Skip to main content
www.kallianpur.com | Email : kallianpur7@gmail.com | Mob : 9741001849

ಮುಂಬಯಿ ಪ್ರದೇಶ ಎನ್‌ಸಿಪಿ (ಎಸ್‌ಪಿ) ‘ಚುನಾವಣಾ ಸಂಯೋಜಕ’ರಾಗಿ ತುಳು-ಕನ್ನಡಿಗ ಧುರೀಣ ಚಿತ್ರಾಪು ಲಕ್ಷ್ಮಣ ಸಿ.ಪೂಜಾರಿ ನೇಮಕ.

By April 17, 2024Mumbai News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಎ.೧೬: ಬೃಹನ್ಮುಂಬಯಿಯಲ್ಲಿನ ತುಳು- ಕನ್ನಡಿಗ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಶರದ್ ಪವಾರ್ ಇವರ ಆಪ್ತ, ಎನ್‌ಸಿಪಿ ಸ್ಥಾಪನಾ ಆರಂಭದಿಂದ ಸಕ್ರೀಯ ಕಾರ್ಯಕರ್ತ, ಎನ್‌ಸಿಪಿ ಪಕ್ಷದ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ. ಪೂಜಾರಿ ಚಿತ್ರಾಪು ಇವರನ್ನು ೨೦೨೪ನೇ ಲೋಕಸಭಾ ಚುನಾವಣೆ ನಿಮಿತ್ತ ಪಕ್ಷವು ಪ್ರಸಕ್ತ ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (ಶರದ್‌ಶ್ಚಂದ್ರ ಪವಾರ್) ಇದರ ವಾಯುವ್ಯ ಮುಂಬಯಿ ಜಿಲ್ಲಾ ಲೋಕಸಭಾ ಕ್ಷೇತ್ರದ ‘ಚುನಾವಣಾ ಸಂಯೋಜಕರಾಗಿ’ ನೇಮಿಸಿದೆ.

ಇಂದಿಲ್ಲಿ ಮಹಾನಗರದಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (ಶರದ್‌ಶ್ಚಂದ್ರ ಪವಾರ್) ಇದರ ಮುಂಬಯಿ ಪ್ರದೇಶ ಅಧ್ಯಕ್ಷೆ ರಾಖಿ ಜಾಧವ್ ಇವರು ಲಕ್ಷ್ಮಣ ಪೂಜಾರಿ ಅವರಿಗೆ ಅಧಿಕೃತವಾಗಿ ನೇಮಕಾತಿ ಆದೇಶಪತ್ರವನ್ನು ನೀಡಿ ಅಭಿನಂದಿಸಿದರು.

ಈ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಪರ ಕೆಲಸ ಮಾಡುವಾಗ ಭಾರತ ಅಘಾಡಿ ಅಭ್ಯರ್ಥಿ ಅಮೋಲ್ ಕೀರ್ತಿಕರ್ ಮತ್ತು ಅವರ ಪಕ್ಷದ ಮುಖಂಡರೊಂದಿಗೆ ಎಲ್ಲಾ ಪ್ರಮುಖ ನಾಯಕರು, ಪದಾಧಿಕಾರಿಗಳು, ಜಿಲ್ಲೆ, ತಾಲೂಕು ಮತ್ತು ವಾರ್ಡ್ ಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಸಮನ್ವಯ ಸಾಧಿಸುತ್ತಾ ಅಘಾಡಿ ಅಭ್ಯರ್ಥಿಯನ್ನು ಅತ್ಯಾಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವರೇ ಶ್ರಮಿಸಲು ಭರವಸೆವಿತ್ತು ಯಶಸ್ವಿ ಲೋಕಸಭಾ ವಿಜಯಕ್ಕಾಗಿ ಪೂಜಾರಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.