Skip to main content
www.kallianpur.com | Email : kallianpur7@gmail.com | Mob : 9741001849

ರಜತ ಸಂಭ್ರಮದಲ್ಲಿ ಶಶಿ ಕೇಟರಿಂಗ್ ಸಮೂಹ ಸಂಸ್ಥೆ ಬರೋಡದಲ್ಲಿ ಆಯೋಜಿಸಲಾದ ಶಶಿ ಪರಿವಾರ್ ಕ್ರಿಕೆಟ್ ಪಂದ್ಯಾಟ ೨೦೨೩.

By December 12, 2023Mumbai News
kallianpurdotcom: 12/12/23
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.೧೦: ರಾಷ್ಟ್ರದ ಪ್ರತಿಷ್ಠಿತ ಕ್ಯಾಟರಿಂಗ್ ಸರ್ವಿಸ್‌ಗಳಲ್ಲಿ ಪ್ರಸಿದ್ಧ ಮತ್ತು ಪ್ರತಿಷ್ಠಿತ ಎಂದೆಣಿಸಿದ ಶಶಿ ಕೇಟರಿಂಗ್ ಸರ್ವಿಸ್‌ನ ಸಂಸ್ಥೆಯು ರಜತ ಸಂಭ್ರಮದಲ್ಲಿದ್ದು ಆ ನಿಮಿತ್ತ ರಾಷ್ಟ್ರದಾದ್ಯಾಂತ ಸೇವಾ ನಿರತ ಸಂಸ್ಥೆಯ ನೌಕರವೃಂದಕ್ಕೆ ಏಕ ದಿನದ ಪಂದ್ಯಾಟವಾಗಿಸಿ ಶಶಿ ಪರಿವಾರ್ ಕ್ರಿಕೆಟ್ ಪಂದ್ಯಾಟ-೨೦೨೩ನ್ನು ಕಳೆದ ಭಾನುವಾರ ಗುಜರಾತ್ ರಾಜ್ಯದ ಬರೋಡಾ ಲಕ್ಷ್ಮಿ ವಿಲಾಸ್ ಅರಮನೆಯ ಬರೋಡ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಶಶಿ ಕೇಟರಿಂಗ್ ಸರ್ವಿಸ್ ಪ್ರೆವೇಟ್ ಲಿಮಿಟೆಡ್‌ನ ಸಂಸ್ಥಾಪಕ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ ಶಶಿಧರ ಬಿ.ಶೆಟ್ಟಿ (ಗುರುವಾಯನಕೆರೆ ಬೆಳ್ತಂಗಡಿ) ದೀಪ ಪ್ರಜ್ವಲಿಸಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿ ಸಂಸ್ಥೆಯು ಸಂಸ್ಥೆಯ ನೌಕರವೃಂದವು ನನ್ನ ಪಾಲಿನ ಪರಿವಾರವೇ ಸರಿ. ಇಂತಹ ಪಂದ್ಯಾವಳಿಗಳು ಸೌಹಾರ್ದತೆಯ ಅವಕಾಶಗಳಾ ಗಬೇಕು. ಪಂದ್ಯಾಟಗಳಿಂದ ತಮ್ಮೆಲ್ಲರಲ್ಲಿ ಶ್ರಮ ಹೊಸತನದ ಚಿಂತನೆ ಮೂಡುತ್ತಾ, ಭಾವೈಕ್ಯದ ಬಾಳು, ಸೇವಾ ಉತ್ಸಹಗಳಿಗೆ ಸ್ಪೂರ್ತಿಯಾಗಲಿ ಎಂದರು.

ತುಳು ಸಂಘ ಬರೋಡಾ ಇದರ ಗೌರವಾಧ್ಯಕ್ಷ ಬೆಳ್ಮಾಣ್ ದಯಾನಂದ ಬೋಂಟ್ರಾ (ಬರೋಡ), ತುಳು ಸಂಘ ಅಂಕಲೇಶ್ವರ ಅಧ್ಯಕ್ಷ ಶಂಕರ ಕೆ.ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಗುಜರಾತ್ ರಾಜ್ಯ ಘಟಕದ ಅಧ್ಯಕ್ಷ ಅಜಿತ್ ಶೆಟ್ಟಿ ಅಂಕ್ಲೇಶ್ವರ್, ತುಳು ಸಂಘ ಬರೋಡಾ ಸಂಸ್ಥೆಯ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಡಾ| ಶರ್ಮಿಳಾ ಎಂ.ಜೈನ್, ಸಮಾಜ ಸೇವಕ ಮಾಧವ ಶೆಟ್ಟಿ ಫರಂಗಿಪೇಟೆ ಮತ್ತಿತರ ಗಣ್ಯರು ಆಗಮಿಸಿ ಎಲ್ಲಾ ಪಂದ್ಯಾಟ ಮತ್ತು ಆಟಗಾರರಿಗೆ ಶುಭಾರೈಸಿದರು.

