Skip to main content
www.kallianpur.com | Email : kallianpur7@gmail.com | Mob : 9741001849

ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಶನ್‌ನ ತ್ರೈ ವಾರ್ಷಿಕ ಚುನಾವಣೆ ಡಾ| ಪಿ.ವಿ ಶೆಟ್ಟಿ ಬಣದ ಗೆಲುವು ಅಭಿನಂದನೀಯ : ಸಭಾಪತಿ ನ್ಯಾ| ನಾರ್ವೆಕರ್.

By September 11, 2023Mumbai News
kallianpurdotcom:11/09/23
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) 

ಮುಂಬಯಿ (ಆರ್‌ಬಿಐ), ಸೆ.೧೧: ಮುಂಬಯಿ ಇಲ್ಲಿನ ಪ್ರತಿಷ್ಠಿತ ಕ್ರೀಡಾ ಸಂಸ್ಥೆಯಾದ ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಶನ್ ಚರ್ಚ್ಗೇಟ್ ಇದರ ೨೦೨೩-೨೦೨೬ನೇ ತ್ರೈ ವಾರ್ಷಿಕ ಚುನಾವಣೆ ಕಳೆದ ಶನಿವಾರ (ಸೆ.೦೯) ನಡೆಯಿತು. ಕಳೆದ ೧೨ ವರ್ಷದಿಂದ ಅಧ್ಯಕ್ಷರಾಗಿದ್ದ ಡಾ| ಪದ್ಮನಾಭ ವಿ.ಶೆಟ್ಟಿ ಬಣವು ಮತ್ತೆ ಸ್ಪರ್ಧಿಸಿದ್ದು ಭರ್ಜರಿ ಗೆಲುವು ಸಾಧಿಸಿದೆ.

ಈ ಸಂಸ್ಥೆಯು ಮೂರು ವರ್ಷದ (೨೦೨೩-೨೬) ಚುನಾವಣೆಯಲ್ಲಿ ಕ್ರೀಡಾಪ್ರೇಮಿ ಅಧ್ಯಕ್ಷ ಡಾ| ಪದ್ಮನಾಭ ಶೆಟ್ಟಿ ಅವರ ನೇವೃತ್ವದ ಬಣವು ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ಪಿವಿಎಸ್ ಬಣ ಪೂರ್ಣಪ್ರಮಾಣದಲ್ಲಿ ವಿಜಯ ಸಾಧಿಸಿತು. ಡಾ| ಪದ್ಮನಾಭ ವಿ.ಶೆಟ್ಟಿ ಮತ್ತೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದು, ಉಪಾಧ್ಯಕ್ಷರಾಗಿ ರವಿ ಅಂಚನ್ ಹಾಗೂ ಕಾರ್ಯಕಾರಿ ಸಮಿತಿಯ ೧೦ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯ ಎ.ಶೆಟ್ಟಿ , ಗೌರವ್ ಪಯ್ಯಡೆ, ಜಯಂತ್ ಕುಂದರ್, ಪ್ರೇಮನಾಥ ಎಸ್.ಕೋಟ್ಯಾನ್, ಸಾಲ್ವೋದೊರ್ ಡಿಸೋಜಾ, ಕರುಣಾಕರ ಶೆಟ್ಟಿ, ಪ್ರಸಾದ್ ಎಂ.ಶೆಟ್ಟಿ, ಕೃಷ್ಣ ಶೆಟ್ಟಿ, ಸೆಬೆಸ್ಟಿಯನ್ ವೇಗಸ್, ದಿನೇಶ ಪೂಜಾರಿ ವಿಜೇತರೆಣಿಸಿದರು.

ಸಂಸ್ಥೆಯ ಸಂಸ್ಥಾಪಕ ಮತ್ತು ಆಶ್ರಯದಾತ, ಭಾರತ್ ಬ್ಯಾಂಕ್‌ನ ಮಾಜಿ ಕಾರ್ಯಾಧ್ಯಕ್ಷ (೯೨ ಹರೆಯದ ಹಿರಿಯ ಕ್ರೀಡಾಪ್ರೇಮಿ) ವರದ್ ಉಳ್ಳಾಲ್ ಆಗಮಿಸಿ ತನ್ನ ಮತದಾನ ಹಕ್ಕನ್ನು ಚಲಾಯಿಸಿರುವುದು ವಿಶೇಷವಾಗಿತ್ತು. ಚುನಾವಣಾಧಿಕಾರಿ ಅಭಯ ಹಡಪ್ ಚುನಾವಣ ಫಲಿತಾಂಶವನ್ನು ಪ್ರಕಟಿಸಿದ್ದು ಶಾಸಕ ಮಹಾರಾಷ್ಟ್ರ ವಿಧಾನ ಸಭೆಯ ಸಭಾಪತಿ ನ್ಯಾ| ರಾಹುಲ್ ನಾರ್ವೆಕರ್ ಆಗಮಿಸಿ ಅಧ್ಯಕ್ಷ ಡಾ| ಪದ್ಮನಾಭ ವಿ.ಶೆಟ್ಟಿ ತಂಡದ ಎಲ್ಲಾ ಸದಸ್ಯರನ್ನು ಶಾಲು ಹೊದಿಸಿ, ಪುಷ್ಪಗುಚ್ಫಗಳನ್ನಿತ್ತು ಅಭಿನಂದಿಸಿದರು.

ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಶನ್ ಜಾಗದ ಬಗ್ಗೆ ಪ್ರಸ್ತಾಪಿಸಿದ ನಾರ್ವೆಕರ್ ಈ ವಿಚಾರವಾಗಿ ಸರಕಾರದ ಸಂಬಂಧಿತ ಖಾತೆ, ಇಲಾಖೆಗಳಿಗೆ ತಿಳಿಸಿ ಅದಷ್ಟು ಬೇಗ ಗೇಣಿಯೊಂದಿಗೆ ಜಾಗವನ್ನು ಕೊಡಿಸುವ ಬಗ್ಗೆ ಭರವಸೆಯನ್ನಿತ್ತರು. ಕರ್ನಾಟಕ ಸ್ಪೋರ್ಟಿಂಗ್‌ನಲ್ಲಿ ಮುಂಬಯಿಯಾದ್ಯಂತದ, ಪ್ರಮುಖವಾಗಿ ದಕ್ಷಿಣ ಮುಂಬಯಿಯ ಕ್ರೀಡಾ ಪಟುಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲು ಅವಶ್ಯಕ ಸಹಕಾರ ಮಾಡುವುದಾಗಿ ಸಭಾಪತಿ ತಿಳಿಸಿದರು.

ಸಂಯೋಜನೆಗೆ ಸಹಾಯಕರ್ತರಾದ ಸಾಲ್ವೊದೊರ್ ಡಿಸೋಜಾ ಹಾಗೂ ಮಿಲಿಂದ್ ತಾಂಡೇಲ್‌ರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಜಯ ಎ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.

ಡಾ| ಪದ್ಮನಾಭ ಶೆಟ್ಟಿ ಅವರು ಮುಂಬಯಿಯ ಪ್ರತಿಷ್ಠಿತ ಕ್ರೀಡಾ ಸಂಸ್ಥೆ ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಶನ್ ಇದನ್ನು ಮುನ್ನಡೆಸುತ್ತಿದ್ದು ಇಲ್ಲಿನ ಹಲವಾರು ರಾಷ್ಟ್ರೀಯ ಅಂತರಾಷ್ಟ್ರೀಯ ಕ್ರಿಕೆಟ್ ಫುಟ್ಬಾಲ್ ಪಟುಗಳು ಈ ಸಂಸ್ಥೆಯನ್ನು ಪ್ರತಿನಿಧಿಸಿದ್ದಾರೆ. ಪ್ರಧಾನವಾಗಿ ರವಿ ಶಾಸ್ತ್ರಿ, ಬಲಿವಿಂದರ್ ಸಂಧು, ರಿಶಿತ್ ಹತ್ತಂಗಡಿ, ಸುಂದರ ಕಾಂಚನ್, ದಿ| ಬಿ.ಲಕ್ಷಣ, ಎಂ.ಪಿ ಶೆಟ್ಟಿ, ಶಿವಯ ದುಬೆ, ಏಕನಾಥ್ ಕೇರಕರ್, ತನುಷ್ ಕೋಟ್ಯಾನ್, ಅಂಕಿತ ಚವ್ಹಾಣ್, ಕ್ರಿಕೆಟ್‌ನ ಸಂಜೀವ ಉಚ್ಚಿಲ್, ಸ್ಟೀವನ್ ಡಾಯಸ್, ಗೋಡ್‌ಪ್ರೀ ಪಿರೇರಾ, ಸುರೇಶ ಮೆಂಡನ್, ಶೇಖರ ಬಂಗೇರಾ, ಪ್ರಣೀಲ್ ಮೆಂಡನ್, ತುಷಾರ ಪೂಜಾರಿ, ವಿಜಿತ ಶೆಟ್ಟಿ ಪುಟ್ಬಾಲ್‌ನಲ್ಲಿ ಮಿಂಚಿರುವರು ಎಂದು ಜಯ ಶೆಟ್ಟಿ ತಿಳಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.