Skip to main content
www.kallianpur.com | Email : kallianpur7@gmail.com | Mob : 9741001849

ಶ್ರೀ ವಿಶ್ವಪ್ರಸನ್ನತೀರ್ಥರಿಗೆ ಮುಂಬಯಿ ಭಕ್ತರ ಷಷ್ಟ್ಯಬ್ಧಿ ಶಾಂತಿ ಅಭಿವoದನೆ ರಾಮ ಮಂದಿರ ನನಸಾಗಿದ್ದು ರಾಮರಾಜ್ಯದ ಕನಸು ಬಾಕಿಯಿದೆ : ಪೇಜಾವರಶ್ರೀ

By December 4, 2023Mumbai News
kallianpurdotcom: 04/12/23
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.೦೩: ಶತಕೋಟಿ ಹಿಂದುಗಳ ರಾಮ ಮಂದಿರದ ಕನಸು ಇದೀಗ ನನಸಾಗಿದೆ. ಆದರೆ ರಾಮ ರಾಜ್ಯದ ಕನಸು ಬಾಕಿಯಿದ್ದು ಅದೂ ಶೀಘ್ರವಾಗಿ ನನಸಾಗಿಸಬೇಕಾಗಿದೆ. ಅದಕ್ಕಾಗಿ ಪ್ರಜೆಗಳೆಲ್ಲ ರಾಮನಂತಾ ಗಬೇಕು. ಅಂದರೆ ರಾಮಾಯಣ ಓದಿ ತಿಳಿದು ಶ್ರೀ ರಾಮ ಚಂದ್ರನ ಆದರ್ಶಗಳನ್ನು ರೂಢಿಸಿ ಬದುಕು ರೂಪಿಸಬೇಕಾಗಿದೆ. ಎಲ್ಲರ ಸುಖಕ್ಕೆ ಎಲ್ಲರ ಪ್ರಯತ್ನವೇ ಧರ್ಮವಾಗಿದೆ. ಬದುಕಿನ ಸೂತ್ರ  ತೋರಿಸಿ ಕೊಳ್ಳುವುದೇ ಧರ್ಮವಾಗಿದ್ದು, ಅದನ್ನೇ ಹಿಂದು ಧರ್ಮ ಪ್ರತಿ ಪಾದಿಸುತ್ತಿದೆ. ಅಂತಹ ಧರ್ಮ ಪಾಲಕರು ನಾವು ಗಳಾಗಬೇಕು. ರಾಮಭಕ್ತಿ ಬೇರೆಯಲ್ಲ, ದೇಶಭಕ್ತಿ ಬೇರೆಯಲ್ಲ. ಇವೆರಡನ್ನೂ ಮೈಗೂಡಿಸಿ ರಾಮಸೇವೆ ಗೈದು ಅಖಂಡ ಭಾರತದಲ್ಲಿ ನಾವೂ ರಾಮನಂತಗೋಣ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದಲ್ಲಿ (ಪೇಜಾವರ ಮಠ) ಶ್ರೀ ವಿಶ್ವಪ್ರಸನ್ನ ತೀರ್ಥರ ಷಷ್ಟ್ಯಬ್ದ ಸಮಿತಿ ಮುಂಬಯಿ, ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಪೇಜಾವರ ಮಠ ಮುಂಬಯಿ ಹಾಗೂ ಬೃಹನ್ಮುಂಬಯಿಯಲ್ಲಿನ ಶ್ರೀಗಳ ಭಕ್ತವೃಂದವು ಸಂಭ್ರಮಿಸಿದ ಶ್ರೀ ವಿಶ್ವಪ್ರಸನ್ನ ತೀರ್ಥರ ಅರ‍್ವತ್ತರ ಷಷ್ಟ್ಯಬ್ದ ಸಂಭ್ರಮ ಸಮಾರಂಭಕ್ಕೆ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ಹಿರಿಯ ಸಾಹಿತಿ ಡಾ| ಜಿ.ವಿ ಕುಲ್ಕರ್ಣಿ ಅವರ `ವಾಯು ಸ್ತುತಿ’ ಕೃತಿ ಬಿಡುಗಡೆ ಗೊಳಿಸಿ ನೆರೆದ ಸದ್ಭಕ್ತರನ್ನುದ್ದೇಶಿಸಿ ಅನುಗ್ರಹ ನುಡಿಗಳನ್ನಾಡಿದರು.

ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ| ಎ.ಎಸ್ ರಾವ್, ಷಷ್ಟ್ಯಬ್ದ ಮಹೋತ್ಸವ ಸಮಿತಿ ಮುಂಬಯಿ ಕಾರ್ಯಾಧ್ಯಕ್ಷ ಡಾ| ಎಂ.ಎಸ್ ಆಳ್ವ, ಕಾರ್ಯನಿರ್ವಹಣಾ ಅಧ್ಯಕ್ಷೆ ಅರುಣಾ ಎನ್.ಆಚಾರ್ಯ, ಉಪಾಧ್ಯಕ್ಷ ತೋನ್ಸೆ ಆನಂದ ಎಂ.ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮೀನ್, ಬಾಂಬೇ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ| ಸುರೇಂದ್ರ ಕೆ.ಶೆಟ್ಟಿ, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ರಘು ಎ.ಮೂಲ್ಯ, ಚಿಣ್ಣರ ಬಿಂಬ ರೂವಾರಿ ಪ್ರಕಾಶ್ ಬಿ.ಭಂಡಾರಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ಕನ್ನಡಿಗ ಕಲಾವಿದರ ಪರಿಷತ್ತು ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆೆ, ಹಿರಿಯ ಉದ್ಯಮಿಗಳಾದ ನಾಗೇಂದ್ರ ಆಚಾರ್ಯ, ಬಿ.ವಿವೇಕ್ ಶೆಟ್ಟಿ, ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್, ವಿದ್ವಾನ್ ಮಾಳ ಶ್ರೀನಿವಾಸ ಭಟ್, ಡಾ| ಜಿ.ವಿ ಕುಲ್ಕರ್ಣಿ, ಪೇಜಾವರ ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕರಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್, ನಿರಂಜನ್ ಗೋಗ್ಟೆ ಸೇರಿದಂತೆ ಪುರೋಹಿತ ಹಾಗೂ ಶಿಷ್ಯವೃಂದವು ವೇದಿಕೆಯಲ್ಲಿದ್ದು ರ‍್ವತ್ತರ ಜನ್ಮವರ್ಧಂತಿಯ ಶ್ರೀ ವಿಶ್ವಪ್ರಸನ್ನರಿಗೆ ಉಡುಪಿ ಹಾಗೂ ದೊಡ್ಡು ಮಲ್ಲಿಗೆ, ವರ್ಣಮಯ ಗುಲಾಬಿ ಹೂವುಗಳಿಂದ ಸೃಷ್ಟಿಸಿದ ಮನಾಕರ್ಷಕ ಪುಷ್ಪಪೇಟ ತೊಡಿಸಿ, ಮೊಗ್ಗು ಪದ್ಮತಾವರೆಗಳ ಪುಷ್ಪಹಾರ ಧರಿಸಿ, ಸ್ಮರಣಿಕೆಯನ್ನಿತ್ತು, ಆರ‍್ವತ್ತು ಕೆಜಿ ಗುಲಾಬಿ ಹೂವುಗಳ ಎಸಳುಗಳ ಪುಷ್ಪವೃಷ್ಠಿಗೈದು ಭಕ್ತಿ ಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶ್ರೀಗಳು ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ಪಡುಬಿದ್ರಿ ವಿ.ರಾಜೇಶ್ ರಾವ್, ಉಡುಪಿ ಶ್ರೀ ಪಲಿಮಾರು ಮುಂಬಯಿ (ಮೀರಾರೋಡ್) ಶಾಖೆಯ ವಾಸುದೇವ ಭಟ್, ಶ್ರೀ ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯ ವಿಷ್ಣು ಕಾರಂತ್ ಉದ್ದಬೆಟ್ಟು, ಶೇಖರ್ ಜೆ.ಸಾಲಿಯಾನ್ ಮತ್ತು ಸರಿತಾ ಎಸ್. ಸಾಲಿಯಾನ್ ದಂಪತಿಗೆ ಶಾಲು ಗೊದಿಸಿ ವಿಶೇಷವಾಗಿ ಗೌರವಿಸಿದರು.

ಕೃಷ್ಣೆಕ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ಸ್ಮರಿಸಿ ಸಂಭ್ರಮಕ್ಕೆ ಚಾಲನೆಯನ್ನೀಡಲಾಯಿತು. ಡಾ| ಎಂ.ಎಸ್ ಆಳ್ವ ಸ್ವಾಗತಿಸಿದರು. ಪೂರ್ಣಪ್ರಜ್ಞಾ ವಿದ್ಯಾಪೀಠದ ವಿದ್ಯಾರ್ಥಿಗಳ ವೇದಘೋಷ ಹಾಗೂ ಆನಂದ ತೀರ್ಥ ಮತ್ತು ಸತ್ಯವೀರ ರಾವ್ ಅವರ ಕೊಳಲು ನೀನಾದ ದೊಂದಿಗೆ ಸಮಾರಂಭ ಆದಿಗೊಂಡಿತು. ಷಷ್ಟ್ಯಬ್ದ ಸಮಿತಿ ಜೊತೆ ಕಾರ್ಯದರ್ಶಿ ರಾಘವೇಂದ್ರ ಜಮದಗ್ನಿ ಪ್ರಸ್ತಾವನೆಗೈದರು. ವಿದ್ವಾನ್ ಕೆ.ಕೃಷ್ಣರಾಜ ತಂತ್ರಿ ಅಭಿನಂದನಾ ಭಾಷಣಗೈದರು. ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪರೇಲ್ ಶ್ರೀನಿವಾಸ ಭಟ್ ಸೇರಿದಂತೆ ಮುಂಬಯಿ ಅಲ್ಲಿನ ವಿವಿಧ ಮಠ-ಮಂದಿರ, ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು, ಶ್ರೀಪಾದರ ಭಕ್ತ ಬಳಗ ಪಾಲ್ಗೊಂಡು ಶ್ರೀಪಾದರಿಗೆ ಅಭಿನಂದಿಸಿದ್ದು ಸ್ವಾಮೀಜಿ ಅವರು ಮಂತ್ರಾಕ್ಷತೆಯನ್ನಿತ್ತು ಹರಸಿದರು. ಚಿಣ್ಣರ ಬಿಂಬ ಸಾಂತಾಕ್ರೂಜ್ ಶಾಖೆಯ ಪುಟಾಣಿಗಳು ಭಜನೆ ಹಾಡಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ವಿಶ್ವನಾಥ್ ಶೆಟ್ಟಿ ಮಾಹಿಮ್ ಬಳಗವು `ಭಕ್ತಿ ಲಹರಿ’ ಸಂಗೀತ ಪ್ರಸ್ತುತ ಪಡಿಸಿತು. ತೀರ್ಥಪ್ರಸಾದ ಮತ್ತು ಅನ್ನಸಂತರ್ಪಣೆಯೊಂದಿಗೆ ಸಮಾರಂಭ ಕೊನೆಗೊಂಡಿತು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.