ರಾಷ್ಟ್ರಗೀತೆಯೊಂದಿಗೆ ಪಂದ್ಯಾಟ ಆರಂಭಿಸಲ್ಪಟ್ಟಿದ್ದು, ಸಂಜೆ ನಡೆಸಲ್ಪಟ್ಟ ಪಾರಿತೋಷಕ ವಿತರಣಾ ಕಾರ್ಯಕ್ರಮ ದಲ್ಲಿ ಶಶಿ ಸಮೂಹದ ನಿರ್ದೇಶಕಿ ಪ್ರಮಿಳಾ ಶಶಿಧರ ಶೆಟ್ಟಿ ಮತ್ತು ಮಾ| ಶೌರ್ಯ ಎಸ್.ಶೆಟ್ಟಿ ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಮತ್ತು ಆಟಗಾರರಿಗೆ ಅಭಿನಂದಿಸಿದರು.

ಪಬಿತ್ರಾ ಮೊಂಡಲ್ ನಾಯಕತ್ವದ ಶಶಿ ಪರಿವಾರದ ಸೂರತ್ ವಿಜೇತ ತಂಡವು ವಿಜೇತಗೊಂಡು ರೂಪಾಯಿ ೧,೦೦,೦೦೧ ನಗದು ಮತ್ತು ಟ್ರೋಫಿ ತನ್ನದಾಗಿಸಿತು. ಗುರು ಪೂಜಾರಿ ನಾಯಕತ್ವದ ಬರೋಡಾ ಸ್ಟ್ರೆಕರ್ ಶಶಿ ಪರಿವಾರ ತಂಡವು ೫೦,೦೦೧ ನಗದು ಮತ್ತು ಟ್ರೋಫಿಯೊಂದಿಗೆ ದ್ವಿತೀಯ (ರನ್ರ‍್ಸ್ ಅಪ್ ಮತ್ತು ಸುರೇಶ್ ಶೆಟ್ಟಿ ನಾಯಕತ್ವದ ದಹೇಜ್ ಶಶಿ ಪರಿವಾರದ ತಂಡವು ೨೫,೦೦೧ ನಗದು ಮತ್ತು ಟ್ರೋಫಿ ಯೊಂದಿಗೆ ತೃತೀಯ ಸ್ಥಾನ ತನ್ನದಾಗಿಸಿತು. ಗಣೇಶ್ ಶೆಟ್ಟಿ ಸರಣಿ ಶ್ರೇಷ್ಠ (ಮೆನ್ ಆಫ್ ದ ಟೂರ್ನಮೆಂಟ್) ಆಟಗಾರನಾಗಿ ರೂಪಾಯಿ ೧೦,೦೦೧ ಮತ್ತು ಫಲಕ ತನ್ನದಾಗಿಸಿದರು. ಸುನಿಲ್ ಎಸ್.ಶೆಟ್ಟಿ ಪಂದ್ಯಶ್ರೇಷ್ಠ (ಮ್ಯಾನ್ ಆಫ್ ದ ಮ್ಯಾಚ್), ಗೌರವಕ್ಕೆ ಪಾತ್ರರಾಗಿದ್ದು, ಸುರೇಶ್ ಪೂಜಾರಿ ಅತ್ಯುತ್ತಮ ಚೆಂಡು ಎಸೆತಗಾರನಾಗಿ (ಬೆಸ್ಟ್ ಬೌಲರ್) ಮತ್ತು ಸುನಿಲ್ ಜಿ.ಶೆಟ್ಟಿ ಅತ್ಯುತ್ತಮ ದಾಂಡಿಗನಾಗಿ (ಬೆಸ್ಟ್ ಬ್ಯಾಟ್ಸ್ಮೆನ್) ಆಗಿ ವಿಜೇತರಾದರು.

ಶಶಿ ಸಮೂಹದ ತೇಜಲ್ ಪಾಟೇಲ್, ಸಿಎ| ಪ್ರಶಾಂತ್ ಎಸ್.ಹೆಗ್ಡೆ ಕೌಡೂರು, ರವೀಂದ್ರ ಶೆಟ್ಟಿ, ಸುನೀಲ್ ಶೆಟ್ಟಿ, ಕಾರ್ತಿಕ್ ಗೌಡ ಮತ್ತಿತರರು ಹಾಜರಿದ್ದು, ನೀಲೇಶ್ ದುಬೆ ಮತ್ತು ಜಿನರಾಜ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಜಾರ್ಜ್ ಮಾಥೇವ್ ವ್ಯಾಖ್ಯಾನಕಾರನಾಗಿ (ಕಾಮೆಂಟರಿ) ಸಹಕರಿಸಿದರು. ಪಂದ್ಯಾಟದ ಪ್ರಧಾನ ಸಂಘಟಕ ಮದನ್‌ಕುಮಾರ್ ಮೂಡಿಗೆರೆ ವಂದಿಸಿದರು.

ನಾಡಿನ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಸಲಹಾ ಸಮಿತಿ ಸದಸ್ಯ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಗುಜರಾತ್ ರಾಜ್ಯ ಘಟಕದ ಪ್ರಧಾನ ಸಂಘಟಕ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯ ಆಗಿರುವ ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಗುರುವಾಯನಕೆರೆ ಮೂಲತಃ ಶಶಿಧರ ಬಿ.ಶೆಟ್ಟಿ ಹೆಮ್ಮೆಯ ಸುಪುತ್ರನಾಗಿದ್ದು ತೀರಾ ಸರಳ, ಸಜ್ಜನ ಬಂಟ ಉದ್ಯಮಿ ಆಗಿರುವರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.