Skip to main content
www.kallianpur.com | Email : kallianpur7@gmail.com | Mob : 9741001849

ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಶಿಕ್ಷಕ – ರಕ್ಷಕ ಸಭೆ, ನಿಮ್ಮ ಮಕ್ಕಳಿಗೆ ಸಮಯ ಕೊಡಿ ಪ್ಲೀಸ್…. (ಫಾ | ಸಿರಿಲ್ ಲೋಬೋ)

By July 3, 2023Kannada News
kallianpurdotcom: 03/07/23

ಉಡುಪಿ : ತಂದೆ ತಾಯಿ ಆಗುವುದು ಒಂದು ಭಾಗ್ಯ ಮತ್ತು ದೈವ ಕೃಪೆ. ಆರ್ಥಿಕ ಕಾರಣವಿಟ್ಟು ಒಂದು – ಎರಡು ಮಗುವಿಗೆ ನಾವು ಸೀಮಿತಗೊಳಿಸುತ್ತೇವೆ. ಆದರೆ ಅನಿಯಮಿತವಾಗಿ ಎಲ್ಲವನ್ನು ಕೊಡುತ್ತೇವೆ. ಮಕ್ಕಳು ಆಟಿಕೆ, ಮೊಬೈಲ್‌ಗಳಲ್ಲಿ ಮಗ್ನರಾಗುತ್ತಾರೆ. ಅವರಿಗೆ ನಿಜವಾಗಿಯೂ ಬೇಕಾಗಿರೋದು ಸಮಯ. ಮಕ್ಕಳಿಗೆ ಹೆತ್ತವರು ಸಮಯ ಕೊಟ್ಟಲ್ಲಿ ಸಹಜವಾಗಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ರೂಪುಗೊಳ್ಳಲು ಸಾಧ್ಯ ಎಂದು ಉಡುಪಿ ಧರ್ಮಪ್ರಾಂತ್ಯದ ದಿವ್ಯಜ್ಯೋತಿ ಸಂಸ್ಥೆಯ ನಿರ್ದೇಶಕ ಫಾ | ಸಿರಿಲ್ ಲೋಬೋ ಹೇಳಿದರು.

ಅವರು ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಶಿಕ್ಷಕ – ರಕ್ಷಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರು ಆದ ಫಾ |ಡಾ | ರೋಕ್ ಡಿಸೋಜ ಮಾತನಾಡಿ ನಮ್ಮ ಸಂಸ್ಥೆಯು ಶಿಸ್ತು , ಶಿಕ್ಷಣ ಮತ್ತು ಸ್ವಚ್ಚತೆಗೆ ಅದ್ಯತೆ ನೀಡುತ್ತಾ ಬಂದಿದೆ. ಸತತವಾಗಿ ಆರನೇ ಬರಿ ನಾವು ಹತ್ತನೇ ತರಗತಿಯ ಪಬ್ಲೀಕ್ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶ ಪಡೆದಿರುತ್ತೇವೆ ಮತ್ತು ಬ್ರಹ್ಮಾವರ ತಾಲೂಕಿನಲ್ಲೇ ನಮ್ಮ ಸಂಸ್ಥೆ ಪ್ರಥಮ ಸ್ಥಾನದಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಾದ ಕಾರ್ತಿಕೇಯ, ನವ್ಯಾ, ಭರತ್, ಆದಿತ್ಯ, ಮೇಧಿನಿ ೨೦೨೨-೨೩ ಸಾಲಿನ ವರದಿಯನ್ನು ಸಭೆಗೆ ವಿನೂತನವಾಗಿ ಮಂಡಿಸಿದರು. ೨೦೨೩-೨೪ ಸಾಲಿಗೆ ತರಗತಿವಾರು ಹೊಸ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು. ಶಾಲಾ ಬೆಳ್ಳಿಹಬ್ಬದ ಸಂದರ್ಭ ಶ್ರಮಿಸಿದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಡಾ ಕೀರ್ತಿ ಉಪಾಧ್ಯಕ್ಷ ಕೊನ್ರಾರ್ಡ್ ಕ್ರಾಸ್ಟೋರವರನ್ನು ಅಭಿನಂದಿಸಲಾಯಿತು. ಮುಖ್ಯ ಶಿಕ್ಷಕಿಯಾಗಿ ಅಧಿಕಾರ ಸ್ವೀಕರಿಸಿದ ಧರ್ಮಭಗಿನಿ ಸಿ ಅನ್ಸಿಲ್ಲಾ ಡಿಮೆಲ್ಲೋರವರನ್ನು ಸಂಘದ ಕಾರ್ಯದರ್ಶಿ ವನೀತಾ ಫರ್ನಾಂಡಿಸ್ ಪರಿಚಯಿಸಿ ಸ್ವಾಗತಿಸಿದರು. ಶಿಕ್ಷಕ ಆಲ್ವಿನ್ ದಾಂತಿ ನಿರೂಪಿಸಿ ಶಿಕ್ಷಕಿ ಸಫಿನಾ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.