Skip to main content
www.kallianpur.com | Email : kallianpur7@gmail.com | Mob : 9741001849

ಸಾಂತಾಕ್ರೂಜ್‌ನ ಶ್ರೀಪೇಜಾವರ ಮಠದಲ್ಲಿ ತಪ್ತ ಮುದ್ರಾ ಧಾರಣೆ ಭಜನೆ ಮತ್ತು ಶ್ರೀಪಾದರಿಂದ ಅನುಗ್ರಹನುಡಿ-ಪ್ರಸಾದ ವಿತರಣೆ.

By June 27, 2023Kannada News
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಜೂ.೨೬: ಆಷಾಢ ನವಮಿಯ ಬುಧರಾವಾರದಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಹಾಭಿಷೇಕದ ಮಾರನೆ ದಿನ ಸರ್ವೆಕಾದಶೀ (ಆಷಾಢ ಏಕಾದಶಿ)ಯ ಜೂ.೨೯ರ ಗುರುವಾರ ಸಂಜೆ ೪.೦೦ ಗಂಟೆಗೆ ಮುಂಬಯಿ ಉಪನಗರದ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹಕ್ಕೆ ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಚಿತ್ತೈಸಿ ತಪ್ತ ಮುದ್ರಾ ಧಾರಣೆ ನೆರವೇರಿಸಲಿದ್ದಾರೆ.

ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ವಿಶ್ವಪ್ರಸನ್ನ ಶ್ರೀಪಾದಂಗಳವರ  ಮಾರ್ಗದರ್ಶನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪಲಿಮಾರು ಶ್ರೀಗಳ ಕರಕಮಲ ಸಂಜಾತರಾದ ಶ್ರೀ ವಿದ್ಯಾರಾಜೇಶ್ವರಿ  ತೀರ್ಥರು ಆಗಮಿಸಲಿದ್ದು  ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಶೋಭಕೃತ್ ಸಂವತ್ಸರದಲ್ಲಿ ಸಂಜೆ ೪.೦೦ ಗಂಟೆಯಿಂದ ೫.೦೦ ಗಂಟೆ ತನಕ ತಪ್ತ ಮುದ್ರಾ ಧಾರಣೆ ನಡೆಸಿ ಆಶೀರ್ವಚನ ನುಡಿಗಳನ್ನಾಡಿ ನೆರದ ಸದ್ಭಕ್ತರಿಗೆ ಮಂತ್ರಾಕ್ಷತೆ, ಪ್ರಸಾದ ನೀಡಿ ಹರಸಲಿದ್ದಾರೆ. ಆ ಪ್ರಯುಕ್ತ ಮಧ್ವೇಶ ಭಜನಾ ಮಂಡಳಿ ಹಾಗೂ ಇತರ ಭಜನಾ ಮಂಡಳಿಗಳು ಭಜನೆ ನಡೆಸಲಿದ್ದಾರೆ ಎಂದು ಮಠದ ವಕ್ತಾರ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ತಿಳಿಸಿದ್ದಾರೆ.

ಮಹಾನಗರದಲ್ಲಿನ ಭಕ್ತಾಭಿಮಾನಿಗಳು ಸಹಭಾಗಿಗಳಾಗಿ ಮಠದಲ್ಲಿನ ಶ್ರೀಕೃಷ್ಣ ದೇವರ ದರ್ಶನ ಪಡೆದು ಶ್ರೀ ಕೃಷ್ಣ ವಿಠ್ಠಲ ರಾಮದೇವರ ಪರಮಾನುಗ್ರಹಕ್ಕೆ ಪಾತ್ರರಾಗ ಬೇಕಾಗಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ (ಪೇಜಾವರ ಮಠ ಮುಂಬಯಿ) ಪದಾಧಿಕಾರಿಗಳು, ವಿಶ್ವಸ್ಥ ಮಂಡಳಿ ಹಾಗೂ ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಈ ಮೂಲಕ ತಿಳಿಸಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.