Skip to main content
www.kallianpur.com | Email : kallianpur7@gmail.com | Mob : 9741001849

ಬರೋಡದ ತುಳು ಚಾವಡಿಯಲ್ಲಿ ಆಚರಿಸಲ್ಪಟ್ಟ ತುಳುವರ ನೂತನ ವರ್ಷ-ಬಿಸು ತುಳುವ ಸಂಸ್ಕ್ರತಿ ಪ್ರತೀಕದ ಆದಿಯೇ ಬಿಸು : ದಯಾನಂದ ಬೋಂಟ್ರಾ.

By April 16, 2024Mumbai News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಎ.೧೫: ಗುಜರಾತ್ ರಾಜ್ಯದ ಬರೋಡ ಇಲ್ಲಿ ಸೇವಾನಿರತ ತುಳು ಸಂಘ ಬರೋಡಾ ಮಹಾನಗರದಲ್ಲಿನ ಇಂಡಿಯಾ ಬುಲ್ಸ್ ಮೆಘಾ ಮಾಲ್‌ನಲ್ಲಿ ತುಳು ಸಂಘ ಬರೋಡಾ ನಿರ್ಮಿತ ವಿಶ್ವದ ಪ್ರಪ್ರಥಮ ಹಾಗೂ ಏಕೈಕ ತುಳು ಚಾವಡಿಯಲ್ಲಿ ಕಳೆದ ಭಾನುವಾರ ಬಿಸು-ಯುಗಾದಿ ತುಳುವರ ನೂತನ ವರ್ಷ ವಿಜೃಂಭನೆ ಯಿಂದ ಆಚರಿಸಿತು.

ತುಳು ಸಂಘ ಬರೋಡ ಇದರ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಬೆಳ್ಮಾಣ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯ ಕ್ರಮ ನಡೆಸಲ್ಪಟ್ಟಿದ್ದು, ಮುಖ್ಯ ಅತಿಥಿಯಾಗಿ ಜೆ.ಎಸ್ ಆಯುರ್ವೇದ ಮಹಾವಿದ್ಯಾಲಯ ಬರೋಡಾ ಇದರ ಪ್ರಾಚಾರ್ಯೆ ಮತ್ತು ಇಎನ್‌ಟಿ ವಿಭಾಗದ ಮುಖ್ಯಸ್ಥೆ ಡಾ| ಗಂಗಾ ರಾಧಿಮಣಿ, ಗೌರವ ಅತಿಥಿಗಳಾಗಿ  ನಾಡಿಯಾಡ್ ಆಯುರ್ವೇದಿಕ್ ಕಾಲೇಜ್‌ನ ಅಂಗರಚನಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ಕೆ.ಸೀತಾರಾಮ್, ನಾಡಿಯಾಡ್ ಕಾಲೇಜ್‌ನ ಶಲ್ಯತಂತ್ರ ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ| ಸುಶೀಂದ್ರ ಆಚಾರ್ಯ ಉಪಸ್ಥಿತರಿದ್ದರು.

