Skip to main content
www.kallianpur.com | Email : kallianpur7@gmail.com | Mob : 9741001849

ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯ ಮಕ್ಕಳ ಹೆತ್ತವರ ಸಭೆಯಲ್ಲಿ “ಪರೀಕ್ಷೆ ತಯಾರಿಯಲ್ಲಿ ಪೋಷಕರ ಪಾತ್ರ”

By February 15, 2024Kannada News
kallianpurdotcom: 9741001849

ಉಡುಪಿ: ಶಿಕ್ಷಣ ಸಂಸ್ಥೆ, ಶಿಕ್ಷಣ ಇಲಾಖೆ, ಹೆತ್ತವರು, ಸಮಾಜ ಎಲ್ಲವೂ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳ ಒತ್ತಡವನ್ನು ದುಪ್ಪಟ್ಟುಗೊಳಿಸುತ್ತದೆ. ಮಗು ಮೊದಲೇ ಒತ್ತಡದಲ್ಲಿರುವಾಗ ನಮ್ಮ ನಿರೀಕ್ಷೆ ಮತ್ತು ಅಪೇಕ್ಷೆಗಳ ಹಂಬಲವನ್ನು ಅವರ ಮೇಲೆ ಹೇರದೆ ಲವಲವಿಕೆಯಿಂದ ಪರೀಕ್ಷೆಗಳಿಗೆ ಸಿದ್ದವಾಗಲು ನೆರವಾಗಬೇಕು. ಮಕ್ಕಳಿಗೆ ಪರೀಕ್ಷೆಗಳನ್ನು ಸಂಭ್ರಮಿಸಲು ಬಿಡಿ ಹೊರೆಯನ್ನಾಗಿಸಬೇಡಿ ಎಂದು ಎಸ್.ಎಮ್.ಎಸ್ ಆಂಗ್ಲ ಶಾಲೆಯ ಪ್ರಾಂಶು ಪಾಲೆ ಖ್ಯಾತ ರಂಗಕರ್ಮಿ ಅಭಿಲಾಷ. ಎಸ್ ಹೇಳಿದರು.

ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯ ಮಕ್ಕಳ ಹೆತ್ತವರ ಸಭೆಯಲ್ಲಿ “ಪರೀಕ್ಷೆ ತಯಾರಿಯಲ್ಲಿ ಪೋಷಕರ ಪಾತ್ರ” ವಿಷಯದ ಮೇಲೆ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮೌಂಟ್ ರೋಸರಿ ಚರ್ಚಿನ ಸಹಾಯಕ ಧರ್ಮಗುರು ವಂದನೀಯ ಓಲಿವರ್ ನಜ್ರತ್ ಮಾತನಾಡಿ ದೇವರು ಪ್ರತಿ ಯೋರ್ವನಿಗೂ ಒಂದು ಭವಿಷ್ಯವನ್ನು ನಿರ್ಮಿಸಿದ್ದಾನೆ. ಆ ಭವಿಷ್ಯವನ್ನು ರೂಪಿಸಲು ಶಿಕ್ಷಕರೊಂದಿಗೆ ಪೋಷಕರು ಸಹಕರಿಸಬೇಕು. ಮಕ್ಕಳನ್ನು ಅಂಕಗಳನ್ನು ಉತ್ಪಾದಿಸುವ ಯಂತ್ರಗಳನ್ನಾಗಿ ಮಾಡದೆ ಮಾನವೀಯತೆಯ ಮಂತ್ರ ವನ್ನು ಪಠಿಸುವ ಉತ್ತಮ ನಾಗರಿಕರನ್ನಾಗಿ ಪರಿವರ್ತಿಸಿ ಎಂದು ಹೇಳಿದರು.

ಶಿಕ್ಷಕ ಆಲ್ವಿನ್ ದಾಂತಿ ಶಾಲೆಯಲ್ಲಿ ನಡೆಸಿದ ಎರಡು ಪೂರ್ವಸಿದ್ದತಾ ಪರೀಕ್ಷೆಗಳ ಫಲಿತಾಂಶದ ಮೌಲ್ಯಮಾಪನೆ ಮಾಡಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಆನ್ಸಿಲ್ಲಾ ಸ್ವಾಗತಿಸಿದರು. ಜಾನೆಟ್ ನಿರೂಪಿಸಿ ಲವೀನಾ ವಂದಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.