Skip to main content
www.kallianpur.com | Email : kallianpur7@gmail.com | Mob : 9741001849

ಮಯೂರವರ್ಮ ಸಾಂಸ್ಕ್ರತಿಕ ಪ್ರತಿಷ್ಠಾನ (ರಿ.) ಮುಂಬಯಿ ಇದರ ೨೦೨೪ನೇ ಸಾಲಿನ `ಚೆನ್ನಭೈರಾದೇವಿ’ ಪ್ರಶಸ್ತಿಗೆ ಲತಿಕಾ ಗಣಪತಿ ಭಟ್ಟ ಆಯ್ಕೆ.

By February 29, 2024Kannada News
kallianpurdotcom: 9741001849
Reported by : Rons Bantwal.

ಮುಂಬಯಿ (ಆರ್‌ಬಿಐ), ಫೆ.೨೯: ಮಯೂರವರ್ಮ ಸಾಂಸ್ಕ್ರತಿಕ ಪ್ರತಿಷ್ಠಾನ (ರಿ.) ಮುಂಬಯಿ ತನ್ನ ೨೦೨೪ನೇ ಸಾಲಿನ `ಚೆನ್ನ ಭೈರಾದೇವಿ’ ಪ್ರಶಸ್ತಿಯನ್ನು ಇಂದಿಲ್ಲಿ ಪ್ರಕಟಿಸಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನವರ ಮೂಲತಃ ಬೆಳಗಾವಿಯಲ್ಲಿ ಒಂದುವರೆ ದಶಕದಿಂದ ವರ್ಷಗಳ ಕಾಲ ಶಿಕ್ಷಕಿಯಾಗಿದ್ದು ಸದ್ಯ ಅನಾಥಾ ಶ್ರಮ ನಡೆಸುತ್ತಿರುವ ಶಿರಸಿ ಸಿದ್ಧಾಪುರ ಅಲ್ಲಿನ ಶ್ರೀಮತಿ ಲತಿಕಾ ಗಣಪತಿ ಭಟ್ಟ ಇವರನ್ನು ಪ್ರಶಸ್ತಿಗೆ ಆಯ್ಕೆಗೊಳಿಸಿದೆ.

ಇದೇ ಬರುವ ಮಾ.೧೦ನೇ ಭಾನುವಾರ (ಶೋಭ ಕೃತನಾಮ ಸಂವತ್ಸರ ಮಾಘ ಮಾಸ ಬಹುಳ ಅಮವಾಸ್ಯೆ) ಅಪರಾಹ್ನ ೩.೩೦ ಗಂಟೆಗೆ ಶಿರಸಿ ಸಿದ್ಧಾಪುರ ಅಲ್ಲಿನ ಅಭಿಮನೆ `ಸುಯೋ ಗಾಶ್ರಯ’ ಹಿರಿಯರ ಮನೆ ಇಲ್ಲಿ ಪ್ರಶಸ್ತಿ ಪ್ರದಾನ ನಡೆಸ ಲಾಗುವುದು ಎಂದು ಮಯೂರವರ್ಮ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ವಿಶ್ವನಾಥ ದೊಡ್ಡನೆ ತಿಳಿಸಿದ್ದಾರೆ.

ಹೊನ್ನಾವರ ಇಲ್ಲಿನ ನಾಗರಿಕ ವಾರಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ಕರ್ಕಿ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಲಿದ್ದು ಅತಿಥಿ ಅಭ್ಯಾಗತರಾಗಿ ಶಿರಸಿ ಅಲ್ಲಿನ ಪತ್ರಕರ್ತ ಅಶೋಕ ಹಾಸ್ಯಗಾರ ಕವಿಯಿತ್ರಿ ಸಿಂಧೂ ಚಂದ್ರ ಹೆಗಡೆ ಶಿರಸಿ ಆಗಮಿಸಲಿದ್ದಾರೆ. ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ಕು|ಪ್ರಿಯಾಂಕಾ ಪರಮಾನಂದ ಹೆಗಡೆ ಶಿರಸಿ ಅವರು ಕೀರ್ತನೆ ನಡೆಸಲಿದ್ದಾರೆ.

ವಾರ್ಷಿಕ `ಚೆನ್ನಭೈರಾದೇವಿ’ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ನಾಡಿನ ಸಾಹಿತಾಸಕ್ತರು ಭಾಗವಹಿ ಸುವಂತೆ ಮಯೂರವರ್ಮ ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ ಭಂಡಾರಿ, ಉಪಾಧ್ಯಕ್ಷ ರಾಜೇಶ ಪಿ.ಗೌಡ ಸಿಂಧೂರ, ಗೌರವ ಕಾರ್ಯದರ್ಶಿ ವಿಶ್ವನಾಥ ದೊಡ್ಡನೆ, ಸಂಚಾಲಕರಾದ ಜಯ ಪ್ರಕಾಶ ಹಣ್ಣು, ಕೇಶವ ಕಿಚ್ಚೆ ತಿಳಿಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.