Skip to main content
www.kallianpur.com | Email : kallianpur7@gmail.com | Mob : 9741001849

ಬೃಹನ್ಮುಂಬಯಿಯಲ್ಲಿ ತುಳು-ಕನ್ನಡಿಗ ಸಂಘ ಸಂಸ್ಥೆಗಳಲ್ಲಿ ಸಮರ್ಪಿತ ಸೇವೆಗೈದ ಜಿ.ಟಿ ಆಚಾರ್ಯ-ಉಷಾ ಆಚಾರ್ಯ ದಂಪತಿಗೆ ಸೇವಾ ಗೌರವಾರ್ಪಣೆ.

By February 26, 2024Mumbai News
kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.೨೯: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ತುಳು-ಕನ್ನಡಿಗ ಸಂಘ ಸಂಸ್ಥೆಗಳ ಮುಖೇನ ಸುಮಾರು ಅರ್ಧ ಶತಮಾನದ ಸೇವೆಗೈದ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಸಸಮುದಾಯಕ್ಕೆ ೪೦ ವರ್ಷಗಳ ಸಮರ್ಪಿತ ಸೇವೆಯಿಂದ ನಿರೂಪಿಸಲ್ಪಟ್ಟು ಇದೀಗ ನಿವೃತ್ತ ಜೀವನಕ್ಕಾಗಿ ಹುಟ್ಟೂರಲ್ಲಿ ನೆಲೆಯಾಗುತ್ತಿರುವ ವಿಶ್ವಕರ್ಮ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಜಿ.ಟಿ ಆಚಾರ್ಯ ಮತ್ತು ಉಷಾ ಜಿ.ಆಚಾರ್ಯ ದಂಪತಿಗೆ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಸಂಸ್ಥೆಯು ಸೇವಾ ಗೌರವಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಇಂದಿಲ್ಲಿ ಶನಿವಾರ ಸಂಜೆ ಉಪನಗರ ದಹಿಸರ್ ಪೂರ್ವದಲ್ಲಿನ ಶ್ರೀ ಗೋಕುಲಾನಂದ ಹೋಟೆಲ್ ಸಭಾಗೃಹದಲ್ಲಿ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ರವೀಶ್ ಜಿ.ಆಚಾರ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಂಘದ ಮಾಜಿ ಅಧ್ಯಕ್ಷರಾದ ಮಹಾಬಲ ಎ. ಆಚಾರ್ಯ, ಡಾ| ಕೆ.ಮೋಹನ್, ಪೊಲ್ಯ ಉಮೇಶ್ ಶೆಟ್ಟಿ, ಡಾ| ಸುರೇಂದ್ರಕುಮಾರ್ ಹೆಗ್ಡೆ, ಕೃಷ್ಣ ವಿ. ಆಚಾರ್ಯ ವೇದಿಕೆಯಲ್ಲಿ ಆಸೀನರಾಗಿದ್ದು ಜಿ.ಟಿ ಆಚಾರ್ಯ ದಂಪತಿಗೆ ಸನ್ಮಾನಿಸಿ ಅಭಿವಂದಿಸಿದರು.

ಬೃಹನ್ಮುಂಬಯಿಯಲ್ಲಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗಿ ಯಾಗಿದ್ದು ಸದ್ಯ ತುಳುಕನ್ನಡದ ಮುದ್ರಣ ಕೆಲಸವನ್ನು ಮಾಡುತ್ತಾ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳೊಂದಿಗೆ ಸೇವೆ ಸಲ್ಲಿಸಿ ಜಿ.ಟಿ ಆಚಾರ್ಯ ಅವರು ಜಿಟಿ ಎಂದೇ ಪ್ರಸಿದ್ಧ ರೆಣಿಸಿದ್ದರು. ಉಷಾ ಆಚಾರ್ಯ ಕಸ್ಟಮ್ಸ್ ಸೂಪರಿನ್‌ ಟೆಂಡೆಂಟ್ ನಿವೃತ್ತರಾಗಿರುವರು.

ಮಾಜಿ ಅಧ್ಯಕ್ಷರುಗಳಾದ ಪಾದೂರು ಜನಾರ್ದನ ಆಚಾರ್ಯ, ಸದಾನಂದ ಎನ್.ಆಚಾರ್ಯ, ಗೌರವ ಕಾರ್ಯದರ್ಶಿ ಶರತ್ ಕುಮಾರ್ ಜಿ. ಆಚಾರ್ಯ, ಮಹಿಳಾ ವಿಭಾಗಧ್ಯಕ್ಷೆ ಸುಜಾತಾ ಜಿ.ಆಚಾರ್ಯ, ಪ್ರಭಾಕರ್ ಎಸ್.ಆಚಾರ್ಯ, ಶುಭಾ ಆಚಾರ್ಯ, ಉಪೇಂದ್ರ ಎ.ಆಚಾರ್ಯ, ವಿರಾ ಎಸ್.ಆಚಾರ್ಯ, ಪುರೋಹಿತ ಶಂಕರದಾಸ್ ಆಚಾರ್ಯ, ಕೆ.ಎಂ ಕೋಟ್ಯಾನ್ ಚಿತ್ರಾಪು, ಎಸ್.ಕೆ ಸುಂದರ್, ಬಿ.ಎ ನರಸಿಂಹ, ಜಿಟಿ ಸುಪುತ್ರಿ ಶ್ವೇತಾ ಪಿ.ಆಚಾರ್ಯ ಮತ್ತಿತರ ಗಣ್ಯರು ಜಿ.ಟಿ.ಎ ದಂಪತಿಯ ಸೇವೆಯನ್ನು ಪ್ರಶಂಸಿಸಿ ಅಭಿವಂದಿಸುತ್ತಾ ಭವಿಷ್ಯದ ಬಾಳಿಗೆ ಯಶಸ್ಸನ್ನು ಹಾರೈಸಿ ದರು.

