Skip to main content
www.kallianpur.com | Email : kallianpur7@gmail.com | Mob : 9741001849

ಸಿದ್ಧಯೋಗಿ ಗುರುದೇವ್ ಬಾಬಾ ಶ್ರೀ ಕಾಳಿದಾಸ್ ಮಹಾರಾಜ್ ಶ್ರೀ ಶಿವಶಕ್ತಿ ಬಾಬಾ ಮುಂಬಯಿ ಭೇಟಿ.

By September 20, 2023Mumbai News
kallianpurdotcom: 20/09/23

ಮುಂಬಯಿ (ಆರ್‌ಬಿಐ), ಸೆ.೨೦: ಹರ್ಯಾಣ ಛೋಟು ರಾಮ್ ನಗರದ ಕಾಳಿದಾಸ್ ಧಾಮ ಸಂಪ್ಲಾ ಆಶ್ರಮದ ಸಿದ್ಧಯೋಗಿ ಗುರುದೇವ್ ಬಾಬಾ ಶ್ರೀ ಕಾಳಿದಾಸ್ ಮಹಾರಾಜ್ ಶ್ರೀ ಶಿವಶಕ್ತಿ ಬಾಬಾ ಅವರು ಕಳೆದ ಮಂಗಳವಾರ ಶ್ರೀ ಗಣೇಶ ಚತುರ್ಥಿ ಶುಭಾವಸರದಿ ಮುಂಬಯಿಗೆ ಚರಣಸ್ಪರ್ಶಗೈದರು. ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾದರ್ಪಣೆಗೈದ ಬಾಬಾ ಅವರನ್ನು ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್.ಶೆಟ್ಟಿ(ಪಣಕಜೆ ಬೆಳ್ತಂಗಡಿ) ಪುಷ್ಪಮಾಲೆ ಯನ್ನಿತ್ತು ಭಕ್ತಿಪೂರ್ವಕವಾಗಿ ಬೃಹನ್ಮುಂಬಯಿಗೆ ಬರಮಾಡಿಕೊಂಡರು.

ಬಳಿಕ ಬಾಬಾ ಅವರು ವಿಜಯ್ ಶೆಟ್ಟಿ ಅವರ ಮಾಲಿಕತ್ವದ ವಿಮಾನ ನಿಲ್ದಾಣದ ಟರ್ಮಿನಲ್ ಒಂದರ ಬಾಬಾ’ಸ್ ಹಾಸ್ಪಿಟಾಲಿಟಿ ಆ್ಯಂಡ್ ಫುಡ್ ಸರ್ವಿಸಸ್ ಸಂಸ್ಥೆಗೆ ಭೇಟಿಯನ್ನಿತ್ತು ಆಶೀರ್ವಾಚನ ನೀಡಿದರು.

ಬಾಬಾಜೀ ಬಳಿಕ ಪ್ರಭಾದೇವಿ ಅಲ್ಲಿನ ಶ್ರೀ ಸಿದ್ಧಿವಿನಾಯಕ ಮಂದಿರಕ್ಕೆ ಚಿತ್ತೈಸಿ ವಿಶೇಷ ಪೂಜೆಗೈದರು. ಬಳಿಕ ಲಾಲ್‌ಬಾಗ್ ಕಾ ರಾಜಾ, ಕಿಂಗ್ ಸರ್ಕಲ್ ಅಲ್ಲಿನ ಜಿಎಸ್‌ಬಿ ಗಣಪತಿ ಮಂಡಳಗಳಿಗೆ ಭೇಟಿಯನ್ನಿತ್ತು ಶ್ರೀ ದೇವರ ದರ್ಶನಗೈದರು. ಬಾಬಾ ಅವರ ಆಗಮನದ ವೇಳೆ ಬಿಜೆಪಿ ಧಿರೀಣರುಗಳಾದ ಆಶೀಶ್ ಶೆಲ್ಹಾರ್, ಶಾಸಕ ಮೋಹನ್ ದೊಡಿಯಾ ಗುಜರಾತ್, ವಿಮಲ್ ಬೂಟ ಮತ್ತಿತರ ಗಣ್ಯರು, ಅಪಾರ ಭಕ್ತರು ಉಪಸ್ಥಿತರಿದ್ದರು.

ಶಾಂತಿ ಆಂಖಂಡ ಚತುರ್ ಚಂಡಿ ಮಹಾಯಾಗ ನಡೆಸಿದ ಬ್ರಾಹ್ಮಣರಲ್ಲೋರ್ವರಾದ ಶ್ರೀ ಬಾಬಾ ಕಾಳಿದಾಸ್ ಸುಮಾರು ನಾಲ್ಕು ದಶಕಗಳಿಂದ ಆಹಾರ ಏನನ್ನೂ ತಿನ್ನದೆ ದಿನಾ ಸೂರ್ಯೋದಯದ ಮುನ್ನ ಮತ್ತು ಸೂರ್ಯಾಸ್ತದ ವೇಳೆ ಬರೇ ಎರಡು ಬಾರಿ ಸೀಯಾಳ ನೀರನ್ನು ಮಾತ್ರ ತೆಗೆದುಕೊಳ್ಳತ್ತಾ ಬಾಳುವ ಸನ್ಯಾಸಿ ಎಂದೇ ಪ್ರಸಿದ್ಧರು. ಪ್ರಪಂಚದಾದ್ಯಂತ ೩೭ ಆಶ್ರಮಗಳನ್ನು ಹೊಂದಿ ಅಪಾರ ಭಕ್ತವೃಂದವುಳ್ಳ ಸನ್ಯಾಸಿ ಆಗಿದ್ದಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.