Skip to main content
www.kallianpur.com | Email : kallianpur7@gmail.com | Mob : 9741001849

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಸಂಸ್ಥೆಯಿಂದ ಆಚರಿಸಲ್ಪಟ್ಟ ಪ್ರತಿಷ್ಠಾ ವರ್ಧಂತಿ ಮತ್ತು ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ಜಯಂತ್ಯುತ್ಸವ.

By May 15, 2024Mumbai News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಮೇ.೧೪: ಸಾಯನ್ ಪೂರ್ವದ ಗೋಕುಲದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಗೋಕುಲ) ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್ ಸಂಸ್ಥೆಗಳ ಆಶ್ರಯದಲ್ಲಿ ಕಳೆದ ಭಾನುವಾರ ಪ್ರತಿಷ್ಠಾ ವರ್ಧಂತಿ ಮತ್ತು ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ಜಯಂತ್ಯುತ್ಸವ ಆಚರಿಸಲ್ಪಟ್ಟಿತು.

ಪ್ರತಿಷ್ಠಾ ದಿನದ ಅಂಗವಾಗಿ ಪ್ರಾತಃಕಾಲ ದೇವಾಲಯ ಸಭಾಗೃಹದಲ್ಲಿ ವೇದಮೂರ್ತಿಗಳಾದ ದರೆಗುಡ್ಡೆ ಶ್ರೀನಿವಾಸ್ ಭಟ್ ಹಾಗೂ ಶ್ರೀಪತಿ ಭಟ್ ಅವರ ಪ್ರಧಾನ ಪೌರೋಹಿತ್ಯದಲ್ಲಿ ಮತ್ತು ಬಿಎಸ್‌ಕೆಬಿಎ ಗೌರವ ಕಾರ್ಯದರ್ಶಿ ಎ.ಪಿ.ಕೆ ಪೋತಿ ಮತ್ತು ಸಹನಾ ಪೋತಿ ದಂಪತಿ ಯಜಮಾನತ್ವದಲ್ಲಿ ದೇವತಾ ಪ್ರಾರ್ಥನೆ, ನವಕ, ಪ್ರಧಾನ ಹೋಮದೊಂದಿ ಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ವೇದಮೂರ್ತಿ ದರೆಗುಡ್ಡೆ ಶ್ರೀನಿವಾಸ್ ಭಟ್ ಇತರ ಪುರೋಹಿತ ವರ್ಗದವರೊಂದಿಗೆ ಶ್ರೀ ದೇವರ ಕಲಶಾಭಿಷೇಕ ವನ್ನು ನೆರವೇರಿಸಿದ್ದು, ನಂತರ ಶ್ರೀ ದೇವರ ಪುಷ್ಪಾಲಂಕಾರ, ವಿಷ್ಣು ಸಹಸ್ರನಾಮ ಪಠನೆ, ಮಹಾಪೂಜೆಯು ವೈಭವ ದಿಂದ ಜರಗಿತು. ಗೋಕುಲ ಭಜನಾ ಮಂಡಳಿ ಭಜನಾ ಕಾರ್ಯ ಕ್ರಮ ನೆರವೇರಿತು.

ಇದೇ ದಿನ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ಸೇವಾ ಸಂಘದ ಸಹ ಯೋಗ ದೊಂದಿಗೆ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್ ಗೋಕುಲದ ಪ್ರಥಮ ಮಹಡಿಯಲ್ಲಿ ಶ್ರೀ ಶಂಕರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದವು.

