಡಬಿದ್ರೆ ಮತ್ತು ಬಾಲಚಂದ್ರ ದೇವಾಡಿಗ, ಪರಮಾನಂದ ದಳಪತಿ ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಪೂಜಾರಿ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.