ಕಾರ್ಯಕ್ರಮದಲ್ಲಿ ಸಿಎ| ಪ್ರಭಾಕರ್ ಶೆಟ್ಟಿ, ಕೆ.ಪಿ ಚಂದ್ರಯ್ಯ ಆಚಾರ್ಯ, ಶ್ರಿಧರ್ ಆಚಾರ್ಯ ಬೋರಿವಿಲಿ, ಜಿಟಿ ಅಳಿಯ ಪ್ರದೀಪ್  ಆಚಾರ್ಯ, ಕರ್ನಾಟಕ ವಿಶ್ವಕರ್ಮ ಸಂಘದ ಸೇರಿದಂತೆ ಹಾಲಿ, ಮಾಜಿ ಪದಾಧಿಕಾರಿಗಳು, ಸದಸ್ಯರನೇಕರು, ಉಪಸ್ಥಿತರಿದ್ದು ಜಿಟಿಎ ದಂಪತಿಗೆ ಅಭಿನಂದಿಸಿ ಶುಭಾರೈಸಿದರು.

ಜಿ.ಟಿ.ಎ ದಂಪತಿಗೆ ಇದು ಮುಂಬಯಿಯ ವಿದಾಯ, ಬೀಳ್ಕೊಡುಗೆ ಕಾರ್ಯಕ್ರಮವಲ್ಲ ಬದಲಾಗಿ ಅವರ ಅನನ್ಯ ಜನಸೇವೆಗಾಗಿನ ಸೇವಾ ಗೌರವಾರ್ಪಣೆ ಅಷ್ಟೇ ಎಂದು ಉಪಾಧ್ಯಕ್ಷ ಗಣೇಶ್ ಕುಮಾರ್ ತಿಳಿಸಿ ಜಿ.ಟಿ ಆಚಾರ್ಯ ದಂಪತಿಯ ಜೀವನ ವೈಶಿಷ್ಟವನ್ನು ಬಣ್ಣಿಸಿದರು.

ವಿಶ್ವಕರ್ಮ ಅಸೋಸಿಯೇಶನ್‌ನ ಕೋಶಾಧಿಕಾರಿ ಬಾಬುರಾಜ್ ಎಂ.ಆಚಾರ್ಯ, ಆಂತರಿಕ ಲೆಕ್ಕ ಪರಿಶೋಧಕ ಹರೀಶ್ ಜಿ. ಆಚಾರ್ಯ, ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ ವೀಣಾ ಎಸ್.ಆಚಾರ್ಯ, ಸಂಚಾಲಕಿಯರುಗಳಾದ ಅಮಿತಾ ಡಿ. ಆಚಾರ್ಯ ಮತ್ತು ರಾಜೇಶ್ವರಿ ಎಸ್.ಆಚಾರ್ಯ ಯುವ ವಿಭಾಗದ ಕಾರ್ಯಧ್ಯಕ್ಷ ಸಂದೇಶ್ ಜೆ. ಆಚಾರ್ಯ, ಉಪ ಕಾರ್ಯಧ್ಯಕ್ಷ ಅಶ್ವಥ್ ಎಸ್.ಆಚಾರ್ಯ, ಸಂಚಾಲಕರುಗಳಾದ ಸಿದೀಶ್ ಡಿ.ಆಚಾರ್ಯ ಮತ್ತು ಪ್ರಣವ್ ಆಚಾರ್ಯ ಸೇರಿದಂತೆ ಸಂಸ್ಥೆಯ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು, ಸದಸ್ಯ ರನೇಕರು ಉಪಸ್ಥಿತ ರಿದ್ದರು.

ಕು| ಶಿವಾನಿ ಹೆಚ್.ಆಚಾರ್ಯ ಇವರ ಗಣೇಶಸ್ತುತಿ ನೃತ್ಯದೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಯನ್ನಾಡಿದರು. ರವೀಶ್ ಆಚಾರ್ಯ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿ ಸಿದರು. ಗಣೇಶ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರಸಾದ್ ಆಚಾರ್ಯ ವಂದನಾರ್ಪಣೆಗೈದರು. ಮಕ್ಕಳು ನೃತ್ಯಗಳೊಂದಿಗೆ ಸಾಂಸ್ಕ್ರತಿಕ ವೈಭವ ಪ್ರಸ್ತುತ ಪಡಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.