Skip to main content
www.kallianpur.com | Email : kallianpur7@gmail.com | Mob : 9741001849

ಕಲ್ಯಾಣಪುರ – ಡಾ.ಟಿ.ಎಂ.ಎ.ಪೈ ಪ್ರೌಢಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭ.

By January 10, 2024Kannada News
kallianpurdotcom: 9741001849

ಉಡುಪಿ: ಮಣಿಪಾಲದ ಬ್ರಹ್ಮ ಎಂದು ಖ್ಯಾತರಾದ ಡಾ.ಟಿ.ಎಂ.ಎ.ಪೈಯವರು ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಸ್ಥಿರತೆಗಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪವಾಡವನ್ನೆ ನಡೆಸಿದರು. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ, ಸ್ವಾವಲಂಬನೆ, ಉಳಿತಾಯ ಪ್ರವೃತ್ತಿಗಾಗಿ ಪಿಗ್ಮಿ ಯೋಜನೆ ಹಾಗೂ ಶಿಕ್ಷಣಕ್ಕೆ ಉತ್ತೇಜನ ನೀಡಿದರು. ಸ್ವ ಉದ್ಯೋಗ ಹಾಗೂ ಕೃಷಿಗಾಗಿ ಸಾಲ ನೀಡುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ ನೀಡಿದರು. ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಸಂಸ್ಥೆ ಉನ್ನತಿಯಾಗಲಿ ಹಾಗೂ ಅವರ ಆದರ್ಶದ ಕನಸುಗಳು ಸಾಕಾರಗೊಳ್ಳಲಿ ಎಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಲಕ್ಷ್ಮೀನಾರಾಯಣ ಕಾರಂತರು ಹೇಳಿದರು. ಅವರು ಕಲ್ಯಾಣಪುರದ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶಾಲಾ ಸಂಚಾಲಕರಾದ ಶ್ರೀಮತಿ ಸುಮನಾ ಎಸ್. ಪೈ ಯವರು ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾಭಿಮಾನಿಗಳು ನೀಡಿದ ದತ್ತಿನಿಧಿ ಬಹುಮಾನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.ಹತ್ತನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಪ್ರೋತ್ಸಾಹಕ್ಕಾಗಿ ಮಾಜಿ ಸಂಚಾಲಕ ಶ್ರೀ ಸಿ.ಕೆ.ಕಾಮತ್ ರವರು ಘೋಷಿಸಿದ ಬಹುಮಾನಗಳನ್ನು ಶಾಲಾಡಳಿತ ಮಂಡಳಿಯ ಸದಸ್ಯರಾದ ಶ್ರೀ ಗಣೇಶ್ ಶೇರಿಗಾರ್ ರವರು ವಿದ್ಯಾರ್ಥಿಗಳಿಗೆ ವಿತರಿಸಿದರು. ಕಲಿಕೆಯಲ್ಲಿ ಮುಂದಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಹಳೆ ವಿದ್ಯಾರ್ಥಿ ಶ್ರೀ ಕೃಷ್ಣ ಪೂಜಾರಿ ಕುವೈಟ್ ಇವರು ತಮ್ಮ ತಾಯಿಯವರ ಸ್ಮರಣಾರ್ಥ ನೀಡಿದ ನಗದು ಬಹುಮಾನಗಳನ್ನು ಶಾಲಾಡಳಿತಾಧಿಕಾರಿ ಶ್ರೀ ಶೇಕರ್ ಪಿ ಅವರು ವಿತರಿಸಿದರು. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದ್ವಿತೀಯ ಸ್ಥಾನಿಯಾದ ಕು. ಸಿಂಚನಾ ಹಾಗೂ ಎನ್.ಎಮ್.ಎಮ್. ಎಸ್ ಪರೀಕ್ಷೆಯಲ್ಲಿ ಸ್ಥಾನ ಪಡೆದ ಕು. ಮಾನ್ಯ ಎ. ಆಚಾರ್ಯ, ದಾನಿ ಹಳೆ ವಿದ್ಯಾರ್ಥಿ ಶ್ರೀ ರಾಮನಾಥ ನಾಯಕ್, ಯಕ್ಷ ಗುರು ಶ್ರೀ ಕೇಶವ ರಾವ್ ಬಡಾನಿಡಿಯೂರು ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ರಚಿಸಿದ ಹಸ್ತ ಪತ್ರಿಕೆ ಸ್ಪೂರ್ತಿ ಬಿಡುಗಡೆ ಗೊಳಿಸಲಾಯಿತು.ಶಾಲಾ ವರದಿಯನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಸುರೇಖಾ ಹಾಗೂ ಹಳೆ ವಿದ್ಯಾರ್ಥಿ ಸಂಘದ ವರದಿಯನ್ನು ಕಾರ್ಯದರ್ಶಿ ಶ್ರೀ ರಮಾನಂದ ವಾಚಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಮಾಧವ ಕೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಉದಯ್ ಕುಮಾರ್ ಉಪಸ್ಥಿತರಿದ್ದರು.

ಪೂರ್ವಾಹ್ನ ವಿವಿಧ ಸ್ಪರ್ಧೆಗಳ ಬಹುಮಾನ ಹಾಗೂ ಕೊಗ್ಗ ಗಿರಿಜಾ ನಾಯಕ್ ಟ್ರಸ್ಟಿನ ವಿದ್ಯಾರ್ಥಿ ವೇತನವನ್ನು ಪ್ರತಿನಿಧಿ ಶ್ರೀಮತಿ ಅಪರ್ಣಾ ಡಿ.ಪಿ ಶೆಣೈ ವಿತರಿಸಿದರು. ಪಂಚಾಯತ್ ಅದ್ಯಕ್ಷ ಶ್ರೀ ನಾಗರಾಜ್ ಕುಂದರ್ ಧ್ವಜಾರೋಹಣ ನಡೆಸಿ ದರು.ಸಿ.ಆರ್.ಪಿ ಶ್ರೀಮತಿ ಜ್ಯೋತಿಕಲಾ ಉಪಸ್ಥಿತರಿದ್ದರು. ಶ್ರೀ ಹೆಚ್. ಎನ್ ವೆಂಕಟೇಶ್ ಸ್ವಾಗತಿಸಿ ಶ್ರೀ ಪ್ರತಾಪಚಂದ್ರ ವಂದಿಸಿದರು.

ಶಿಕ್ಷಕ ಶ್ರೀ ಸತ್ಯಶಂಕರ್ ಭಟ್ ಹಾಗೂ ಶ್ರೀ ಬಾಲಕೃಷ್ಣ ನಾಯಕ್ ಕಾರ್ಯಕ್ರಮ ಸಂಯೋಜಿಸಿದರು.ಶ್ರೀ ಪ್ರಕಾಶ್ ಶೆಟ್ಟಿ, ಶ್ರೀಮತಿ ದಿವ್ಯಲಕ್ಷ್ಮೀ, ಕು.ಪ್ರತೀಕ, ಕು.ಶ್ವೇತಾ ಸಹಕರಿಸಿದರು. ಆನಂತರ ವಿವಿಧ ಮನೋರಂಜನಾ ಕಾರ್ಯಕ್ರಮ, ಶ್ರೀ ಕೇಶವ್ ರಾವ್ ನಿರ್ದೇಶನದಲ್ಲಿ ವೀರಬರ್ಭರೀಕ ಯಕ್ಷಗಾನ ಹಾಗೂ ಸುಮನಸಾ ಕೊಡವೂರು ತಂಡದಿಂದ ಶಿಕಾರಿ ತುಳು ನಾಟಕ ಪ್ರದರ್ಶನ ಗೊಂಡಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.