ವೇದಮೂರ್ತಿಗಳಾದ ದುರ್ಗಾಪ್ರಸಾದ್ ಭಟ್ ಮತ್ತು ಸುಬ್ರಹ್ಮಣ್ಯ ಐತಾಳ್ ಅವರ ಪ್ರಧಾನ ಪೌರೋಹಿತ್ಯದಲ್ಲಿ, ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಪಂಚಗವ್ಯ, ಗಣಹೋಮ ದೊಂದಿಗೆ ಪ್ರಾರಂಭವಾಗಿ, ಶ್ರೀ ರಾಮನಾಮ ತಾರಕ ಮಂತ್ರ ಹೋಮ, ರುದ್ರಾಭಿಷೇಕ, ಶ್ರೀ ಶಂಕರಾ ಚಾರ್ಯ ನಾಮಾರ್ಚನೆ, ಪೂಜೆ, ಅಷ್ಟಾವಧಾನ, ಧಾರ್ಮಿಕ ಪ್ರವಚನ ಮುಂತಾದ ವಿಧಿಗಳು ನಡೆಸಲ್ಪಟ್ತವು. ರಮೇಶ್ ಎಂ.ರಾವ್ ಮತ್ತು ವನಿತಾ ರಾವ್, ಸದಾಶಿವ ರಾವ್ ಮತ್ತು ಮಮತಾ ರಾವ್, ಅಮಿತ್ ರಾವ್ ಮತ್ತು ಅಮಿತಾ ರಾವ್ ದಂಪತಿ ಹಾಗೂ ಶ್ಯಾಮ್ ಭಾರದ್ವಾಜ್ ಮತ್ತು ಪ್ರಿಯಾಂಕಾ ಭಾರದ್ವಾಜ್ ದಂಪತಿಗಳ ಯಜಮಾನತ್ವ ವಹಿಸಿದ್ದರು.

ಸುಬ್ರಹ್ಮಣ್ಯ ಸೇವಾ ಸಂಘದ ಪದಾಧಿಕಾರಿಗಳಾದ ಸುಭಾಶ್ಚಂದ್ರ ರಾವ್, ಪಿ.ಉಮೇಶ್ ರಾವ್, ಶಿವರಾಯ ರಾವ್, ಕೆ.ಉಮೇಶ್ ರಾವ್ ಮತ್ತು ಕಾರ್ಯಕಾರಿ ಸಮಿತಿಯವ ನೇತೃತ್ವದಲ್ಲಿ ಶಂಕರ ಜಯಂತಿ ವಿಧಿವತ್ತಾಗಿ ನೆರವೇರಿತು. ಗೋಕುಲ ಭಜನಾ ಮಂಡಳಿಯು ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರ ಪಠನೆ ಮತ್ತು ಭಜನಾ ಸೇವೆ ನೆರವೇರಿ ಸಿತು.

ಅಪರಾಹ್ನ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸರಸ್ವತಿ ಸಭಾಗೃಹದಲ್ಲಿ ಆಚಾರ್ಯ ರತ್ನ ಮುಂಬಯಿ ಶಂಕರ ನಾರಾಯಣನ್ ಬಳಗದವರಿಂದ ತಾಳ ವಾದ್ಯ ಕಚೇರಿ, ಆನಂದ ಸಚಿದಾನಂದನ್ ಅವರಿಂದ ಭರತನಾಟ್ಯ ಸೇವೆಯು ಜರಗಿತು.

ಸಂಜೆ ನಿತ್ಯ ಪೂಜೆಯಾದ ನಂತರ ದೀಪೋತ್ಸವದೊಂದಿಗೆ ರಂಗ ಪೂಜೆ, ಪಲ್ಲಕ್ಕಿ ಉತ್ಸವ, ತೊಟ್ಟಿಲು ಪೂಜೆ, ವಸಂತ ಪೂಜೆ, ಅಷ್ಟಾವಧಾನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿದ್ದು, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್‌ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಉಪಾಧ್ಯಕ್ಷ ವಾಮನ್ ಹೊಳ್ಳ, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಜತೆ ಕೋಶಾಧಿಕಾರಿ ಗಣೇಶ್ ಭಟ್, ಕಾರ್ಯಕಾರಿ ಸಮಿತಿ, ಟ್ರಸ್‌ನ್ಟ ಧಾರ್ಮಿಕ ಸಮಿತಿ ಸದಸ್ಯರುಗಳ ಸಹಿತ ನೂರಾರು ಭಕ್ತಾದಿಗಳ ಉಪಸ್ಥಿತಿ ಯಲ್ಲಿ ಉಭಯ ಉತ್ಸವಗಳು ವೈಭವ ಮತ್ತು ವಿಜೃಂಭಣೆಯಿಂದ ಜರಗಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.