Skip to main content
www.kallianpur.com | Email : kallianpur7@gmail.com | Mob : 9741001849

ಕೊಂಕಣಿ ಸಾಹಿತ್ಯ ಅಕಾಡೆಮಿಯ ಭಾಷಾ ಸಲಹಾ ಮಂಡಳಿಗೆ ಹೆಚ್.ಎಂ ಪೆರ್ನಾಲ್ ಮಂಗಳೂರು ಮತ್ತು ಸ್ಟ್ಯಾನಿ ಬೇಳಾ ಆಯ್ಕೆ.

By May 15, 2023Kannada News
(ಚಿತ್ರ /ವರದಿ : ತಾರ ರೋನ್ಸ್ ಬಂಟ್ವಾಳ್) 

ಮುಂಬಯಿ (ಆರ್‌ಬಿಐ), ಮೇ.೧೫: ಭಾರತ ಸರ್ಕಾರದ ಅಧೀನದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಭಾಷಾ ಸಲಹಾ ಮಂಡಳಿಗೆ ಮಂಗಳೂರು ಅಲ್ಲಿನ ಕೊಂಕಣಿ ವಿಮರ್ಶಕ ಮತ್ತು ಕಿಟ್ಟಾಲ್ ಡಾಟ್‌ಕಾಮ್‌ನ ಸಂಪಾದಕ ಮತ್ತು ಆರ್ಸೋ ಕೊಂಕಣಿ ಪಾಕ್ಷಿಕದ ಪ್ರಕಾಶಕ ಹೆಚ್.ಎಂ ಪೆರ್ನಾಲ್ ಹಾಗೂ ಸಣ್ಣ ಕಥೆಗಾರ, ಕವಿ ಮತ್ತು ಕೊಂಕಣಿ ದೂರದರ್ಶನ ಕಾರ್ಯಕ್ರಮಗಳ ನಿರ್ಮಾಣ ನಿರ್ದೇಶಕ ಸ್ಟ್ಯಾನಿ ಬೇಳಾ ಅವರನ್ನು ೨೦೨೩ ರಿಂದ ೨೦೨೭ರ ವರೆಗಿನ ಐದು ವರ್ಷಗಳ ಅವಧಿಗೆ ನಾಮನಿರ್ದೇಶನ ಮಾಡಲಾಗಿದೆ.

ಅನೇಕ ವರ್ಷಗಳಿಂದ ಮುಂಬಯಿಯಲ್ಲಿದ್ದು ಸದ್ಯ ಮಂಗಳೂರುನಲ್ಲಿ ನೆಲೆಯಾಗಿರುವ ಹೆಚ್.ಎಂ ಪೆರ್ನಾಲ್ ಅವರು ಬೆಂಗಳೂರುನ ಶ್ರೀವಿದ್ಯಾ ಎಂ.ಆರ್ ಅವರೊಂದಿಗೆ ಅಕಾಡೆಮಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದರೆ, ಕೇರಳದ ಆಲಪ್ಪುಳ ಜಿಲ್ಲೆಯ ಯುವ ಮತ್ತು ಭರವಸೆಯ ಬರಹಗಾರ್ತಿ ನಮ್ರತಾ ಪಿ.ಕಿಣಿ ಅವರೊಂದಿಗೆ ಸ್ಟ್ಯಾನಿ ಅವರು ಕೇರಳ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಜಿಲು ಲಕ್ಷ್ಮಣ್ ಗಾಂವ್ಕರ್, ಅಂಜು ಸಖರ್ದಂಡೆ ಮತ್ತು ಶಶಿಕಾಂತ ಕೃಷ್ಣ ಪುಣಜಿ ಗೋವಾ ರಾಜ್ಯವನ್ನು ಪ್ರತಿನಿಧಿಸಿದರೆ ಮತ್ತು ಲಾರೆನ್ಸ್ ಡಿಸೋಜಾ ಕಮಾನಿ  ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಡಾ| ಪೂರ್ಣಾನಂದ ಚಾರಿ ಕಣಕೋನಾ-ಗೋವಾ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಮತ್ತು ಕವಿತಾ ಟ್ರಸ್ಟ್ (ರಿ.) ಸಂಸ್ಥಾಪಕ ಮೆಲ್ವಿನ್ ರಾಡ್ರಿಗಸ್ ಅವರು ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಮಂಡಳಿಯ ಸದಸ್ಯರಾಗಿರುವರು.

ಕಳೆದ ಶುಕ್ರವಾರ (ಮೇ.೧೨) ಮುಂಬಯಿ ದಾದರ್ ಅಲ್ಲಿನ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಚೇರಿಯಲ್ಲಿ ಕೊಂಕಣಿ ಭಾಷಾ ಸಲಹಾ ಮಂಡಳಿಯ ಪ್ರಥಮ ಭಾಷಾ ಸಲಹಾ ಮಂಡಳಿ ಸಭೆ ನಡೆಸಲ್ಪಟ್ಟಿದ್ದು ಕಾರ್ಯದರ್ಶಿ ಡಾ|ಕೆ.ಶ್ರೀನಿವಾಸರಾವ್, ಕಛೇರಿ ಪ್ರಭಾರಿ ಮತ್ತು ಮುಂಬಯಿ ಪ್ರಾದೇಶಿಕ ಕಚೇರಿ ಕಾರ್ಯಕ್ರಮಾಧಿಕಾರಿ ಡಾ|ಓಂ.ಪ್ರಕಾಶನಗರ ಉಪಸ್ಥಿತರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.