ಡಾ| ರಾಧಿಮಣಿ ಮಾತನಾಡಿ ಸಾಂಸ್ಕ್ರತಿಕ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೂಡುವಿಕೆಯಲ್ಲಿ ಇಂತಹ ವಾರ್ಷಿಕ ಹಬ್ಬಗಳನ್ನು ಆಯೋಜಿಸುವ ಮೂಲಕ ತುಳುವರ ಸಂಸ್ಕ್ರತಿ ಯನ್ನು ಉನ್ನತ ಮಟ್ಟದಲ್ಲಿ ಉಳಿಸುವಲ್ಲಿ ತುಳು ಸಂಘಗಳ ಪ್ರಯತ್ನ ಶ್ಲಾಘನೀಯ ಎಂದರು. ಸಾಂಪ್ರದಾಯಿಕ ಕಾರ್ಯ ಕ್ರಮಕ್ಕೆ ಆಹ್ವಾನಿಸಿದ್ದಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಿ ದರು ಮತ್ತು ತಮ್ಮ ಆಸ್ಪತ್ರೆಯಲ್ಲಿ ತುಳು ಕನ್ನಡಿಗರ ಸೇವೆ ಮಾಡುವ ಆಶಯ ಹೊಂದಿರುವೆ ಎಂದು ಡಾ|  ಸೀತಾ ರಾಮ್ ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ| ಸುಶೀಂದ್ರ ಆಚಾರ್ಯ ಮಾತನಾಡಿ ಇದು ಸ್ವಸಮಾಜದ ಸಂಸ್ಕ್ರತಿ ಸಾರುತ್ತಾ ಉಳಿಸಿ ಬೆಳೆಸುವ ಸಡಗರ ವಾಗಿದೆ. ಈ ಮೂಲಕ ಭಾವೀ ಪೀಳಿಗೆಗೆ ಪ್ರೇರಣೆ ನೀಡುವ ಉತ್ಸವ ಇದಾಗಿದೆ. ಮುಂದೆಯೂ ಇಂತಹ ಕಾರ್ಯಕ್ರಮ ಗಳಿಗೆ ಹಾಜರಾಗಲು ಆಹ್ವಾನಿಸುವಂತೆ ತಿಳಿಸಿದರು. ತುಳುವರ ನೂತನ ವಾರ್ಷಿಕ ಆರಂಭವೇ ಬಿಸುಪರ್ಬ. ತುಳುವ ಸಂಸ್ಕ್ರತಿಯ ಪ್ರತೀಕವಾದ ಈ ಹಬ್ಬದಲ್ಲಿ ತುಳು ಸಂಸ್ಕ್ರತಿ ಬಿಂಬಿತಗೊಂಡಿದೆ. ಹೊಸ ಸಂವತ್ಸರದ ಹಾದಿಯಲ್ಲಿ ನಾವೆಲ್ಲರೂ ಏಕತಾ ಮನೋಭಾವದಿಂದ ಜೊತೆ ಯಾಗಿ ಬದುಕು ಸಾಗಿಸಲು ಇಂತಹ ಹಬ್ಬಹರಿದಿನಗಳು ಪೂರಕ. ಸಾಮರಸ್ಯದ ಜೀವನ ಭವಿಷ್ಯತ್ತಿನ ಪೀಳಿಗೆಗೆ ಆದರನಿಯವಾ ಗಿಸೋಣ ಎಂದು ಬಿಸುಹಬ್ಬ ಬಗ್ಗೆ ಒಂದಿಷ್ಟು ನನ್ನ ಅನುಭವ ಮಾತುಗಳನ್ನು ಹಂಚಿಕೊಂಡ ಅಧ್ಯಕ್ಷೀಯ ಭಾಷಣ ದಲ್ಲಿ ದಯಾನಂದ ಬೋಂಟ್ರಾ ತಿಳಿಸಿದರು.

ರತ್ನಾ ಶೇಖರ್ ಶೆಟ್ಟಿ ಬಿಸು ಕುರಿತು ಮಾಹಿತಿ ನೀಡಿ ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಸಡಗರವನ್ನು ವರ್ಷಂಪ್ರತಿ ಆಚರಿಸುತ್ತಿದ್ದೇವೆ. ಆ ಮೂಲಕ ಪೂರ್ವಚಾರ ಮುಂದಿನ ಪೀಳಿಗೆಗೂ ತಿಳಿಪಡಿಸಲು ಸಹಾಯ ವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗೌರವ ಪ್ರಧಾನ ಕೋಶಾಧಿಕಾರಿ ಪಿ. ಬಾಲಚಂದ್ರ ಗೌಡ, ಸಂಯೋಜಕ ಮದನ್‌ ಕುಮಾರ್ ಮೂಡುಗೆರೆ, ಕೆ.ಮಾಧವ ಶೆಟ್ಟಿ ಪ್ರಮೀಳಾ ಶೆಟ್ಟಿ, ದಿನೇಶ್ ಶೆಟ್ಟಿ, ಡಾ| ಅನಿತಾ ಡಿ.ಶೆಟ್ಟಿ, ಡಾ| ಮಮತಾ, ಕೃಷ್ಣ ಶೆಟ್ಟಿ, ದಿನಕರ ಶೆಟ್ಟಿ, ರವಿ ಸಾಲಿಯಾನ್, ರೋಹಿದಾಸ್ ಪೂಜಾರಿ, ಕಾರ್ತಿಕ್ ಗೌಡ, ದಯಾನಂದ ಎಲ್.ಶೆಟ್ಟಿ ಸೇರಿದಂತೆ ಅಪಾರ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದು ಪೂಜಾಧಿಗಳಲ್ಲಿ ಪಾಲ್ಗೊಂಡರು.

ಮಹಿಳೆಯರು ಪ್ರಾರ್ಥನೆಯನ್ನಾಡಿದರು. ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗಧ್ಯಕ್ಷೆ ಡಾ| ಶರ್ಮಿಳಾ ಜೈನ್ ಧನ್ಯವಾದ ಸಮರ್ಪಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.